
ಭೋಪಾಲ್(ಜು.09): ಭೋಪಾಲ್ನಲ್ಲಿ ಸಂಸದೆ ಪ್ರಜ್ಞಾ ಠಾಕೂರ್ ಸಾಮಾನ್ಯವಾಗಿ ತಮ್ಮ ಹೇಳಿಕೆಗಳಿಂದ ವಿವಾದಕ್ಕೀಡಾಗಗುತ್ತಾರೆ. ಆದರೆ ಈ ಬಾರಿ ಅವರು ವಿಶೇಷ ಕಾರಣದಿಂದ ಸದ್ದು ಮಾಡುತ್ತಿದ್ದಾರೆ. ಸಂಸದೆ ಪ್ರಜ್ಞಾ ಠಾಕೂರ್ ತಮ್ಮ ಸರ್ಕಾರಿ ನಿವಾಸದಲ್ಲಿ ಇಬ್ಬರು ಬಡ ಹೆಣ್ಮಕ್ಕಳ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಮದುವೆಯ ಎಲ್ಲಾ ಸಂಪ್ರದಾಯದಲ್ಲಿ ಪ್ರಜ್ಞಾ ಠಾಕೂರ್ ಪಾಲ್ಗೊಂಡಿದ್ದರೆ.
ಈ ಇಬ್ಬರು ಹೆಣ್ಮಕ್ಕಳ ದಿಬ್ಬಣ ಬುಧವಾರ ಬುಧವಾರ ಸಂಜೆ ಸಂಸದೆ ಮನೆಗೆ ತಲುಪಿದೆ. ಇಲ್ಲಿ ಸಂಸದೆಯ ಹಾಜರಿಯಲ್ಲಿ ಎರಡೂ ಜೋಡಿ ಮದುವೆಯ ಬಂಧನದಲ್ಲಿ ಒಂದಾಗಿದ್ದಾರೆ.
ಈ ಹೆಣ್ಮಕ್ಕಳ ಪೋಷಕಿ ಸ್ಥಾನದಲ್ಲಿ ನಿಂತು, ತಾವೇ ಖುದ್ದು ದಿಬ್ಬಣವನ್ನು ಸ್ವಾಗತಿಸಿದ್ದಾರೆ. ಉಳಿದ ಆಚರಣೆಯಲ್ಲೂ ಪಾಲ್ಗೊಂಡಿದ್ದಾರೆ. ಇಲ್ಲಿ ಮಾಡಲಾಗಿದ್ದ ಡಾನ್ಸ್ನಲ್ಲೂ ಅವರು ಹೆಜ್ಜೇ ಹಾಕಿದ್ದಾರೆ. ಇದಾದ ಬಳಿಕ ಹೆಣ್ಮಕ್ಕಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗಲೂ ಅತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ