ಕಾಶಿ ತಮಿಳುನಾಡು ನಡುವೆ ನಂಟು... ಭಾಷಾ ಸಾಮರಸ್ಯಕ್ಕೆ ಮೋದಿ ಕರೆ

Published : Nov 20, 2022, 09:23 AM ISTUpdated : Nov 20, 2022, 09:26 AM IST
ಕಾಶಿ ತಮಿಳುನಾಡು ನಡುವೆ ನಂಟು... ಭಾಷಾ ಸಾಮರಸ್ಯಕ್ಕೆ ಮೋದಿ ಕರೆ

ಸಾರಾಂಶ

ಕಾಶಿ ಮತ್ತು ತಮಿಳುನಾಡು ನಡುವೆ ಶತಮಾನಗಳಿಂದ ನಂಟು ಇದೆ ಎಂದು ತೋರ್ಪಡಿಸುವ 1 ತಿಂಗಳುಗಳ ಕಾಲದ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಶನಿವಾರ ಚಾಲನೆ ನೀಡಿದರು.

ವಾರಾಣಸಿ: ಕಾಶಿ ಮತ್ತು ತಮಿಳುನಾಡು ನಡುವೆ ಶತಮಾನಗಳಿಂದ ನಂಟು ಇದೆ ಎಂದು ತೋರ್ಪಡಿಸುವ 1 ತಿಂಗಳುಗಳ ಕಾಲದ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಶನಿವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ತಮಿಳುನಾಡು ಮತ್ತು ಕಾಶಿ 2 ಸಹ ಶಾಶ್ವತವಾದ ಸಾಂಸ್ಕೃತಿಕ ಕೇಂದ್ರಗಳಾಗಿವೆ. ಎರಡೂ ಪ್ರದೇಶಗಳ ನಡುವೆ ಶತಮಾನಗಳ ನಂಟಿದೆ. ಭಾರತದ ಪ್ರಾಚೀನ ಭಾಷೆಗಳಲ್ಲಿ ತಮಿಳು ಕೂಡ ಒಂದು. ತಮಿಳಿನ ರಕ್ಷಣೆ ಅಗತ್ಯ. ಭಾಷಾ ತಾರತಮ್ಯ ತೊಡೆದು ಹಾಕಿ ಭಾಷಾ ಸಾಮರಸ್ಯ ಬೆಳೆಸಬೇಕು’ ಎಂದು ನುಡಿದರು. ಕಾಶಿ ನಗರ (Kashi Nagar) ಬಾಬಾ ವಿಶ್ವನಾಥನಿಂದ (Baba Vishwanath) ಹಾಗೂ ತಮಿಳುನಾಡು (Tamil Nadu) ರಾಮೇಶ್ವರಂನಿಂದ (Rameswaram) ಆಶೀರ್ವಾದಕ್ಕೊಳಪಟ್ಟಿವೆ. ಈ ಎರಡೂ ನಗರಗಳೂ ಸಹ ಶಿವ (Shiva) ಹಾಗೂ ಶಕ್ತಿಮಯವಾಗಿವೆ. ಅಲ್ಲದೇ ತಮಿಳುನಾಡನ್ನು ದಕ್ಷಿಣದ ಕಾಶಿ (Kashi of the South) ಎಂದು ಕರೆಯಲಾಗುತ್ತದೆ ಎಂದು ಬಣ್ಣಿಸಿದರು. 

1 ತಿಂಗಳ ಕಾಲ ನಡೆಯುವ ಈ ಕಾರ‍್ಯಕ್ರಮದಲ್ಲಿ ತಮಿಳುನಾಡು ಮತ್ತು ಕಾಶಿ ನಡುವೆ ಇರುವ ನಂಟನ್ನು ಪ್ರದರ್ಶಿಸುವ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅಲ್ಲದೇ ಈ ವೇಳೆ ವಿವಿಧ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ತಮಿಳುನಾಡಿನಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿ ಸ್ಥಳಿಯ ಜನರೊಂದಿಗೆ ವ್ಯಾಪಾರ, ವೃತ್ತಿ ಮುಂತಾದವುಗಳ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ. ಕೈಮಗ್ಗದ ವಸ್ತುಗಳು, ಕುಶಲ ಕರ್ಮಿಗಳು ತಯಾರಿಸಿದ ವಸ್ತುಗಳು, ಪುಸ್ತಕಗಳು, ಅಡಿಗೆಗಳು, ಇತಿಹಾಸ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿಷಯಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ.

ಕಾಶಿಯಲ್ಲಿರುವ ಕರ್ನಾಟಕ ಛತ್ರ ಅಭಿವೃದ್ಧಿ: ಸಚಿವೆ ಶಶಿಕಲಾ ಜೊಲ್ಲೆ

ಭಾರತ್‌ ಗೌರವ್‌ನಿಂದ ಕರ್ನಾಟಕಕ್ಕೆ ಕಾಶಿ ಹತ್ತಿರ: ಮೋದಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?