ವಯನಾಡ್‌ ಲೋಕಸಭಾ ಕ್ಷೇತ್ರ ತೆರವು: ರಾಹುಲ್‌ ಗಾಂಧಿ ಮುಂದಿನ ಕಾನೂನು ಹಾದಿಗಳೇನು, ಅವರು ಕಳೆದುಕೊಳ್ಳುವುದೇನೇನು ನೋಡಿ..!

Published : Mar 25, 2023, 07:54 AM ISTUpdated : Mar 25, 2023, 10:15 AM IST
ವಯನಾಡ್‌ ಲೋಕಸಭಾ ಕ್ಷೇತ್ರ ತೆರವು: ರಾಹುಲ್‌ ಗಾಂಧಿ ಮುಂದಿನ ಕಾನೂನು ಹಾದಿಗಳೇನು, ಅವರು ಕಳೆದುಕೊಳ್ಳುವುದೇನೇನು ನೋಡಿ..!

ಸಾರಾಂಶ

ರಾಹುಲ್‌ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಕ್ಕೆ ಭಾರತೀಯ ಮೂಲಕ ಅಮೆರಿಕ ಸಂಸದ ರೋ ಖನ್ನಾ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಗಾಂಧಿ ತತ್ವಗಳು ಮತ್ತು ಭಾರತದ ಉನ್ನತ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಆದೇಶವನ್ನು ತಡೆಹಿಡಿಯುವ ಅಧಿಕಾರ ನಿಮಗಿದೆ ಮೋದಿ ಅವರೇ ಎಂದು ಅವರು ಹೇಳಿದ್ದಾರೆ.

ನವದೆಹಲಿ: ರಾಹುಲ್‌ ಗಾಂಧಿ ಪ್ರತಿನಿಧಿಸಿದ್ದ ವಯನಾಡ್‌ ಲೋಕಸಭಾ ಕ್ಷೇತ್ರ ತೆರವಾಗಿರುವುದನ್ನು ಲೋಕಸಭೆಯ ವೆಬ್‌ಸೈಟ್‌ನಲ್ಲಿ ನಮೂದು ಮಾಡಲಾಗಿದೆ. ಈ ಮೂಲಕ ಖಾಲಿಯಿದ್ದ 2 ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 3 ಎಂದು ತೋರಿಸಲಾಗುತ್ತಿದೆ. 2019 ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸಿ ರಾಹುಲ್‌ ಲೋಕಸಭೆಗೆ ಆಯ್ಕೆಯಾಗಿದ್ದರು. ಜಲಂಧರ್‌ ಕ್ಷೇತ್ರದ ಸಂಸದ ಕಾಂಗ್ರೆಸ್ಸಿನ ಸಂತೋಖ್‌ ಸಿಂಗ್‌ ನಿಧನದಿಂದ ಹಾಗೂ ಪ್ರಕರಣವೊಂದರಲ್ಲಿ ಎನ್‌ಸಿಪಿಯ ಮೊಹಮ್ಮದ್‌ ಫೈಸಲ್‌ ಪಿ.ಪಿ ಜೈಲು ಸೇರಿರುವ ಕಾರಣ ಲಕ್ಷದ್ವೀಪ ಕ್ಷೇತ್ರಗಳು ತೆರವಾಗಿದ್ದವು. ಇದೀಗ ಮಾನನಷ್ಟಪ್ರಕರಣದಲ್ಲಿ ಅನರ್ಹಗೊಂಡಿರುವ ರಾಹುಲ್‌ ಕ್ಷೇತ್ರ ಕೂಡ ತೆರವಾಗಿದೆ.

ರಾಹುಲ್‌ ಅನರ್ಹತೆಗೆ ಅಮೆರಿಕ ಸಂಸದ ವಿರೋಧ
ವಾಷಿಂಗ್ಟನ್‌: ರಾಹುಲ್‌ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಕ್ಕೆ ಭಾರತೀಯ ಮೂಲಕ ಅಮೆರಿಕ ಸಂಸದ ರೋ ಖನ್ನಾ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಗಾಂಧಿ ತತ್ವಗಳು ಮತ್ತು ಭಾರತದ ಉನ್ನತ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಆದೇಶವನ್ನು ತಡೆಹಿಡಿಯುವ ಅಧಿಕಾರ ನಿಮಗಿದೆ ಮೋದಿ ಅವರೇ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ರಾಹುಲ್‌ ಗಾಂಧಿ ವಿರುದ್ಧ ಯೋಜಿತ ವೈಯಕ್ತಿಕ ದಾಳಿ: ಗಾಂಧಿ ಕುಟುಂಬ ಆಪ್ತ ಸ್ಯಾಮ್‌ ಪಿತ್ರೋಡಾ ಆಕ್ರೋಶ

ರಾಹುಲ್‌ ಮುಂದಿನ ಕಾನೂನು ಹಾದಿಗಳೇನು?

  • ಮಾನಹಾನಿ ಕೇಸಲ್ಲಿ ಸೂರತ್‌ ಕೋರ್ಟ್ ತೀರ್ಪಿಗೆ ತಡೆ ಕೋರಿ ಸೆಶೆನ್ಸ್‌ ಕೋರ್ಚ್‌ಗೆ ಮೊರೆ
  • ಸೆಶೆನ್ಸ್‌ ಕೋರ್ಟ್‌ನಲ್ಲಿ ನೆರವು ಸಿಗದೇ ಹೋದಲ್ಲಿ ಉನ್ನತ ಕೋರ್ಚ್‌ ಮೆಟ್ಟಿಲೇರಬಹುದು
  • ಪ್ರಕರಣ ವಿಚಾರಣೆ ಹಂತದಲ್ಲಿದಾಗ, ಮಧ್ಯಂತರ ತಡೆ ಕೋರಿ ಮೇಲಿನ ಕೋರ್ಟ್ ಮೊರೆ
  • ಸಂವಿಧಾನದ 136ನೇ ವಿಧಿ ಅನ್ವಯ ಸುಪ್ರೀಂಕೋರ್ಟ್‌ಗೂಗೂ ಮೇಲ್ಮನವಿ ಸಲ್ಲಿಸಬಹುದು
  • ಅನರ್ಹತೆ ಪ್ರಶ್ನಿಸಿ ನೇರವಾಗಿ ರಾಷ್ಟ್ರಪತಿಗಳ ಬಳಿಗೂ ರಾಹುಲ್‌ ದೂರು ಸಲ್ಲಿಸಬಹುದು

ರಾಹುಲ್‌ ಏನೇನು ಕಳೆದುಕೊಳ್ಳುತ್ತಾರೆ?

  • ತಕ್ಷಣದಿಂದ ವಯನಾಡು ಲೋಕಸಭಾ ಕ್ಷೇತ್ರದ ಸದಸ್ಯತ್ವ
  • ಲೋಕಸಭಾ ಸದಸ್ಯರಿಗೆ ನೀಡಿದ್ದ ದೆಹಲಿ ಸರ್ಕಾರಿ ಬಂಗಲೆ
  • ಸದಸ್ಯರಿಗೆ ನೀಡುವ ವೇತನ, ಭತ್ಯೆ, ಇತರೆ ಸೌಲಭ್ಯಗಳು
  • ಕ್ಷೇತ್ರ ಭತ್ಯೆ, ಫೋನ್‌ ಬಿಲ್‌, ಪ್ರಯಾಣ ಸವಲತ್ತುಗಳು
  • 8 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ
  • ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿದ್ದರೆ 30 ದಿನದ ಬಳಿಕ ಜೈಲಿಗೆ

ಇದನ್ನೂ ಓದಿ: Sorry Politics: ರಾಹುಲ್‌ - ಮೋದಿ ಕ್ಷಮೆ ಗಲಾಟೆಗೆ ಬಲಿಯಾಯ್ತು 2ನೇ ದಿನದ ಕಲಾಪ..! 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!