
ದುಬೈ(ಅ.07): ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡು ಈ ಆವೃತ್ತಿಯ ಐಪಿಎಲ್ನಿಂದ ಹೊರಬಿದ್ದ ಕಾರಣ, ಅವರ ಬದಲು ಸನ್ರೈಸರ್ಸ್ ಹೈದರಾಬಾದ್ ತಂಡ ಎಡಗೈ ವೇಗಿ ಪೃಥ್ವಿ ರಾಜ್ ಎರ್ರಾ ಅವರನ್ನು ಸೇರಿಸಿಕೊಂಡಿದೆ.
ಸದ್ಯದಲ್ಲೇ ಪೃಥ್ವಿ ರಾಜ್ ಎರ್ರಾ ಯುಎಇ ತಲುಪಲಿದ್ದಾರೆ. ಆಂಧ್ರ ಪ್ರದೇಶದ ಪೃಥ್ವಿ 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 39 ವಿಕೆಟ್ ಕಬಳಿಸಿದ್ದು, ಕಳೆದ ವರ್ಷ ಐಪಿಎಲ್ನಲ್ಲಿ ಕೆಕೆಆರ್ ಪರ ಆಡಿದ್ದರು. ತುಂಬಾ ಕುತೂಹಲಕಾರಿ ಸಂಗತಿಯೆಂದರೆ ಐಪಿಎಲ್ನಲ್ಲಿ ಪೃಥ್ವಿ ರಾಜ್ ಎರ್ರಾ ಏಕೈಕ ವಿಕೆಟ್ ಪಡೆದಿದ್ದು, ಅದು ಸನ್ರೈಸರ್ಸ್ ಹಾಲಿ ನಾಯಕ ಡೇವಿಡ್ ವಾರ್ನರ್ ಅವರದ್ದು ಎನ್ನುವುದು ಮತ್ತೊಂದು ವಿಶೇಷ.
ಅಕ್ಟೋಬರ್ 02ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಇಂಜುರಿಗೆ ತುತ್ತಾಗಿದ್ದರು. ಇದೀಗ ಭುವಿ ಸ್ಥಾನವನ್ನು 22 ವರ್ಷದ ಯುವ ಎಡಗೈ ವೇಗಿ ತುಂಬಲಿದ್ದಾರೆ.
ಗಾಯದ ಮೇಲೆ ಮತ್ತೊಂದು ಬರೆ; ಐಪಿಎಲ್ ಟೂರ್ನಿಯಿಂದ ಭುವನೇಶ್ವರ್ ಕುಮಾರ್ ಔಟ್..!
ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದಾಗಿ 13ನೇ ಆವೃತ್ತಿಯ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಫ್ರಾಂಚೈಸಿ ಹಾರೈಸುತ್ತದೆ. ಇನ್ನುಳಿದ ಪಂದ್ಯಗಳಿಗೆ ಭುವನೇಶ್ವರ್ ಕುಮಾರ್ ಸ್ಥಾನವನ್ನು ಪೃಥ್ವಿ ರಾಜ್ ಎರ್ರಾ ತುಂಬಲಿದ್ದಾರೆ ಎಂದು ಸನ್ರೈಸರರ್ಸ್ ಹೈದರಾಬಾದ್ ಫ್ರಾಂಚೈಸಿ ಟ್ವೀಟ್ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.