8 ಜನ ಪೊಲೀಸರನ್ನು ಕೊಂದ ಪಾತಕಿ ವಿಕಾಸ್ ದುಬೆ ಅರೆಸ್ಟ್..!

Suvarna News   | Asianet News
Published : Jul 09, 2020, 02:34 PM IST
8 ಜನ ಪೊಲೀಸರನ್ನು ಕೊಂದ ಪಾತಕಿ ವಿಕಾಸ್ ದುಬೆ ಅರೆಸ್ಟ್..!

ಸಾರಾಂಶ

8 ಜನ ಪೊಲೀಸ್ ಸಿಬ್ಬಂದಿಯನ್ನು ಕೊಲೆಗೈದ ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ.  

ಭೋಪಾಲ್‌(ಜು.09): 8 ಜನ ಪೊಲೀಸ್ ಸಿಬ್ಬಂದಿಯನ್ನು ಕೊಲೆಗೈದ ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನ್ಪುರದಲ್ಲಿ ಬಂಧಿಸಲು ಬಂದ 8 ಜನ ಪೊಲೀಸ್ ಸಿಬ್ಬಂದಿಯನ್ನು ಕೊಲೆ ಮಾಡಿದ್ದ ವಿಕಾಸ್ ದುಬೆ ತಲೆ ಮರೆಸಿಕೊಂಡಿದ್ದ. ಆತನನ್ನು ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಳಿ ದೇವಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದಾರೆ.

ದುಬೆ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಗೃಹ ಸಚಿವ ನರೋಟ್ಟಂ ಮಿಶ್ರಾ, ಮಧ್ಯಪ್ರದೇಶದ ಪೊಲೀಸರು ಆತನ ಸಹಾಯಕರಿಗಾಗಿ ಬಲೆ ಬೀಸಿದ್ದಾರೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಯುಪಿ ಸಿಎಂ ಯೋಗಿ ಜೊತೆ ಮಾತನಾಡಿದ್ದು, ಸ್ಥಳೀಯ ಪೊಲೀಸ್ ಸಿಬ್ಬಂದಿ ಕೆಲಸವನ್ನು ಶ್ಲಾಘಿಸಿದ್ದಾರೆ.

ರೌಡಿಗಳ ಗುಂಡಿನ ದಾಳಿಗೆ ಡಿವೈಎಸ್‌ಪಿ ಸೇರಿ 8 ಪೊಲೀಸರು ಹುತಾತ್ಮ

ದುಬೆ ಸರೆಂಡರ್ ಆಗಿದ್ದ ಎಂಬ ವದಂತಿ ತಳ್ಳಿ ಹಾಕಿದ ಉಜ್ಜೈನಿ ಜಿಲ್ಲಾಧಿಕಾರಿ ಆಶಿಶ್ ಸಿಂಗ್, ಅಂಗಡಿಯ ವ್ಯಕ್ತಿಯೊಬ್ಬ ದುಬೆ ದೇವಾಲಯಕ್ಕೆ ಪ್ರವೇಶಿಸಿದಾಗ ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!

ಆತ ದೇವಸ್ಥಾನದಿಂದ ಹೊರ ಬರುವಾಗ ಬಂಧಿಸಲಾಗಿದೆ. ಆರಮಭದಲ್ಲಿ ಆತ ತಾನು ದುಬೆ ಅಲ್ಲ ಎಂದು ವಾದಿಸಿದ್ದ, ನಂತರದಲ್ಲಿ ಒಪ್ಪಿಕೊಂಡಿದ್ದಾನೆ. ಆತ ಯಾವಗ ಮತ್ತು ಹೇಗೆ ಉಜ್ಜೈನಿ ತಲುಪಿದ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಹಿಡಿಯಲು ಬಂದ 8 ಜನ ಪೊಲೀಸರನ್ನೇ ಹತ್ಯೆ ಮಾಡಿದ ರೌಡಿ ವಿಕಾಸ್ ದುಬೆ! ಯಾರೀತ

ಸುಮಾರು 60 ಕ್ರಿಮಿನಲ್ ಕೇಸ್‌ಗಳಲ್ಲಿ ಬೇಕಾಗಿದ್ದ ದುಬೆ ಕೊನೆಗೆ ಹರಿಯಾಣದಲ್ಲಿ ಕಾಣಿಸಿಕೊಂಡಿದ್ದ. ದುಬೆ ಶರಣಾಗಿದ್ದಾನೆ ಎಂದು ಟೀಕಿಸಿರುವ ಕಾಂಗ್ರೆಸ್ ಎನ್‌ಕೌಂಟರ್‌ನಿಂದ ತಪ್ಪಿಸಿಕೊಳ್ಳಲು ವಿಕಾಸ್ ದುಬೆ ಶರಣಾಗಿದ್ದಾನೆ ಎಂದು ಹೇಳಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!
ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!