ವಿಕಿಪೀಡಿಯಾ ಎಡಿಟಿಂಗ್‌ ಅಪಾಯಕಾರಿ: ದೆಹಲಿ ಹೈಕೋರ್ಟ್‌

Published : Oct 27, 2024, 07:31 AM IST
ವಿಕಿಪೀಡಿಯಾ ಎಡಿಟಿಂಗ್‌ ಅಪಾಯಕಾರಿ: ದೆಹಲಿ ಹೈಕೋರ್ಟ್‌

ಸಾರಾಂಶ

ವಿಕಿಪೀಡಿಯಾದಲ್ಲಿ ಯಾರಾದರೂ ಎಡಿಟ್ ಮಾಡಬಹುದಾದ್ದರಿಂದ ಅದು ಅಪಾಯಕಾರಿ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಎಎನ್‌ಐ ನ್ಯೂಸ್‌ ಏಜೆನ್ಸಿಯನ್ನು 'ಕೇಂದ್ರ ಸರ್ಕಾರದ ಪ್ರಚಾರದ ಅಸ್ತ್ರ' ಎಂದು ಕರೆದ ವಿಕಿಪೀಡಿಯಾ ಎಡಿಟ್‌ ವಿರುದ್ಧ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿದೆ.

ನವದೆಹಲಿ: ಆನ್‌ಲೈನ್‌ ಎನ್‌ಸೈಕ್ಲೋಪೀಡಿಯಾ ಎಂದೇ ಖ್ಯಾತಿ ಪಡೆದಿರುವ ವಿಕಿಪೀಡಿಯಾದಲ್ಲಿನ ಮುಕ್ತ ಎಡಿಟಿಂಗ್‌ ಆಯ್ಕೆ ಅಪಾಯಕಾರಿ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಎಎನ್‌ಐ ನ್ಯೂಸ್‌ ಏಜೆನ್ಸಿಯ ವಿಕಿಪೀಡಿಯಾ ಪೇಜ್‌ನಲ್ಲಿ ಆ ನ್ಯೂಸ್‌ ಏಜೆನ್ಸಿಯನ್ನು ‘ಕೇಂದ್ರ ಸರ್ಕಾರದ ಪ್ರಚಾರದ ಅಸ್ತ್ರ’ ಎಂದು ಕರೆದು ಕೆಲವರು ಎಡಿಟ್‌ ಮಾಡಿದ್ದರು. ಅದರ ವಿರುದ್ಧ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿದೆ. ಶುಕ್ರವಾರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸುಬ್ರಮಣಿಯಮ್‌ ಪ್ರಸಾದ್ ಅವರು, ‘ಯಾರು ಬೇಕಾದರೂ ವಿಕಿಪೀಡಿಯಾ ಪೇಜ್‌ ತಿದ್ದಬಹುದೇ? ಎಲ್ಲರಿಗೂ ಕೈಯಾಡಿಸಲು ಮುಕ್ತವಾಗಿರುವುದಾದರೆ ಅದೆಂತಹ ಪೇಜ್‌’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅದಕ್ಕೆ ವಿವರಣೆ ನೀಡಿದ ವಿಕಿಪೀಡಿಯಾ ಪರ ವಕೀಲರು, ‘ವಿಕಿಪೀಡಿಯಾ ಪೇಜ್‌ ಸೃಷ್ಟಿ ಮಾಡುವವರು ಹಾಗೂ ಎಡಿಟ್‌ ಮಾಡುವವರು ಕಾನೂನಿಗೆ ಬದ್ಧರಾಗಿರಬೇಕಾಗುತ್ತದೆ. ತಾವು ಬರೆಯುವ ಎಲ್ಲಾ ಮಾಹಿತಿಗೂ ದಾಖಲೆ ಹಾಗೂ ಮೂಲವನ್ನು ಒದಗಿಸಬೇಕಾಗುತ್ತದೆ. ಇದು ಫೇಸ್‌ಬುಕ್‌ನಂತಹ ಸೋಷಿಯಲ್‌ ಮೀಡಿಯಾ ಪೇಜ್‌ ಅಲ್ಲ’ ಎಂದರು. ಆಗ ವಿಚಾರಣೆಯನ್ನು ಕೋರ್ಟ್‌ ಅ.28ಕ್ಕೆ ಮುಂದೂಡಿತು.

ಎಎನ್‌ಐ ನ್ಯೂಸ್‌ ಏಜೆನ್ಸಿಯನ್ನು ‘ಕೇಂದ್ರ ಸರ್ಕಾರದ ಪ್ರಚಾರ ಅಸ್ತ್ರ’ ಎಂದು ಎಡಿಟ್‌ ಮಾಡಿದ ಮೂವರ ಹೆಸರನ್ನು ಬಹಿರಂಗಪಡಿಸಬೇಕೆಂದು ಈ ಹಿಂದೆ ಹೈಕೋರ್ಟ್‌ ಹೇಳಿತ್ತು. ಅದರ ವಿರುದ್ಧ ವಿಕಿಪೀಡಿಯಾ ಮೇಲ್ಮನವಿ ಸಲ್ಲಿಸಿದೆ.

Explainer: ಏನಿದು ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ, ರಾಜ್ಯ ರಾಜಕಾರಣದಲ್ಲಿ ಯಾಕಿಷ್ಟು ಇಂಪಾರ್ಟೆಂಟ್‌!

ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನಿಲ್ಲಿಸಿ: ಮಸ್ಕ್‌ ಕರೆ
ಆನ್‌ಲೈನ್‌ ಎನ್‌ಸೈಕ್ಲೋಪೀಡಿಯಾ ಎಂದು ಜನಪ್ರಿಯವಾಗಿರುವ ವಿಕಿಪೀಡಿಯಾವನ್ನು ಎಡಪಂಥೀಯರು ನಿಯಂತ್ರಿಸುತ್ತಿದ್ದು, ಅದರ ದುರ್ಬಳಕೆಗೆ ಮುಕ್ತ ಅವಕಾಶವಿರುವ ಕಾರಣ ಅದಕ್ಕೆ ದೇಣಿಗೆ ನೀಡುವುದನ್ನು ನಿಲ್ಲಿಸುವಂತೆ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ತಮ್ಮ ಒಡೆತನದ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮಸ್ಕ್‌, ಅಮೆರಿಕದ ಸುದ್ದಿಸಂಸ್ಥೆ ಪೈರೆಟ್‌ ವೈರ್‌ನ ವರದಿಯನ್ನಾಧರಿಸಿ, ‘ವಿಕಿಪೀಡಿಯಾದ 40 ಸಂಪಾದಕರು ಸೇರಿಕೊಂಡು ಇಸ್ರೇಲ್‌ ಮೇಲೆ ಅಕ್ರಮದ ಗೂಬೆ ಕೂರಿಸುತ್ತಿದ್ದಾರೆ. ಇಸ್ಲಾಮಿಕ್‌ ಮೂಲಭೂತವಾದಿಗಳಿಗೆ ಅನುಕೂಲಕರವಾಗುವಂತೆ ವರ್ತಿಸುತ್ತಿದ್ದಾರೆ ಹಾಗೂ ಇಸ್ರೇಲ್-ಪ್ಯಾಲೆಸ್ತೀನ್‌ ಸಂಘರ್ಷದ ಕುರಿತಾದ ವ್ಯಾಖ್ಯಾನವನ್ನು ಬದಲಿಸಿ ಅದನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ವಿಕಿಪೀಡಿಯಾದ ಕೆಲ ಸಂಪಾದಕರು ತಮ್ಮ ವಿಶೇಷ ಅಧಿಕಾರ ಬಳಸಿ ಕೆಲ ವಿಷಯಗಳ ಕುರಿತ ವ್ಯಾಖ್ಯಾನವನ್ನು ಬದಲಿಸದಂತೆ ತಡೆ ಒಡ್ಡಿರುವ ಬಗ್ಗೆ ಭಾರತವೂ ಆರೋಪಿಸುತ್ತಲೇ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ