
ಪ್ರಯಾಗ್ರಾಜ್ (ನ.01): ಕೇವಲ ಮದುವೆಯ ಸಲುವಾಗಿ ಧಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರಸ್ಪರ ಬೇರೆ ಧರ್ಮಕ್ಕೆ ಸೇರಿದ ಪ್ರಿಯಾಂಶಿ ಅಲಿಯಾಸ್ ಸಮ್ರೀನ್ ಹಾಗೂ ಆಕೆಯ ಪತಿಯು, ‘ನಮ್ಮ ವೈವಾಹಿಕ ಜೀವನದಲ್ಲಿ ವಧುವಿನ ತಂದೆ ಮಧ್ಯಪ್ರವೇಶಿಸುತ್ತಿದ್ದಾರೆ. ಹೀಗೆ ಮಾಡದಂತೆ ಅವರಿಗೆ ಸೂಚಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ಈ ಅರ್ಜಿಯನ್ನು ವಜಾ ಮಾಡಿ ಈ ಮೇಲಿನಂತೆ ತೀರ್ಪು ಪ್ರಕಟಿಸಿದೆ.
‘ಅರ್ಜಿದಾರಳಾದ ಪ್ರಿಯಾಂಶಿ ಅಲಿಯಾಸ್ ಸಮ್ರೀನ್, 2020ರ ಜೂನ್ 29ರಂದು ಮತಾಂತರಗೊಂಡು, ಜುಲೈ 31ರಂದು ಮದುವೆಯಾಗಿದ್ದಳು. ಇದರಿಂದಾಗಿ ಇದು ಕೇವಲ ಮದುವೆಗಾಗಿ ನಡೆದ ಧಾರ್ಮಿಕ ಮತಾಂತರ ಎಂದು ಸಾಬೀತಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘2014ರಲ್ಲಿ ನೂರ್ ಜಹಾನ್ ಬೇಗಂ ಪ್ರಕರಣದಲ್ಲಿ ಇದೇ ಹೈಕೋರ್ಟು, ‘ಮದುವೆಗೋಸ್ಕರ ಧಾರ್ಮಿಕ ಮತಾಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ