ಮಂಕಡಿಂಗ್: ಇದೇ ಮೊದಲು ಇದೇ ಕೊನೆ ಎಂದು ಖಡಕ್ ವಾರ್ನಿಂಗ್ ಕೊಟ್ಟ ಅಶ್ವಿನ್

Suvarna News   | Asianet News
Published : Oct 07, 2020, 03:07 PM ISTUpdated : Oct 07, 2020, 08:42 PM IST
ಮಂಕಡಿಂಗ್: ಇದೇ ಮೊದಲು ಇದೇ ಕೊನೆ ಎಂದು ಖಡಕ್ ವಾರ್ನಿಂಗ್ ಕೊಟ್ಟ ಅಶ್ವಿನ್

ಸಾರಾಂಶ

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಉಳಿದ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಮಂಕಡಿಂಗ್ ವಿಚಾರವಾಗಿ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಅ.07): ನಾನ್‌ ಸ್ಟ್ರೈಕ್‌ನಲ್ಲಿ​ರುವ ಬ್ಯಾಟ್ಸ್‌ಮನ್‌ಗಳು ಬೌಲ್‌ ಮಾಡುವ ಮೊದಲೇ ಕ್ರೀಸ್‌ ಬಿಡ​ದಂತೆ ಡೆಲ್ಲಿ ಕ್ಯಾಪಿ​ಟಲ್ಸ್‌ ಸ್ಪಿನ್ನರ್‌ ರವಿಚಂದ್ರನ್ ಅ​ಶ್ವಿನ್‌ ಮತ್ತೊಮ್ಮೆ ಎಚ್ಚ​ರಿ​ಸಿ​ದ್ದಾರೆ. 

"

ಸೋಮ​ವಾರ ಆರ್‌ಸಿಬಿ ವಿರು​ದ್ಧದ ಪಂದ್ಯ​ದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆ್ಯರೋನ್‌ ಫಿಂಚ್‌ ಮುಂಚಿತವಾಗಿಯೇ ಕ್ರೀಸ್‌ ಬಿಟ್ಟಾಗ ಅಶ್ವಿನ್‌, ಮಂಕ​ಡಿಂಗ್‌ ಮೂಲಕ ರನೌಟ್‌ ಮಾಡ​ಲಿಲ್ಲ. ಪಂದ್ಯದ ಬಳಿಕ ಅಶ್ವಿನ್‌, ‘ಇದು ಮೊದಲ ಹಾಗೂ ಕೊನೆ ಎಚ್ಚ​ರಿಕೆ. ಆನಂತರ ನನ್ನನ್ನು ದೂರಬೇಡಿ’ ಎಂದು ಟ್ವೀಟ್‌ ಮಾಡಿ​ದ್ದಾರೆ. ಅಶ್ವಿನ್‌ರ ಈ ಟ್ವೀಟ್‌ ವೈರಲ್‌ ಆಗಿದೆ.

IPL 2020: ಡೆಲ್ಲಿ ದಾಳಿಗೆ ತತ್ತರಿಸಿದ RCB,ಕೊಹ್ಲಿ ಪಡೆಗೆ ಸೋಲಿನ ಶಾಕ್!

ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಜೋಸ್‌ ಬಟ್ಲರ್ ಅವರನ್ನು ಆರ್. ಅಶ್ವಿನ್ ಮಂಕಡ್‌ ರನೌಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಂಡ ಬಳಿಕ ತಂಡದ ಕೋಚ್ ರಿಕಿ ಪಾಂಟಿಂಗ್ ಹಾಗೂ ಸ್ಪಿನ್ನರ್ ಅಶ್ವಿನ್ ನಡುವೆ ಈ ಬಗ್ಗೆ ಚರ್ಚೆಯೂ ನಡೆದಿತ್ತು. ಈ ವೇಳೆ ಪಾಂಟಿಂಗ್, ಮಂಕಡಿಂಗ್ ಮಾಡದಂತೆ ಅಶ್ವಿನ್‌ಗೆ ತಿಳಿ ಹೇಳಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಿಂದ ಆರ್‌ಸಿಬಿ ಮ್ಯಾಚ್ ಪುಣೆಗೆ ಶಿಫ್ಟ್ ಮಾಡಲು ಬಿಸಿಸಿಐ ಮೇಲೆ ಮಹಾರಾಷ್ಟ್ರ ಒತ್ತಡ!
ಮುಸ್ತಾಫಿಜುರ್‌ ರಹಮಾನ್ ಕೆಕೆಆರ್‌ ತಂಡದಿಂದ ಗೇಟ್‌ಪಾಸ್; ಮೊದಲ ಸಲ ಮೌನ ಮುರಿದ ಬಾಂಗ್ಲಾದೇಶ ವೇಗಿ!