ರಾಮಮಂದಿರಕ್ಕೆ ಮೋದಿ ಬದಲು ಯೋಗಿ ಶಂಕು?

Published : Jun 17, 2020, 01:18 PM ISTUpdated : Jun 17, 2020, 01:56 PM IST
ರಾಮಮಂದಿರಕ್ಕೆ ಮೋದಿ ಬದಲು ಯೋಗಿ ಶಂಕು?

ಸಾರಾಂಶ

ರಾಮಮಂದಿರಕ್ಕೆ ಮೋದಿ ಬದಲು ಯೋಗಿ ಶಂಕು?| ಜು.1ರಂದು ಕಾರ್ಯಕ್ರಮ ಸಂಭವ

ಅಯೋಧ್ಯೆ(ಜೂ.17): ಜುಲೈ 1ರ ಪವಿತ್ರ ‘ದೇವಶಯನಿ ಏಕಾದಶಿ’ಯಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಉದ್ದೇಶವನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹೊಂದಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭೂಮಿ ಪೂಜೆ ನೆರವೇರಿಸುವ ಸಾಧ್ಯತೆ ಇದೆ.

ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೂಮಿ ಪೂಜೆ ನೆರವೇರಿಸಲು ಕರೆತರುವ ಉದ್ದೇಶವನ್ನು ಟ್ರಸ್ಟ್‌ ಹೊಂದಿತ್ತು. ಆದರೆ ಮೋದಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗಿದೆ. ಹೀಗಾಗಿ ಆದಿತ್ಯನಾಥ್‌ ಅವರು ಭೂಮಿಪೂಜೆ ನೆರವೇರಿಸಿ ಮೋದಿ ಅವರ ಪರವಾಗಿ ಅಡಿಗಲ್ಲು ಇಡುವ ಸಾಧ್ಯತೆ ಇದೆ. ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಸಮಾರಂಭದಲ್ಲಿ ದಿಲ್ಲಿಯಿಂದಲೇ ಪಾಲ್ಗೊಳ್ಳುವ ಸಂಭವವಿದೆ ಎಂದು ಮೂಲಗಳು ಹೇಳಿವೆ.

ಅಯೋಧ್ಯೆ ರಾಮಮಂದಿರಕ್ಕೆ ಅಡಿಗಲ್ಲು ಮುಂದೂಡಿಕೆ: ಕೊನೆ ಕ್ಷಣದಲ್ಲಿ ಆಗಿದ್ದೇನು?

ಹೊಸ ಯೋಜನೆಯ ಪ್ರಕಾರ, ಮೋದಿ ಅವರು ದಿಲ್ಲಿಯಲ್ಲೇ ಅಡಿಗಲ್ಲಿಗೆ ಸಾಂಕೇತಿಕ ಪೂಜೆ ಮಾಡಿ, ಟ್ರಸ್ಟ್‌ನ ಸದಸ್ಯರಾದ ನೃಪೇಂದ್ರ ಮಿಶ್ರಾ ಅವರಿಗೆ ಅದನ್ನು ಹಸ್ತಾಂತರಿಸಲಿದ್ದಾರೆ. ಮಿಶ್ರಾ ಅವರು ಈ ಕಲ್ಲನ್ನು ತೆಗೆದುಕೊಂಡು ಅಯೋಧ್ಯೆಗೆ ಆಗಮಿಸಿ ಯೋಗಿ ಆದಿತ್ಯನಾಥ್‌ ಅವರಿಗೆ ನೀಡಲಿದ್ದಾರೆ. ಮೋದಿ ಅವರ ಪರ ಯೋಗಿ ಅವರು ಆ ಅಡಿಗಲ್ಲು ಇರಿಸಿ ಭೂಮಿಪೂಜೆ ನೆರವೇರಿಸಲಿದ್ದಾರೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!