ರೈಲು ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ: ಟ್ವೀಟ್‌ಗೆ ಸ್ಪಂದಿಸಿ ವೈದ್ಯರ ಕಳಿಸಿದ ರೈಲ್ವೆ ಇಲಾಖೆ

Published : Apr 05, 2023, 03:13 PM IST
ರೈಲು ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ  ಮಹಿಳೆ: ಟ್ವೀಟ್‌ಗೆ ಸ್ಪಂದಿಸಿ ವೈದ್ಯರ ಕಳಿಸಿದ ರೈಲ್ವೆ ಇಲಾಖೆ

ಸಾರಾಂಶ

ಗರ್ಭಿಣಿ ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಿದೆ ಮತ್ತು ಆಕೆಯ ಪತಿ ಸಹಾಯಕ್ಕಾಗಿ ಹುಡುಕುತ್ತಿದ್ದರೂ ಪ್ರಯೋಜನವಾಗಲಿಲ್ಲ. ನಾನು ಸ್ಥಳಕ್ಕೆ ಧಾವಿಸಿ ಅವರ ರೈಲು ಟಿಕೆಟ್ ನೀಡುವಂತೆ ಕೇಳಿದೆ. ನಾನು ಪಿಎನ್‌ಆರ್‌ ತೆಗೆದುಕೊಂಡೆ. ಟಿಕೆಟ್ ಮೇಲೆ ನಂಬರ್ ಪ್ರಿಂಟ್ ಮಾಡಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ. ತಕ್ಷಣ ವೈದ್ಯರು ಬಂದು ಮಹಿಳೆಗೆ ಚಿಕಿತ್ಸೆ ನೀಡಿದರು. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ. 

ಝಾನ್ಸಿ (ಏಪ್ರಿಲ್  5, 2023): ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ವೀರಾಂಗನ ಲಕ್ಷ್ಮೀಬಾಯಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲದೆ, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದೂ ತಿಳಿದುಬಂದಿದೆ. 

ಗರ್ಭಿಣಿ ಮತ್ತು ಆಕೆಯ ಪತಿ ದೆಹಲಿಯಿಂದ ದಾಮೋಹ್‌ಗೆ ಸೋಮವಾರ ರಾತ್ರಿ ಪ್ರಯಾಣಿಸುತ್ತಿದ್ದರು. ಮಹಿಳೆ ಹೆರಿಗೆ ನೋವು ಅನುಭವಿಸುತ್ತಿದ್ದು, ಯಾರೂ ಸಹಾಯ ಮಾಡಲು ಸಿದ್ಧರಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಬಳಿಕ, ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಮಿರ್ಜಾ ದಂಪತಿಯನ್ನು ನೋಡಿದ ತಕ್ಷಣ, ಅವರ ಟಿಕೆಟ್‌ನಲ್ಲಿ ಮುದ್ರಿಸಲಾದ ಪಿಎನ್‌ಆರ್ ಸಂಖ್ಯೆಯನ್ನು ನೀಡಿ ಸಹಾಯಕ್ಕಾಗಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ. 

ಇದನ್ನು ಓದಿ: ಮದ್ವೆಗೆ ಗಿಫ್ಟ್‌ ಕೊಟ್ಟ ಮ್ಯೂಸಿಕ್‌ ಸಿಸ್ಟಂನಲ್ಲಿ ಬಾಂಬ್‌..! ವಧುವಿನ ಎಕ್ಸ್ ಬಾಯ್‌ಫ್ರೆಂಡ್‌ ಅಂದರ್‌

ಇದಕ್ಕೆ ರೈಲ್ವೆ ಸಚಿವಾಲಯ ಸ್ಪಂದಿಸಿದ್ದು, 20 ನಿಮಿಷಗಳ ನಂತರ ವೈದ್ಯರ ತಂಡವು ಸ್ಥಳಕ್ಕೆ ಆಗಮಿಸಿ ಮಹಿಳೆಗೆ ಚಿಕಿತ್ಸೆ ನೀಡಿದೆ. ನಂತರ, ಗರ್ಭಿಣಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು ಎಂದು ತಿಳಿದುಬಂದಿದೆ. ಅಲ್ಲದೆ, ಹೆರಿಗೆಯ ಸಮಯದಲ್ಲಿ ಮಹಿಳೆಯನ್ನು ಮುಚ್ಚಲು ಕಂಬಳಿಗಳನ್ನು ಹಿಡಿದಿದ್ದರು. ತಾಯಿ ಮತ್ತು ಗಂಡು ಮಗುವನ್ನು ಈಗ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣ್ಣಿನ ಜ್ಯೂಸ್ ಮಾರಾಟಗಾರ ತನ್ವೀರ್ ಅವರ ತ್ವರಿತ ಪ್ರತಿಕ್ರಿಯೆಗಾಗಿ ದಂಪತಿ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದೂ ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮದ ಜತೆಗೆ ಮಾತನಾಡಿದ ತನ್ವೀರ್‌, "ಅವರು ರಾತ್ರಿ 11:30 ರ ಸುಮಾರಿಗೆ ಝಾನ್ಸಿಗೆ ಬಂದರು. ಗರ್ಭಿಣಿ ನೋವಿನಿಂದ ಬಳಲುತ್ತಿರುವುದನ್ನು ನಾನು ನೋಡಿದೆ ಮತ್ತು ಆಕೆಯ ಪತಿ ಸಹಾಯಕ್ಕಾಗಿ ಹುಡುಕುತ್ತಿದ್ದರೂ ಪ್ರಯೋಜನವಾಗಲಿಲ್ಲ. ನಾನು ಸ್ಥಳಕ್ಕೆ ಧಾವಿಸಿ ಅವರ ರೈಲು ಟಿಕೆಟ್ ನೀಡುವಂತೆ ಕೇಳಿದೆ. ನಾನು ಪಿಎನ್‌ಆರ್‌ ತೆಗೆದುಕೊಂಡೆ. ಟಿಕೆಟ್ ಮೇಲೆ ನಂಬರ್ ಪ್ರಿಂಟ್ ಮಾಡಿ ರೈಲ್ವೆಗೆ ಟ್ವೀಟ್ ಮಾಡಿದ್ದಾರೆ.ತ ಕ್ಷಣ ವೈದ್ಯರು ಬಂದು ಮಹಿಳೆಗೆ ಚಿಕಿತ್ಸೆ ನೀಡಿದರು. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹಣ್ಣಿನ ಜ್ಯೂಸ್‌ ಮಾರಾಟಗಾರ ಹೇಳಿದ್ದಾರೆ.

ಇದನ್ನೂ ಓದಿ: ಹಣವಿಲ್ಲದ್ದಕ್ಕೆ ಬೆಂಗಳೂರಿಂದ ಒಡಿಶಾಗೆ ನಡೆದೇ ಹೋದ ಕಾರ್ಮಿಕರು: 1000 ಕಿ.ಮೀ. ಹೋದವ್ರಿಗೆ ಸ್ಥಳೀಯರ ನೆರವು

ಹೆರಿಗೆಯ ಸಮಯದಲ್ಲಿ, ಮಹಿಳೆಯನ್ನು ಮುಚ್ಚಲು ಹೊದಿಕೆಗಳನ್ನು ಹಿಡಿದಿದ್ದರು. ಇದೀಗ ತಾಯಿ ಮತ್ತು ಗಂಡು ಮಗುವನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿ ಮೂವರನ್ನು ಬಲಿ ತೆಗೆದುಕೊಂಡ ಆರೋಪಿ ಶಾರುಖ್‌ ಸೈಫಿ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?