ಕಾಶಿ ವಿಶ್ವನಾಥ ಮಂದಿರದ ಭಾಗ ನೆಲಸಮ ಮಾಡಿ ಮಸೀದಿ ನಿರ್ಮಾಣ; ಸಮೀಕ್ಷೆಗೆ ಕೋರ್ಟ್ ಒಪ್ಪಿಗೆ!

Published : Apr 08, 2021, 10:34 PM ISTUpdated : Apr 09, 2021, 10:21 AM IST
ಕಾಶಿ ವಿಶ್ವನಾಥ ಮಂದಿರದ ಭಾಗ ನೆಲಸಮ ಮಾಡಿ ಮಸೀದಿ ನಿರ್ಮಾಣ; ಸಮೀಕ್ಷೆಗೆ ಕೋರ್ಟ್ ಒಪ್ಪಿಗೆ!

ಸಾರಾಂಶ

ಶತಮಾನಗಳ ಆಯೋಧ್ಯೆ ಮಂದಿರ ವಿವಾದ ಬಗೆ ಹರಿದು ಇದೀಗ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಯೋಧ್ಯೆ ತೀರ್ಪಿನ ಬಳಿಕ ಇದೇ ರೀತಿ ವಿವಾದದಲ್ಲಿರುವ ಹಲವು ಹಿಂದೂ ಮಂದಿರ ಕಾನೂನು ಹೋರಾಟ ಚುರುಕುಗೊಳಿಸಿದೆ. ಇದೀಗ ಕಾಶಿ ವಿಶ್ವನಾಥ ಮಂದಿರ ಸಂಕೀರ್ಣ ಜಾಗದಲ್ಲಿರುವ ಮಸೀದಿ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ವಾರಣಾಸಿ(ಏ.08): ಅಯೋಧ್ಯೆ ವಿವಾದ ಬಗೆಹರಿದ ಬಳಿಕ ಮಥುರಾ ಸೇರಿದಂತೆ ಹಲವು ಹಿಂದೂ ದೇವಾಲಯಗಳು ತಮ್ಮ ಕಾನೂನು ಹೋರಾಟವನ್ನು ಮತ್ತಷ್ಟು ಚುರುಕು ಮಾಡಿದೆ. ಇದೀಗ ಕಾಶೀ ವಿಶ್ವನಾಥನ ಸರದಿ. ಪವಿತ್ರ ಕಾಶಿ ವಿಶ್ವನಾಥನ ಮಂದೀರ ಸಂಕೀರ್ಣದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಕಾಶಿ ವಿಶ್ವನಾಥ ದೇವಾಲಯದ ಭಾಗ ಕೆಡವಿ ನಿರ್ಮಿಸಲಾಗಿದೆ. ಹೀಗಾಗಿ ಈ ಭೂಮಿಯನ್ನು ಮಂದಿರಕ್ಕೆ ಮರಳಿ ನೀಡಬೇಕು ಅನ್ನೋ ಅರ್ಜಿಯನ್ನು ವಾರಣಾಸಿ ಜಿಲ್ಲಾ ಕೋರ್ಟ್ ಪುರಸ್ಕರಿಸಿದೆ.

70 ಅಲ್ಲ, 107 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತೆ ರಾಮ ಮಂದಿರ, ಟ್ರಸ್ಟ್‌ನಿಂದ ತಯಾರಿ!

ಕಾಶಿ ವಿಶ್ವನಾಥ್ ಮಂದಿರದಲ್ಲಿ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ಕೋರ್ಟ್ ಸೂಚನೆ ನೀಡಿದೆ. ಸಮೀಕ್ಷೆ ನಡೆಸಿ, ವರದಿ ನೀಡುವಂತೆ ಸೂಚಿಸಿದೆ. ಈ ಕುರಿತು ವಿಜಯ್ ಶಂಕರ್ ರಸ್ತೂಗಿ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ಸೂಚನೆ ನೀಡಿದೆ.

1664ರಲ್ಲಿ ಮೊಘಲ್ ರಾಜ ಔರಂಗಜೇಬ್ ದಾಳಿ ಮಾಡಿ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಕಡವಲಾಗಿದೆ. ಬಳಿಕ ಇಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಮಸೀದಿ ಜಾಗವನ್ನು ಹಿಂದೂ ದೇವಾಲಯಕ್ಕೆ ಮರಳಿ ನೀಡಬೇಕು ಎಂದು ಕೋರಲಾಗಿದೆ. 

ಕೋರ್ಟ್ ಆದೇಶದಕ್ಕೆ AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಸಮಾಧಾನಗೊಂಡಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಮಸೀದಿ ಸಮಿತಿಯು ಈ ಆದೇಶ ತಕ್ಷಣವೇ ಮೇಲ್ಮನವಿ ಸಲ್ಲಿಸಬೇಕು ಎಂದಿದ್ದಾರೆ. ಪುರಾತತ್ವ ಇಲಾಖೆಗೆ ಹಿಂದುತ್ವದ ಸುಳ್ಳು ಹೇಳುವ ಪರಿಪಾಠ ಹೆಚ್ಚಾಗಿದೆ ಎಂದಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ