UP Election Results: ಯೋಗಿ ಸಂಪುಟದ 42 ಸಚಿವರಲ್ಲಿ ಡಿಸಿಎಂ ಸೇರಿ ಇವರೆಲ್ಲರಿಗೂ ಸೋಲು!

Published : Mar 11, 2022, 09:29 AM IST
UP Election Results: ಯೋಗಿ ಸಂಪುಟದ 42 ಸಚಿವರಲ್ಲಿ ಡಿಸಿಎಂ ಸೇರಿ ಇವರೆಲ್ಲರಿಗೂ ಸೋಲು!

ಸಾರಾಂಶ

* ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟ, ಬಿಜೆಪಿಗೆ ಜಯ * ಯೋಗಿ ಸಂಪುಟದ ಸಚಿವರಲ್ಲಿ ಗೆದ್ದವರಾರು? * ಇಲ್ಲಿದೆ ಯೋಗಿ ಸರ್ಕಾರದ ಮಂತ್ರಿಗಳ ಫಲಿತಾಂಶ

ಲಕ್ನೋ(ಮಾ.11): ಈ ಬಾರಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಸರ್ಕಾರದ 42 ಸಚಿವರು ಕಣದಲ್ಲಿದ್ದರು. ಈ ಅಗ್ನಿ ಪರೀಕ್ಷೆಯಲ್ಲಿ, ಯೋಗಿ ಜೊತೆಗೆ ಅವರ ಸರ್ಕಾರದ ಮಂತ್ರಿಗಳ ಭವಿಷ್ಯವೂ ನಿರ್ಧಾರವಾಗಿದೆ. ಮಾರ್ಚ್ 10ರ ಬೆಳಗ್ಗೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಬಹುತೇಕ ಸಚಿವರು ಎದುರಾಳಿಗಳಿಗಿಂತ ಮುನ್ನಡೆಯಲ್ಲಿದ್ದರು. ಆದಾಗ್ಯೂ, ಕೆಲವು ಸಚಿವರು ಪ್ರತಿಸ್ಪರ್ಧಿಗಳಿಂದ ಕಡಿಮೆ ಅಂತರದಿಂದ ಮುನ್ನಡೆ ಸಾಧಿಸಿದ್ದರು. ಯೋಗಿ ಸರ್ಕಾರದ 42 ಸಚಿವರ ಪೈಕಿ 9 ಸಚಿವರ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿಯೇ ಮತದಾನ ನಡೆದಿದೆ. ಉಳಿದ 33 ಸಚಿವರಲ್ಲಿ ಇತರೆ ಹಂತಗಳಲ್ಲಿ ಮತದಾನ ನಡೆದಿದೆ. 

ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಜತೆ 5 ವರ್ಷಗಳ ಸರ್ಕಾರಿ ಐಷಾರಾಮಿ ಜೀವನ ನಡೆಸಿದ್ದ ಯೋಗಿ ಸರ್ಕಾರದಲ್ಲಿದ್ದ ನಾಯಕರ ವಿಶ್ವಾಸಾರ್ಹತೆಯೂ ಈ ಚುನಾವಣೆಯಲ್ಲಿ ಅತಂತ್ರವಾಗಿದೆ. ಆರಂಭಿಕ ಫಲಿತಾಂಶಗಳಲ್ಲಿ, ಬಿಜೆಪಿ ತೊರೆದು ಎಸ್‌ಪಿ ಸೇರಿದ ಸ್ವಾಮಿ ಪ್ರಸಾದ್ ಮೌರ್ಯ ಅವರು ಫಾಜಿಲ್‌ನಗರ ಕ್ಷೇತ್ರವನ್ನು ಕಳೆದುಕೊಂಡರು. ಸಿಎಂ ಯೋಗಿ ಆದಿತ್ಯನಾಥ್, ಅಶುತೋಷ್ ಟಂಡನ್ ಮತ್ತು ಕಾನೂನು ಸಚಿವ ಬ್ರಿಜೇಶ್ ಪಾಠಕ್ ಬಂಪರ್ ಗೆಲುವು ದಾಖಲಿಸಿದ್ದಾರೆ.

ಸಿಎಂ, ಉಪ ಮುಖ್ಯಮಂತ್ರಿ ಸ್ಥಾನ ಏನಾಯ್ತು?

ಸಂಖ್ಯೆ ಅಭ್ಯರ್ಥಿಸ್ಥಾನಫಲಿತಾಂಶ
1ಯೋಗಿ ಆದಿತ್ಯನಾಥ್ಗೋರಖ್‌ಪುರ ನಗರಗೆಲುವು
2ಕೇಶವ ಪ್ರಸಾದ್ ಮೌರ್ಯಸಿರತುಸೋಲು

ಸಂಪುಟದ 11 ಸಚಿವರು ಚುನಾವಣಾ ಕಣದಲ್ಲಿದ್ದರು

ಸಂಖ್ಯೆ ಅಭ್ಯರ್ಥಿಸ್ಥಾನಫಲಿತಾಂಶ
1ಸುರೇಶ್ ಖನ್ನಾಶಹಜಹಾನ್‌ಪುರಗೆಲುವು
2ಸತೀಶ್ ಮಹಾನ    ಮಹಾರಾಜಪುರಗೆಲುವು
3ಅಶುತೋಷ್ ಟಂಡನ್ಲಕ್ನೋ ಪೂರ್ವಗೆಲುವು
4ರಮಾಪತಿ ಶಾಸ್ತ್ರಿಮಂಕಾಪುರ ಗೆಲುವು
5ಅನಿಲ್ ರಾಜಭರ್ಶಿವಪುರಗೆಲುವು
6ಸೂರ್ಯ ಪ್ರತಾಪ ಶಾಹಿ ಪಥರ್ದೇವಗೆಲುವು
7ಸಿದ್ಧಾರ್ಥನಾಥ್ ಸಿಂಗ್ಅಲಹಾಬಾದ್ ಪಶ್ಚಿಮಗೆಲುವು
8ನಂದಗೋಪಾಲ್ ನಂದಿಅಲಹಾಬಾದ್ ಸೌತ್ಗೆಲುವು
9ರಾಜೇಂದ್ರ ಪ್ರತಾಪ್ ಸಿಂಗ್ ಪಟ್ಟಿ, ಪ್ರತಾಪಗಢಸೋಲು
10ಜೈಪ್ರತಾಪ್ ಸಿಂಗ್ಬನ್ಸಿ ಗೆಲುವು
11 ರಾಮ್ ನರೇಶ್ ಅಗ್ನಿಹೋತ್ರಿಭೋಗಾಂವ್ಗೆಲುವು

4 ರಾಜ್ಯ ಸ್ವತಂತ್ರ ಉಸ್ತುವಾರಿ ಸಚಿವರು

ಸಂಖ್ಯೆ ಅಭ್ಯರ್ಥಿಸ್ಥಾನಫಲಿತಾಂಶ
1ಸತೀಶ್ ಚಂದ್ರ ದ್ವಿವೇದಿಇಟವಾಸೋಲು
2ರವೀಂದ್ರ ಜೈಸ್ವಾಲ್ವಾರಣಾಸಿ ಉತ್ತರಗೆಲುವು
3ನೀಲಕಂಠ ತಿವಾರಿವಾರಣಾಸಿ ದಕ್ಷಿಣಗೆಲುವು
4ಉಪೇಂದ್ರ ತಿವಾರಿಫೆಫ್ನಾಸೋಲು

ರಾಜ್ಯದ 13 ಸಚಿವರ ಚುನಾವಣಾ ಫಲಿತಾಂಶ 

 ಅಭ್ಯರ್ಥಿಸ್ಥಾನಫಲಿತಾಂಶ
ಸಂಗೀತಾ ಬಲವಂತ ಬೈಂದ್ ಗಾಜಿಪುರಗೆಲುವು
ಪಲ್ತುರಾಮ್ಬಲರಾಂಪುರ್ಗೆಲುವು
ಸುರೇಶ್ ಪಾಸಿಜಗದೀಶ್‌ಪುರಗೆಲುವು
ಜಯಪ್ರಕಾಶ ನಿಶಾದ್ರುದ್ರಾಪುರಗೆಲುವು
ಗಿರಿಚಂದ್ರ ಯಾದವ್ಜಾನ್ಪುರ್ಸೋಲು
ಅಜಿತ್ ಪಾಲ್ಸಿಕಂದ್ರಗೆಲುವು
ನೀಲಿಮಾ ಕಟಿಯಾರ್ಕಲ್ಯಾಪುನಪುರಗೆಲುವು
ಮನೋಹರ್ ಲಾಲ್ ಮನ್ನು ಕೋರಿ ಮೆಹ್ರೋನಿಗೆಲುವು
ರವೀಂದ್ರ ಪ್ರತಾಪ್ ಸಿಂಗ್ ಧುನ್ನಿಹುಸೈಂಗಂಜ್ಸೋಲು
ಬಲದೇವ್ ಸಿಂಗ್ ಔಲಾಖ್ಬಿಲಾಸ್ಪುರ್ಸೋಲು
ಗುಲಾಬ್ ದೇವಿಚಂಡೌಸಿಗೆಲುವು
ಛತ್ರಪಾಲ್ ಗಂಗ್ವಾರ್ಬಹೇರಿ ಸೋಲು
ಮಹೇಶ್ ಗುಪ್ತಾಬದೌನ್ಗೆಲುವು
   

ಈ 7 ಸಚಿವರು ಚುನಾವಣೆಗೆ ಸ್ಪರ್ಧಿಸಿಲ್ಲ, ಸ್ಥಾನ ಬದಲಾವಣೆಯಾದ 3 ಸಚಿವರ ಪಾಡೇನು?

ಸಂಖ್ಯೆ ಅಭ್ಯರ್ಥಿಸ್ಥಾನಫಲಿತಾಂಶ
1ಶ್ರೀರಾಮ್ ಚೌಹಾಣ್  ಖಜ್ನಿಗೆಲುವು
2ಆನಂದ್ ಸ್ವರೂಪ್ ಶುಕ್ಲಾಬೈರಿಯಾಸೋಲು

ಕಳೆದ ಬಾರಿ ಲಕ್ನೋ ಸೆಂಟ್ರಲ್ ನಿಂದ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಗೆದ್ದಿದ್ದರು. ಈ ಬಾರಿ ಅವರು ಲಕ್ನೋ ಕ್ಯಾಂಟ್‌ನಿಂದ ಹೋರಾಡಿದರು. ರಾಜ್ಯ ಸಚಿವ ಶ್ರೀ ರಾಮ್ ಚೌಹಾಣ್ ಅವರನ್ನು ದಂಘಾಟಾ ಬದಲಿಗೆ ಖಜ್ನಿಯಿಂದ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಈ ಬಾರಿ ರಾಜ್ಯ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರ ಸ್ಥಾನವನ್ನು ಬಲ್ಲಿಯಾ ಸದರ್ ಬದಲಿಗೆ ಬೈರಿಯಾ ಎಂದು ಬದಲಾಯಿಸಲಾಗಿದೆ. ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅವರು ಚುನಾವಣಾ ಕಣದಲ್ಲಿಲ್ಲ. ಸಂಪುಟದ ಸಚಿವರಾದ ಮಹೇಂದ್ರ ಸಿಂಗ್, ಭೂಪೇಂದ್ರ ಚೌಧರಿ, ಜಿತಿನ್ ಪ್ರಸಾದ್, ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಅಶೋಕ್ ಕಟಾರಿಯಾ, ರಾಜ್ಯ ಸಚಿವರಾದ ಮೊಹ್ಸಿನ್ ರಜಾ ಮತ್ತು ಧರಂ ಸಿಂಗ್ ಪ್ರಜಾಪತಿ ಅವರು ಕಣದಿಂದ ಹೊರಗುಳಿದಿದ್ದಾರೆ.

ಈ ಮೂವರು ಸಚಿವರಿಗೆ ಟಿಕೆಟ್ ಸಿಕ್ಕಿರಲಿಲ್ಲ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವೆ, ಸ್ವತಂತ್ರ ಉಸ್ತುವಾರಿ ಸ್ವಾತಿ ಸಿಂಗ್ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಕಳೆದ ಬಾರಿ ಸರೋಜಿನಿನಗರದಿಂದ ಗೆದ್ದು ಸಚಿವೆಯಾದರು. ಆದರೆ, ಅವರ ಪತಿ ದಯಾಶಂಕರ್ ಸಿಂಗ್ ಅವರಿಗೆ ಪಕ್ಷವು ಬಾರ್ ಬಲಿಯಾದಿಂದ ಟಿಕೆಟ್ ನೀಡಿದೆ. ರಾಜ್ಯ ಸಚಿವ ಉದಯಭಾನ್ ಸಿಂಗ್ ಅವರಿಗೂ ಟಿಕೆಟ್ ಸಿಕ್ಕಿಲ್ಲ. ಸಹಕಾರಿ ಸಚಿವ ಮುಕುತ್ ಬಿಹಾರಿ ವರ್ಮಾ ಅವರ ಟಿಕೆಟ್ ಕಡಿತಗೊಂಡಿದೆ. ಅವರ ಸ್ಥಾನದಲ್ಲಿ ಅವರ ಮಗನಿಗೆ ಟಿಕೆಟ್ ಸಿಕ್ಕಿದೆ.

ಧರಂ ಸಿಂಗ್ ಸೈನಿ ಅವರ ಸೋಲು ಬಿಜೆಪಿ ತೊರೆದು ಎಸ್‌ಪಿ ಪಾಲಾಯಿತು

ಚುನಾವಣೆಗೂ ಮುನ್ನ ಐದು ವರ್ಷಗಳ ಕಾಲ ಯೋಗಿ ಸರ್ಕಾರದ ದಿಕ್ಕನ್ನೇ ಬದಲಿಸಿದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್ ಮತ್ತು ಧರಂ ಸಿಂಗ್ ಸೈನಿ ಈ ಬಾರಿ ಎಸ್‌ಪಿ ಟಿಕೆಟ್‌ನಲ್ಲಿ ಕಣದಲ್ಲಿದ್ದರು. ಅವರು ನಕೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು, ಆದರೆ ಬಿಜೆಪಿ ಅಭ್ಯರ್ಥಿ ಮುಖೇಶ್ ಚೌಧರಿ ಅವರನ್ನು ಸೋಲಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!