
ನವದೆಹಲಿ (ನ. 04): ಗಾಂಧಿ ಕುಟುಂಬಕ್ಕೆ ಬಹುಕಾಲದಿಂದ ನಿಷ್ಠರಾಗಿದ್ದ ಪಂಕಜ್ ಶಂಕರ್ ಎಂಬ ಪತ್ರಕರ್ತರೊಬ್ಬರು, ಕಾಂಗ್ರೆಸ್ ಪಕ್ಷದ ದುಃಸ್ಥಿತಿಗೆ ಸೋನಿಯಾ ಗಾಂಧಿ ಅವರ ‘ಪುತ್ರ ಮೋಹ’ವೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಕುರಿತಂತೆ 13 ಕಂತುಗಳ ‘ವೆಬ್ ಸರಣಿ’ಯನ್ನು ಪ್ರಸಾರ ಮಾಡಲು ನಿರ್ಧರಿಸಿದ್ದಾರೆ.
ಮೋದಿ ಭೇಟಿ ವೇಳೆ ಮೊಬೈಲ್ ಕಸಿದಿದ್ದಕ್ಕೆ ಎಸ್ ಪಿ ಬಿ ಆಕ್ರೋಶ
ಪ್ರಮುಖ ವೆಬ್ಸೈಟ್ಗಳಲ್ಲಿ ಈ ಸರಣಿ ಇನ್ನು 3 ತಿಂಗಳಲ್ಲಿ ಪ್ರಸಾರವಾಗುವ ನಿರೀಕ್ಷೆಯಿದ್ದು, ರಾಹುಲ್ ಗಾಂಧಿ ಅವರ ವೈಫಲ್ಯಗಳನ್ನು ಎತ್ತಿ ತೋರಿಸಲಿದೆ. ಈ ಬಗ್ಗೆ ಮಾತನಾಡಿದ ಶಂಕರ್, ‘ಪ್ರಿಯಾಂಕಾ ವಾದ್ರಾ ಅವರಿಗೆ ಕಾಂಗ್ರೆಸ್ಗೆ ಪುನಶ್ಚೇತನ ನೀಡುವ ಎಲ್ಲ ಶಕ್ತಿ ಇದೆ. ಆದರೆ ಸೋನಿಯಾ ಅವರ ‘ಪುತ್ರ ಮೋಹ’ವು ಪ್ರಿಯಾಂಕಾ ಪದೋನ್ನತಿಗೆ ತಡೆ ಹಾಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಶಂಕರ್ ಅವರು ಇತ್ತೀಚಿನ ಲೋಕಸಭೆ ಚುನಾವಣೆ ವೇಳೆ ಪ್ರಿಯಾಂಕಾ ಅವರ ಮಾಧ್ಯಮ ಚಟುವಟಿಕೆಗಳ ಉಸ್ತುವಾರಿ ಹೊತ್ತಿದ್ದರು. ಅಲ್ಲದೆ, ಅವರ ಕಾರ್ಯಗಳ ಕುರಿತು ವಾಟ್ಸ್ಆ್ಯಪ್ ಗ್ರೂಪ್ನ ಅಡ್ಮಿನ್ ಕೂಡ ಆಗಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ‘ಪಕ್ಷಕ್ಕೂ ಶಂಕರ್ ಅವರಿಗೂ ಯಾವುದೇ ಅಧಿಕೃತ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ