ಕೊರೋನಾ ನಿಯಂತ್ರಣಕ್ಕೆ ಭಾರತದ ಸಿಂಪಲ್ ಟೆಕ್ನಿಕ್ಸ್: ಭೇಷ್ ಎಂದ WHO

Suvarna News   | Asianet News
Published : Feb 06, 2021, 09:57 AM ISTUpdated : Feb 06, 2021, 10:47 AM IST
ಕೊರೋನಾ ನಿಯಂತ್ರಣಕ್ಕೆ ಭಾರತದ ಸಿಂಪಲ್ ಟೆಕ್ನಿಕ್ಸ್: ಭೇಷ್ ಎಂದ WHO

ಸಾರಾಂಶ

ಭಾರತದ ಸರಳ ಕೊರೋನಾ ಪರಿಹಾರಗಳಿಗೆ WHO ಭೇ‍‍ಷ್ | ದೇಶದ ಸಿಂಪಲ್ ಐಡಿಯಾಗಳೇ ರಕ್ಷಾ ಕವಚವಾಗಿದ್ದು ಹೇಗೆ..?  

ಸಂಪನ್ಮೂಲ ಹೆಚ್ಚಿರದಿದ್ದಾಗ, ಇರುವುದರಲ್ಲಿಯೇ ಹೊಂದಿಕೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿ ಭಾರತ ಎಕ್ಸ್‌ಪರ್ಟ್. ಕಡಿಮೆ ಖರ್ಚು, ಕಡಿಮೆ ಸಂಪನ್ಮೂಲ ಇರುವುದರಲ್ಲಿಯೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಭಾರತದ ಮಟ್ಟಿಗೆ ಕೊರೋನಾ ವಿಷಯದಲ್ಲೂ ಭಿನ್ನವಾಗಿರಲಿಲ್ಲ. ಕೊರೋನಾದಂತಹ ಡೆಡ್ಲೀ ವೈರಸ್ ಅಟಕಾಯಿಸಿಕೊಂಡ್ರೂ ಭಾರತ ಯಶಸ್ವಿಯಾಗಿ ಇದರ ವಿರುದ್ಧ ಹೋರಾಡುತ್ತಿದೆ.

ಇಸ್ರೇಲ್ ಕಂಡು ಹಿಡಿದಿದೆ ಹೊಸ ಮದ್ದು: ಕೊರೋನಾ ವೈರಸ್‌ಗೆ ಗುದ್ದು

ಜನಸಂಖ್ಯೆ ಹೆಚ್ಚಿರುವ, ಸುವ್ಯವಸ್ಥಿತ ವೈದ್ಯಕೀಯ ವ್ಯವಸ್ಥೆ ಇರದ ಭಾರತದಂಥ ದೇಶಕ್ಕೆ ಕೋವಿಡ್ ಸೋಂಕನ್ನು ನಿಯಂತ್ರಿಸುವುದು ಅಸಾಧ್ಯವೆಂದೇ ಪಾಶ್ಚಿಮಾತ್ಯ ದೇಶಗಳು ಪರಗಿಣಿಸಿದ್ದವು. ಅದೇನಾಯಿತೋ ಗೊತ್ತಿಲ್ಲ, ಸರಕಾರದ ದಿಟ್ಟ ಕ್ರಮಗಳಿಂದ ಕೊರೋನಾ ಓಡಿಸುವಲ್ಲಿ ದೇಶ ಬಹುತೇಕ ಯಶಸ್ವಿಯಾಗಿದೆ. 

ಅಷ್ಟೇ ಅಲ್ಲ ಲಸಿಕೆ ಕಂಡು ಹಿಡಿಯುವಲ್ಲಿಯೂ ಯಶಸ್ವಿಯಾಗಿದೆ. ಈಗಾಗಲೇ ಅನೇಕ ಬಾರಿ ಭಾರತದ ಕ್ರಮಕ್ಕೆ ಭೇಷ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಇದೀಗ ಮತ್ತೆ ನಮ್ಮ ದೇಶದ ಬೆನ್ನು ತಟ್ಟಿದೆ. ಮಹಾರಾಷ್ಟ್ರ ಹಾಗೂ ಕೇರಳ ಹೊರತುಪಡಿಸಿ, ಇತರೆ ರಾಜ್ಯಗಳಲ್ಲಿ ಕೋವಿಡ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಜೊತಗೆ ಲಸಿಕೆ ನೀಡುವ ಕಾರ್ಯವೂ ಭರದಿಂದ ಸಾಗುತ್ತಿದೆ.

ವೈರಸ್ ನಿಯಂತ್ರಣ ಜೊತೆಗೆ, ಲಸಿಕೆ ಪ್ರಯೋಗ ಸೋಂಕನ್ನು ಓಡಿಸುವಲ್ಲಿ ಯಶಸ್ವಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಡಾನೋಮ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು