
ಕೋಟಾ: ಭಾರತ ಮೂಲತಃ ಹಿಂದೂ ರಾಷ್ಟ್ರ ಎಂದು ಹೇಳಿರುವ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್, ಹಿಂದೂ ಸಮಾಜವು ಭಾಷೆ, ಜಾತಿ, ಪ್ರಾದೇಶಿಕ ವಿವಾದಗಳ ಭಿನ್ನತೆಯನ್ನು ಮರೆತು ತನ್ನ ಸುರಕ್ಷತೆಗಾಗಿ ಒಗ್ಗೂಡಬೇಕು ಹಾಗೂ ಇತರರನ್ನೂ (ಇತರ ಸಮಾಜಗಳನ್ನೂ) ತನ್ನ ಜತೆಗೆ ಕರೆದುಕೊಂಡು ಹೋಗಬೇಕು ಎಂದು ಕರೆ ನೀಡಿದ್ದಾರೆ.
ರಾಜಸ್ಥಾನದ ಬರನ್ನಲ್ಲಿ ನಡೆದ ಸ್ವಯಂಸೇವಕ ಏಕತ್ರೀಕರಣ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಭಾರತ ಮೂಲತಃ ಹಿಂದೂ ರಾಷ್ಟ್ರ. ಅನಾದಿ ಕಾಲದಿಂದ ಇಲ್ಲಿ ವಾಸವಿದ್ದೇವೆ . ಆದರೆ ನಂತರ ಹಿಂದೂ ಪದ ಬಂತು. ಹಿಂದೂಗಳು ಎಲ್ಲರನ್ನೂ ತಮ್ಮವರೆಂದು ತಿಳಿದು ಸಹಬಾಳ್ವೆ ನಡೆಸುತ್ತಿದ್ದಾರೆ ಎಂದರು. ಜೊತೆಗೆ, ಶಿಸ್ತುಬದ್ಧ ನಡವಳಿಕೆ, ರಾಷ್ಟ್ರದ ಪ್ರತಿಯೊಬ್ಬನ ಕರ್ತವ್ಯ ಮತ್ತು ಗುರಿಗಳ ಹಿಂಬಾಲಿಸಲು ಪ್ರತಿಯೊಬ್ಬನ ಸಮರ್ಪಣೆ ಅಗತ್ಯ ಎಂದರು.
RSS ಭಾರತವನ್ನು ವಿಶ್ವಕ್ಕೆ ಮಾದರಿ ಸಮಾಜವನ್ನಾಗಿಸುತ್ತಿದೆ : ಮೋಹನ್ ಭಾಗವತ್
ಈ ವೇಳೆ, ಸಂಘದ ಕಾರ್ಯವಿಧಾನ ಯಾಂತ್ರಿಕವಲ್ಲ. ಅದು ಕಲ್ಪನೆ ಆಧರಿತ ಎಂದ ಭಾಗವತ್, ಇಲ್ಲಿ ಮೌಲ್ಯಗಳು ನಾಯಕರಿಂದ ಸ್ವಯಂಸೇವಕರಿಗೆ, ಅವರ ಪರಿವಾರಕ್ಕೆ ಹಾಗೂ ಸಮಾಜಕ್ಕೆ ರವಾನಿಸಲ್ಪಡುತ್ತದೆ ಎಂದರು. ಅಂತೆಯೇ ಸಮಾಜದೊಂದಿಗೆ ಕಾರ್ಯಕರ್ತರು ಸಂಪರ್ಕದಲ್ಲಿರಬೇಕು. ನಮ್ಮ ಗಮನ ಸಾಮಾಜಿಕ ಸಾಮರಸ್ಯ, ನ್ಯಾಯ, ಆರೋಗ್ಯ, ಶಿಕ್ಷಣ ಹಾಗೂ ಸ್ವಾವಲಂಬನೆಯ ಮೇಲಿರಬೇಕು ಎಂದು ಕಿವಿಮಾತು ಹೇಳಿದರು. ಭಾರತದ ಜಾಗತಿಕ ಖ್ಯಾತಿ ಮತ್ತು ಸ್ಥಾನ ಅದರ ಶಕ್ತಿಯಿಂದ ದೊರೆತಿದ್ದು. ರಾಷ್ಟ್ರ ಬಲಶಾಲಿಯಾದಾಗ ಮಾತ್ರರ ವಲಸಿಗರ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯ ಎಂದು ಭಾಗವತ್ ಹೇಳಿದರು.
ಕೆಲವರ ತಪ್ಪಿಗೆ ಸಮುದಾಯ ದೂಷಣೆ ತಪ್ಪು: ಭಾಗವತ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ