ಕೃಷಿ ಬಗ್ಗೆ ಒಲವು, 4000 ಕೋಟಿ ರೂ ಮೌಲ್ಯದ ಅರಮನೆಯಲ್ಲಿರುವ ಯುವರಾಜ ಮಹಾನಾರ್ಯಮನ್ ಯಾರು?

Published : Mar 07, 2025, 05:26 PM ISTUpdated : Mar 07, 2025, 05:28 PM IST
ಕೃಷಿ ಬಗ್ಗೆ ಒಲವು, 4000 ಕೋಟಿ ರೂ ಮೌಲ್ಯದ ಅರಮನೆಯಲ್ಲಿರುವ  ಯುವರಾಜ ಮಹಾನಾರ್ಯಮನ್ ಯಾರು?

ಸಾರಾಂಶ

ಸಿಂಧಿಯಾ ರಾಜವಂಶದ ಮಹಾನಾರ್ಯಮನ್, ರಾಜಕೀಯದಿಂದ ದೂರವಿದ್ದು ಕೃಷಿ ಕ್ಷೇತ್ರದಲ್ಲಿ ಮೈಮಂಡಿ ಎಂಬ ನವೋದ್ಯಮ ಸ್ಥಾಪಿಸಿದ್ದಾರೆ. ಯೇಲ್ ವಿಶ್ವವಿದ್ಯಾಲಯದ ಪದವೀಧರರಾದ ಇವರು, ಸಂಗೀತ ಮತ್ತು ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಗ್ವಾಲಿಯರ್ ಡಿವಿಷನ್ ಕ್ರಿಕೆಟ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾಗಿ, ಭಾರತ-ಪಾಕ್ ಶಾಂತಿ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದಾರೆ. 400 ಕೋಣೆಗಳ ಜೈ ವಿಲಾಸ್ ಮಹಲ್‌ನಲ್ಲಿ ವಾಸಿಸುವ ಇವರು, ಸಿಂಧಿಯಾ ಕುಟುಂಬದ ಪರಂಪರೆಯನ್ನು ಮುಂದುವರೆಸಿದ್ದಾರೆ.

ಪ್ರಸಿದ್ಧ ಸಿಂಧಿಯಾ ರಾಜವಂಶದಲ್ಲಿ ಜನಿಸಿದ ಮಹಾನಾರ್ಯಮನ್ ಅವರು ಐತಿಹಾಸಿಕ ಗತಕಾಲದ ಭಾರವನ್ನು ಹೊರುತ್ತಿರುವ ಉತ್ತರಾಧಿಕಾರಿ. ಅವರ ತಂದೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ದೇಶದ ರಾಜಕಾರಣದಲ್ಲಿ ಪ್ರಮುಖ ಹೆಸರು. ಆದರೆ ಮಹಾನಾರ್ಯಮನ್ ರಾಜಕೀಯವನ್ನು ಮೀರಿ ತಮ್ಮದೇ ಆದ ಗುರುತನ್ನು  ಕಂಡುಕೊಳ್ಳಲು ತನ್ನದೇ ಹಾದಿಯನ್ನು ಹಿಡಿದಿದ್ದಾರೆ.

ತಂದೆಯಂತೆಯೇ ಮಹಾನಾರ್ಯಮನ್ ಕೂಡ ದಿ ಡೂನ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಯೇಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಅವರು ತಮ್ಮ ಉದ್ಯಮಶೀಲತಾ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನೊಂದಿಗೆ ಕೆಲಸ ಮಾಡಿ ವೃತ್ತಿಪರ ಅನುಭವವನ್ನು ಪಡೆದರು.

4500ಕೋಟಿ ಮೌಲ್ಯದ ಅರಮನೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮಗಳ ಅದ್ಧೂರಿ ಲೈಫ್!

ಶಿಂಧೆ ರಾಜವಂಶ ಎಂದೂ ಕರೆಯಲ್ಪಡುವ ಸಿಂಧಿಯಾ ರಾಜವಂಶವು ಗ್ವಾಲಿಯರ್ ರಾಜಪ್ರಭುತ್ವವನ್ನು ಆಳಿತು. ಆರಂಭದಲ್ಲಿ ಪೇಶ್ವೆ ಬಾಜಿರಾವ್ I ಅವರ ವೈಯಕ್ತಿಕ ಸೇವಕರಾಗಿ ಸೇವೆ ಸಲ್ಲಿಸಿದ್ದ ರಾಣೋಜಿ ಸಿಂಧಿಯಾ ಸ್ಥಾಪಿಸಿದ ಈ ಕುಟುಂಬವು ಪ್ರಾಮುಖ್ಯತೆಗೆ ಏರಿತು ಮತ್ತು 1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವವರೆಗೂ ಗ್ವಾಲಿಯರ್ ಅನ್ನು ಆಳಿತು.

ಸ್ವಾತಂತ್ರ್ಯದ ನಂತರ, ಮಹಾನಾರ್ಯಮನ್ ಅವರ ಮುತ್ತಜ್ಜ ಮಹಾರಾಜ ಜೀವಾಜಿರಾವ್ ಸಿಂಧಿಯಾ, ಗ್ವಾಲಿಯರ್ ಅನ್ನು ಭಾರತದ ಮಧ್ಯ ಭಾರತ ರಾಜ್ಯಕ್ಕೆ ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ನಂತರ ಅದು ಮಧ್ಯಪ್ರದೇಶದ ಭಾಗವಾಯಿತು. ರಾಜಪ್ರಭುತ್ವದ ಆಳ್ವಿಕೆಯ ಅಂತ್ಯದ ಹೊರತಾಗಿಯೂ, ಸಿಂಧಿಯಾ ಕುಟುಂಬವು ರಾಜಕೀಯ ಮತ್ತು ಸಮಾಜದಲ್ಲಿ ಪ್ರಭಾವಶಾಲಿಯಾಗಿ ಕುಟುಂಬವಾಗಿ ಇಂದಿಗೂ ಉಳಿದಿದೆ.

4000 ಕೋಟಿ ಮೌಲ್ಯದ ಅರಮನೆಯಲ್ಲಿದ್ದರೂ ಸ್ವಂತ ದುಡಿಮೆಗೆ ತರಕಾರಿ ಮಂಡಿ ತೆರೆದ ರಾಜವಂಶಸ್ಥ ಸಿಂಧಿಯಾ ಮಗ!

ತಂದೆ ಇರುವ ರಾಜಕೀಯ ಕ್ಷೇತ್ರದಿಂದ  ದೂರ ಸರಿದು, ಮಹಾನಾರ್ಯಮನ್ ಕೃಷಿಯ ಮೇಲೆ ಗಮನ ಕೇಂದ್ರೀಕರಿಸಿ ನವೋದ್ಯಮ ಜಗತ್ತಿಗೆ ಕಾಲಿಟ್ಟರು. 2022 ರಲ್ಲಿ ಬೃಹತ್ ತರಕಾರಿ ವ್ಯಾಪಾರವನ್ನು ಆಧುನೀಕರಿಸುವ ಗುರಿಯನ್ನು ಹೊಂದಿದ ಅವರು ಕೃಷಿ ಉದ್ಯಮವಾದ ಮೈಮಂಡಿಯ ಸಹ-ಸ್ಥಾಪಕರಾದರು.

ಮೈಮಂಡಿ ತರಕಾರಿಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿ, ಪ್ಯಾಕ್ ಮಾಡಿ, ಜೈಪುರ, ನಾಗ್ಪುರ, ಗ್ವಾಲಿಯರ್ ಮತ್ತು ಆಗ್ರಾದಾದ್ಯಂತ ತಳ್ಳುಗಾಡಿ ಮಾರಾಟಗಾರರಿಗೆ ವಿತರಿಸುವ  ಕೆಲಸ ಮಾಡುತ್ತದೆ. ಕಂಪನಿಯು ಈಗಾಗಲೇ ತಿಂಗಳಿಗೆ 1 ಕೋಟಿ ರೂ. ಆದಾಯವನ್ನು ಗಳಿಸುತ್ತಿದೆ.   ಜುಲೈ 2023 ರಲ್ಲಿ, ಫಾರ್ಚೂನ್ ವರದಿಯ ಪ್ರಕಾರ, ಈ ನವೋದ್ಯಮವು 4.2 ಕೋಟಿ ರೂ.ಗಳ ಲಾಭ ಪಡೆದಿದೆ. 

ಉದ್ಯಮದ ಹೊರತಾಗಿ, ಮಹಾನಾರ್ಯಮನ್ ಸಂಗೀತ ಮತ್ತು ಸಂಸ್ಕೃತಿಯ ಬಗ್ಗೆ  ಅತೀವ ಒಲವು ಹೊಂದಿದ್ದಾರೆ. ಸಂಗೀತ ಪ್ರಿಯರಿಗಾಗಿ ವಿಶೇಷ ಕಾರ್ಯಕ್ರಮವಾದ ಕ್ಯಾಂಪ್‌ಬೆಲ್ ಸಂಗೀತ ಉತ್ಸವ ಮತ್ತು ಸಾಂಸ್ಕೃತಿಕ ಕೂಟವಾದ ಪ್ರವಾಸ್ ಅನ್ನು ಕೂಡ ಸ್ಥಾಪನೆ ಮಾಡಿದ್ದು,ಈ ಕಾರ್ಯಕ್ರಮಗಳಿಗೆ ಪ್ರವೇಶವು ಪ್ರೀಮಿಯಂ ಆಗಿದೆ. ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಶುಲ್ಕ ಕ್ರಮವಾಗಿ ರೂ 75,000 ರಿಂದ  2 ಲಕ್ಷ ರೂ ಆಗಿದೆ. ಆಧುನಿಕ ಮನರಂಜನೆಯನ್ನು ಸಾಂಸ್ಕೃತಿಕ ಆಚರಣೆಯಲ್ಲಿ ವಿಲೀನಗೊಳಿಸುವ  ಬಯಕೆಯನ್ನು  ಹೊಂದಿದ್ದಾರೆ.

ಮಹಾನಾರ್ಯಮನ್ ಅವರು ಕ್ರಿಕೆಟ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಗ್ವಾಲಿಯರ್ ಡಿವಿಷನ್ ಕ್ರಿಕೆಟ್ ಅಸೋಸಿಯೇಷನ್ ​​(GDCA) ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಶಾಂತಿ ನಿರ್ಮಾಣದ ಪ್ರಯತ್ನಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಕ್ರೀಡೆಗೂ ಮೀರಿದ ಬಂಧಕ್ಕೆ ನಾಂದಿ ಹಾಡಿದ್ದಾರೆ. ಇಂಡೋ-ಪಾಕ್ ಶಾಂತಿ ಉಪಕ್ರಮವಾದ ಕೋಶಿಶ್ ಮೂಲಕ , ಅವರು ಗಡಿಯಾಚೆಗಿನ ಸಂವಾದ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವ ಯುವ ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಇಷ್ಟು ಮಾತ್ರವಲ್ಲದೆ  ಪರಿಸರ ಸುಸ್ಥಿರತೆ ಮತ್ತು ಯುವ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ವ್ಯವಹಾರ ಮತ್ತು ಕ್ರೀಡೆಗೂ ಮೀರಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಮಹಾನಾರ್ಯಮನ್ ಗ್ವಾಲಿಯರ್‌ನಲ್ಲಿರುವ 400 ಕೋಣೆಗಳ ಜೈ ವಿಲಾಸ್ ಮಹಲ್ ಅರಮನೆಯಲ್ಲಿ ವಾಸಿಸುತ್ತಿದ್ದು, ಇದರ ಮೌಲ್ಯ 4,000 ಕೋಟಿ ರೂ.ಗಳಷ್ಟಿದೆ . ಈ ಅರಮನೆಯು ಸಿಂಧಿಯಾ ಕುಟುಂಬದ ಶಾಶ್ವತ ಪರಂಪರೆಯ ಸಂಕೇತವಾಗಿದೆ. ವಿಶ್ವದ ಅತಿದೊಡ್ಡ ಕಾರ್ಪೆಟ್ ಮತ್ತು ಸಾಂಪ್ರದಾಯಿಕ ದರ್ಬಾರ್ ಹಾಲ್ ಅನ್ನು ಒಳಗೊಂಡಿದೆ. 124,771 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಮಹಲು ಶ್ರೀಮಂತಿಕೆ ಮತ್ತು ಇತಿಹಾಸಕ್ಕೆ ಸಾಕ್ಷಿಯಾಗಿದೆ.

ಮಹಾನಾರ್ಯಮನ್ ಸಿಂಧಿಯಾ ಅವರ ಮುತ್ತಜ್ಜಿ ವಿಜಯ ರಾಜೇ ಸಿಂಧಿಯಾ ಅವರು ಭಾರತೀಯ ಜನಸಂಘ ಮತ್ತು ಬಿಜೆಪಿಯ ಪ್ರಮುಖ ನಾಯಕಿಯಾಗಿದ್ದರು.  ಅಜ್ಜ ಮಾಧವರಾವ್ ಸಿಂಧಿಯಾ ಒಂಬತ್ತು ಬಾರಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಕೇಂದ್ರ ಸಚಿವರಾಗಿದ್ದರು. ಮಾಧವರಾವ್ ಅವರ ಮಕ್ಕಳಾದ  ವಸುಂಧರಾ ರಾಜೇ ಮತ್ತು ಯಶೋಧರಾ ರಾಜೇ ಮತ್ತು ಅವರ ತಂದೆ ಗಮನಾರ್ಹ ಪ್ರಭಾವ ಹೊಂದಿರುವ ರಾಜಕೀಯ ನಾಯಕರು. ವಸುಂಧರಾ ರಾಜೇ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ