ಚುನಾವಣೆಯಲ್ಲಿ ಗೆಲ್ಲಲು ತಿರುಪತಿ ಲಡ್ಡು ವಿತರಣೆ!

Published : Feb 22, 2021, 03:06 PM IST
ಚುನಾವಣೆಯಲ್ಲಿ ಗೆಲ್ಲಲು ತಿರುಪತಿ ಲಡ್ಡು ವಿತರಣೆ!

ಸಾರಾಂಶ

ಆಂಧ್ರ​ಪ್ರ​ದೇಶದಲ್ಲಿ ಪಂಚಾ​ಯತ್‌ ಚುನಾ​ವ​ಣೆ​ ಘೋಷಣೆ| ಚುನಾವಣೆಯಲ್ಲಿ ಗೆಲ್ಲಲು ತಿರುಪತಿ ಲಡ್ಡು ವಿತರಣೆ!

ಚಿತ್ತೂ​ರು(ಫೆ.22): ಆಂಧ್ರ​ಪ್ರ​ದೇಶದಲ್ಲಿ ಪಂಚಾ​ಯತ್‌ ಚುನಾ​ವ​ಣೆ​ ಘೋಷಣೆ ಆಗಿರುವ ಬೆನ್ನಲ್ಲೇ, ಮುಖ್ಯ​ಮಂತ್ರಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎ​ಸ್‌​ಆ​ರ್‌ ಕಾಂಗ್ರೆಸ್‌ ಸರ್ಕಾ​ರ ಜನಕ್ಕೆ ತಿರು​ಪ​ತಿಯ ಪ್ರಸಾ​ದ​ದ ಲಡ್ಡು​ಗ​ಳನ್ನು ಆಮಿಷದ ರೂಪದಲ್ಲಿ ವಿತ​ರಿ​ಸುತ್ತಿದೆ ಎಂಬ ಆರೋಪ ಕೇಳಿ​ಬಂದಿದೆ.

ಸ್ಥಳೀಯ ಸಂಸ್ಥೆ​ಗಳ ಚುನಾ​ವಣೆ ಗೆಲು​ವಿ​ಗಾಗಿ ಜಗನ್‌ ಸರ್ಕಾ​ರವು ಇಡೀ ಆಡ​ಳಿತ ಯಂತ್ರ​ವನ್ನೇ ದುರು​ಪ​ಯೋ​ಗ​ಪ​ಡಿ​ಸಿ​ಕೊ​ಳ್ಳು​ತ್ತಿದೆ. ಮತದಾರರಿಗೆ ಬೇಕಾಬಿಟ್ಟಿಯಾಗಿ ತಿರುಪತಿ ಲಡ್ಡು ಹಂಚುತ್ತಿದೆ ಎಂದು ವಿಪಕ್ಷ ತೆಲುಗುದೇಶಂ ದೂರಿದೆ.

ಪಡಿ​ತರ ಪೂರೈ​ಸುವ ವಾಹ​ನ​ಗ​ಳಲ್ಲೇ ಲಡ್ಡು​ಗ​ಳನ್ನು ವಿತ​ರಿ​ಸ​ಲಾ​ಗು​ತ್ತಿದ್ದು, ವೈಎ​ಸ್‌​ಆ​ರ್‌ಪಿ ಪಕ್ಷಕ್ಕೆ ಮತ ಹಾಕು​ವಂತೆ ಸೂಚಿ​ಸ​ಲಾ​ಗು​ತ್ತಿ​ದೆ​ ಎಂದು ಟಿಡಿಪಿ ದೂರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್