ಉತ್ತರಾಖಂಡ ಸಚಿವರ‌ ಪತ್ನಿ, ಪುತ್ರನಿಗೆ ಕೊರೋನಾ ವೈರಸ್ ಸೋಂಕು!

Kannadaprabha News   | Asianet News
Published : Jun 01, 2020, 11:20 AM ISTUpdated : Jul 04, 2020, 06:01 PM IST
ಉತ್ತರಾಖಂಡ ಸಚಿವರ‌ ಪತ್ನಿ, ಪುತ್ರನಿಗೆ ಕೊರೋನಾ ವೈರಸ್ ಸೋಂಕು!

ಸಾರಾಂಶ

ಉತ್ತರಾಖಂಡ ಸಚಿವ ಸತ್ಪಾಲ್‌ ಮಹಾರಾಜ್‌, ಪತ್ನಿ, ಪುತ್ರಗೆ ಸೋಂಕು|  ಕುಟುಂಬದ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ 22 ಮಂದಿಗೆ ಕೊರೋನಾ

ಡೆಹ್ರಾಡೂನ್(ಜೂ.01)‌: ಉತ್ತರಾಖಂಡದ ಸಚಿವ ಸತ್ಪಾಲ್‌ ಮಹಾರಾಜ್‌, ಅವರ ಪತ್ನಿ ಅಮೃತಾ ರಾವತ್‌ ಹಾಗೂ ಪುತ್ರನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರಲ್ಲದೆ, ಕುಟುಂಬದ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ 22 ಮಂದಿಗೆ ಕೊರೋನಾ ತಗುಲಿದೆ.

ಇದೇ ವೇಳೆ, ಶುಕ್ರವಾರವಷ್ಟೇ ಮಹಾರಾಜ್‌ ಅವರು ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಮುಖ್ಯಮಂತ್ರಿ ಹಾಗೂ ಇಡೀ ಸಂಪುಟದ ಸಚಿವರಿಗೆ ಕೊರೋನಾ ಭೀತಿ ಆರಂಭವಾಗಿದೆ. ಮಾಜಿ ಸಚಿವೆಯಾಗಿರುವ ಅಮೃತಾ ರಾವತ್‌ ಅವರಿಗೆ ಮೊದಲು ಕೊರೋನಾ ದೃಢಪಟ್ಟಿತ್ತು.

ಚೀನಾಕ್ಕೆ ಸೆಡ್ಡು ಹೊಡೆದ ಉತ್ತರ ಕನ್ನಡದ ಶ್ರೀರಾಮ್ ಭಟ್

ಅವರನ್ನು ಹೃಷಿಕೇಶದ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸತ್ಪಾಲ್‌ ಹಾಗೂ ಕುಟುಂಬದ ಸದಸ್ಯರು, ಸಿಬ್ಬಂದಿ ಸೇರಿ 22 ಮಂದಿಯನ್ನು ಪರೀಕ್ಷಿಸಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಈಗ ಇವರಿಗೆಲ್ಲ ಸೋಂಕು ದೃಢಪಟ್ಟಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಉತ್ಪಲ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್