ಮಣಿಪುರ ರಾಜ​ಧಾ​ನಿ​ಯಲ್ಲಿ ಮತ್ತೆ ಹಿಂಸೆ: ಮನೆಗಳಿಗೆ ಬೆಂಕಿ: ಪೊಲೀಸರ ಜತೆ ಉದ್ರಿ​ಕ್ತ​ರ ಘರ್ಷಣೆ

Published : Jun 16, 2023, 06:55 AM IST
ಮಣಿಪುರ ರಾಜ​ಧಾ​ನಿ​ಯಲ್ಲಿ ಮತ್ತೆ ಹಿಂಸೆ: ಮನೆಗಳಿಗೆ ಬೆಂಕಿ:  ಪೊಲೀಸರ ಜತೆ ಉದ್ರಿ​ಕ್ತ​ರ ಘರ್ಷಣೆ

ಸಾರಾಂಶ

ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು,  ಉದ್ರಿಕ್ತರ ಗುಂಪೊಂದು ರಾಜ​ಧಾ​ನಿ ಇಂಫಾ​ಲ್‌​ನ​ಲ್ಲಿ 2 ಮನೆಗಳಿಗೆ ಬೆಂಕಿ ಹಚ್ಚಿದೆ.

ಇಂಫಾಲ್‌: ಕುಕಿ-ಮೈತೇಯಿ ಸಮು​ದಾ​ಯ​ಗಳ ನಡುವೆ 2 ತಿಂಗ​ಳಿಂದ ಸಂಘ​ರ್ಷದ ಭೂಮಿಕೆ ಆಗಿ​ರುವ ಮಣಿ​ಪು​ರ​ದಲ್ಲಿ ಗುರುವಾರವೂ ಹಿಂಸಾಚಾರ ಮುಂದುವರೆದಿದ್ದು, ಉದ್ರಿಕ್ತರ ಗುಂಪೊಂದು ರಾಜ​ಧಾ​ನಿ ಇಂಫಾ​ಲ್‌​ನ​ಲ್ಲಿ 2 ಮನೆಗಳಿಗೆ ಬೆಂಕಿ ಹಚ್ಚಿದೆ. ಈ ವೇಳೆ ಗುಂಪು ಚದುರಿಸಲು ಪ್ರಯತ್ನಿಸಿದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿದೆ. ಪ್ರತಿಭಟನಾಕಾರರನ್ನು ಚುದುರಿಸುವುದಕ್ಕಾಗಿ ರಕ್ಷಣಾ ಪಡೆಗಳು ಬಲಪ್ರಯೋಗ ನಡೆಸಿದ್ದು, ಅಶ್ರುವಾಯು ಸಿಡಿಸಿದ ಘಟನೆ ಇಂಫಾಲ್‌ನ ಚೆಕೂನ್‌ ಪ್ರದೇ​ಶ​ದಲ್ಲಿ ನಡೆದಿದೆ. ಪ್ರತಿಭಟನಾಕಾರರು ಮತ್ತು ಶಸ್ತ್ರಧಾರಿಗಳನ್ನು ಹತ್ತಿಕ್ಕಲು ಕಾರ್ಯಾಚರಣೆಯನ್ನು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ ಪಡೆಗಳು ತೀವ್ರಗೊಳಿಸಿವೆ ಎಂದು ಸೇನೆ ಹೇಳಿದೆ.

ಕುಕಿ ಬಾಹು​ಳ್ಯದ ಪೂರ್ವ ಇಂಫಾಲ್‌ (Imphal)ಜಿಲ್ಲೆಯ ಖಮೆ​ನ್‌​ಲಾಕ್‌ ಗ್ರಾಮದ ಮೇಲೆ ಬುಧ​ವಾರ ನಡೆದ ದಾಳಿಯಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಅಲ್ಲದೆ,  ಬುಧವಾರ ಸಂಜೆ ವೇಳೆಗೆ ಸಚಿವೆ ನೇಮ್ಚಾ ಕಿಪ್‌ಜೆನ್‌ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದರು. ಹಿಂಸಾಚಾರ ಆರಂಭವಾದ ಬಳಿಕ ಸಚಿವರೊಬ್ಬರ ಮನೆಗೆ ಬೆಂಕಿ ಹಚ್ಚಿದ ಮೊದಲ ಉದಾಹರಣೆ ಇದಾಗಿದೆ. ಇದು ಮೈತೇಯಿ ಸಮುದಾಯದವರ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ. ಕೃತ್ಯ ಎಸಗಿದವರಿಗಾಗಿ ರಕ್ಷಣಾ ಪಡೆಗಳು ಹುಡುಕಾಟ ಆರಂಭಿಸಿವೆ. ದುರ್ಘಟನೆ ನಡೆದ ಸಮಯದಲ್ಲಿ ಮಣಿಪುರದ ಏಕೈಕ ಸಚಿವೆ ಮನೆಯಲ್ಲಿರಲಿಲ್ಲ ಎಂಬುದು ತಿಳಿದು ಬಂದಿದೆ.

ಮಣಿಪುರದಲ್ಲಿ ಸಂಘರ್ಷ ತಡೆಗೆ ಶಾಂತಿ ಸಮಿತಿ ರಚನೆ: ಸೈನಿಕರಿಂದ ಕಸಿದ ಗನ್‌ ಮರಳಿಸಲು ಡ್ರಾಪ್‌ಬಾಕ್ಸ್‌

ಮನೆ ತೊರೆದ 50000 ಜನ

ರಾಜ್ಯದಲ್ಲಿನ ಜನಾಂಗೀಯ ಸಂಘರ್ಷದಿಂದಾಗಿ 50,698 ಜನರು ತಮ್ಮ ಮನೆ ತೊರೆದಿದ್ದು, ಅವರಿಗೆ 349 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಮಣಿಪುರ ಸರ್ಕಾರ (Manipur Government) ತಿಳಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಡಾ.ಆರ್‌.ಕೆ.ರಂಜನ್‌ (R K Ranjan), ರಾಜ್ಯದಲ್ಲಿ ಈಗಾಗಲೇ ಕೂಂಬಿಂಗ್‌ ಶುರು ಮಾಡಿದ್ದು, ಇದರಿಂದಾಗಿ ಒಟ್ಟು 53 ಆಯುಧಗಳು, 39 ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಘರ್ಷ ಕಾರಣ ನಿಂತಿದ್ದ ಶಾಲೆಗಳನ್ನು ಶೀಘ್ರ ತೆರೆಯಲಾಗುವುದು. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡದಂತೆ ಆದೇಶ ಮಾಡಲಾಗಿದೆ. ರಾಜ್ಯದಲ್ಲಿರುವ ಒಟ್ಟು 242 ಬ್ಯಾಂಕ್‌ ಶಾಖೆಗಳಲ್ಲಿ ಈಗಾಗಲೇ 198 ಶಾಖೆಗಳು ಮರಳಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಣಿಪುರ ಹಿಂಸಾಚಾರ,ಆಸ್ಪತ್ರೆ ತೆರಳುತ್ತಿದ್ದ ತಾಯಿ-ಮಗನ ಜೀವಂತ ಸುಟ್ಟ ಪ್ರತಿಭಟನಾಕಾರರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ