ಲಾಕ್‌ಡೌನ್‌ ಉಲ್ಲಂಘಿಸಿದ ವಿದೇಶಿಗರಿಗೆ ಪಾಠ ಕಲಿಸಿದ ಪೊಲೀಸ್!

Published : Apr 14, 2020, 03:55 PM ISTUpdated : Apr 14, 2020, 03:56 PM IST
ಲಾಕ್‌ಡೌನ್‌ ಉಲ್ಲಂಘಿಸಿದ ವಿದೇಶಿಗರಿಗೆ ಪಾಠ ಕಲಿಸಿದ ಪೊಲೀಸ್!

ಸಾರಾಂಶ

ಲಾಕ್‌ಡೌನ್‌ ಇದ್ದ ಹೊರತಾಗಿಯೂ ಉತ್ತರಾಖಂಡದ ಋುಷಿಕೇಶದಲ್ಲಿ ಗಂಗಾ ನದಿಯ ದಂಡೆಯ ಮೇಲೆ ಅಡ್ಡಾಡುತ್ತಿದ್ದ vidESigru| ಲಾಕ್‌ಡೌನ್‌ ಉಲ್ಲಂಘಿಸಿದ್ದಕ್ಕೆ 500 ಸಲ ‘ಕ್ಷಮಿಸಿ’ ಬರೆವ ಶಿಕ್ಷೆ

ಡೆಹ್ರಾಡೂನ್‌(ಏ.14): ಲಾಕ್‌ಡೌನ್‌ ಇದ್ದ ಹೊರತಾಗಿಯೂ ಉತ್ತರಾಖಂಡದ ಋುಷಿಕೇಶದಲ್ಲಿ ಗಂಗಾ ನದಿಯ ದಂಡೆಯ ಮೇಲೆ ಅಡ್ಡಾಡುತ್ತಿದ್ದ ಕಾರಣಕ್ಕೆ 10 ವಿದೇಶಿ ಪ್ರಜೆಗಳಿಗೆ ಪೊಲೀಸರು 500 ಬಾರಿ ‘ಐ ಆ್ಯಮ್‌ ಸಾರಿ’ (ನನ್ನನ್ನು ಕ್ಷಮಿಸಿ) ಎಂದು ಬರೆಯುವ ವಿಶಿಷ್ಟಶಿಕ್ಷೆ ನೀಡಿದ್ದಾರೆ.

ಕೊರೋನಾ ವೈರಸ್‌ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿ ಇರುವ ಕಾರಣ ಉತ್ತರಾಖಂಡದಲ್ಲಿ ಮುಂಜಾನೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲಾಕ್‌ಡೌನ್‌ ಅನ್ನು ಕೊಂಚ ಸಡಿಲ ಮಾಡಲಾಗಿದೆ. ಆದರೆ, ಈ ವೇಳೆಯಲ್ಲಿ ಜನರು ಮನಬಂದಂತೆ ಓಡಾಡುವಂತೆ ಇಲ್ಲ.

2 ಲಕ್ಷ ಅರ್ಚಕರ ಸಂಪಾದನೆಗೆ ಲಾಕ್‌ಡೌನ್ ಕುತ್ತು!

ಈ ವಿಷಯ ತಿಳಿದಿದ್ದರೂ ಆಸ್ಪ್ರೇಲಿಯಾ, ಅಮೆರಿಕ, ಮೆಕ್ಸಿಕೋ ಮತ್ತು ಇಸ್ರೇಲ್‌ನ ಕೆಲವು ಪ್ರವಾಸಿಗರು ಗಂಗಾ ನದಿಯ ದಂಡೆಯ ಮೇಲೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಅವರಿಗೆ ಪೆನ್‌, ಕಾಗದ ಕೊಟ್ಟು ‘ಐ ಆ್ಯಮ್‌ ಸಾರಿ’ ಎಂದು 500 ಬಾರಿ ಬರೆಯುವಂತೆ ಸೂಚಿಸಿದ್ದಾರೆ. ಅಲ್ಲದೇ ಇನ್ನೊಮ್ಮೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌
ಎರಡು ಹಂತಗಳಲ್ಲಿ ನಡೆಯಲಿದೆ ಜನಗಣತಿ, 11,718 ಕೋಟಿ ಮೀಸಲಿಟ್ಟ ಸರ್ಕಾರ; ಇದೇ ಮೊದಲ ಬಾರಿಗೆ ಡಿಜಿಟಲ್‌ ಮೂಲಕ ಗಣತಿ!