ಲವ್‌ ಜಿಹಾದ್‌ ನಡೆಸಿದರೆ ‘ಅಂತಿಮ ಯಾತ್ರೆ’!

Published : Nov 01, 2020, 02:07 PM IST
ಲವ್‌ ಜಿಹಾದ್‌ ನಡೆಸಿದರೆ ‘ಅಂತಿಮ ಯಾತ್ರೆ’!

ಸಾರಾಂಶ

ಲವ್‌ ಜಿಹಾದ್‌ ನಡೆಸಿದರೆ ‘ಅಂತಿಮ ಯಾತ್ರೆ’| ಅಂಥವರಿಗೆ ‘ರಾಮ ನಾಮ್‌ ಸತ್ಯ ಹೈ’ ಪಠಿಸುತ್ತೇವೆ|  ಉ.ಪ್ರ. ಸಿಎಂ ಯೋಗಿ ಗುಡುಗು| ಲವ್‌ ಜಿಹಾದ್‌ ವಿರುದ್ಧ ಶೀಘ್ರ ಕಾನೂನು

ಲಖನೌ(ನ.01): ಲವ್‌ ಜಿಹಾದ್‌ ವಿರುದ್ಧ ಸುಗ್ರೀವಾಜ್ಞೆ ಹೊರಡಿಸುವ ಸುಳಿವು ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ‘ಬಲವಂತದ ಮತಾಂತರ ನಡೆಸುವವರ ‘ರಾಮ ನಾಮ್‌ ಸತ್ಯ ಹೈ’ (ಅಂತಿಮ ಯಾತ್ರೆ) ನಡೆಸಲಾಗುವುದು’ ಎಂದು ಗುಡುಗಿದ್ದಾರೆ.

ಇದೇ ವೇಳೆ, ಲವ್‌ ಜಿಹಾದ್‌ ವಿರುದ್ಧ ಕಾನೂನು ರೂಪಿಸುವತ್ತ ಸರ್ಕಾರ ಕೆಲಸ ಮಾಡಲಿದೆ ಎಂದು ಪುನಃ ಹೇಳಿದ್ದಾರೆ.

‘ಕೇವಲ ಮದುವೆ ಉದ್ದೇಶಕ್ಕೆ ಮತಾಂತರ ಸಲ್ಲದು’ ಎಂಬ ಅಲಹಾಬಾದ್‌ ಹೈಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಯೋಗಿ, ‘ಮದುವೆಗಾಗಿ ಮತಾಂತರ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಸರ್ಕಾರ ಲವ್‌ ಜಿಹಾದ್‌ ತಡೆಗೆ ಕೆಲಸ ಮಾಡಲಿದ್ದು, ಕಾನೂನು ರೂಪಿಸಲಿದೆ. ಒಂದು ವೇಳೆ ತಮ್ಮ ಗುರುತು ಮುಚ್ಚಿಟ್ಟು ‘ನಮ್ಮ ಸೋದರಿಯರ’ ಜತೆ ಆಟವಾಡಲು ಯತ್ನಿಸಿದರೆ ಅಂಥವರ ‘ರಾಮ ನಾಮ ಸತ್ಯ ಹೈ’ (ಅಂತಿಮ ಯಾತ್ರೆ ವೇಳೆ ಹೇಳುವ ಮಂತ್ರ ಪಠಣ) ಆರಂಭವಾಗಲಿದೆ’ ಎಂದು ಎಚ್ಚರಿಸಿದರು.

ಆದರೆ ಈ ಹೇಳಿಕೆ ಭಾರೀ ಸುದ್ದಿಯಾಗುತ್ತಲೇ ಸ್ಪಷ್ಟನೆ ನೀಡಿರುವ ಯೋಗಿ, ನಾನು ರಾಮ ನಾಮ ಸತ್ಯ ಹೈ ಹೇಳಿಕೆ ನೀಡಿದ್ದು ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳನ್ನು ಉದ್ದೇಶಿಸಿ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು