ಮನೆಗೆ ತೆರಳಲು ಸಿಗದ ವಾಹನ, ಸರ್ಕಾರಿ ಬಸ್‌ನ್ನೇ ಮನೆಗೆ ಕದ್ದೊಯ್ದ ಸಿಬ್ಬಂದಿ!

Published : Feb 19, 2020, 03:14 PM ISTUpdated : Feb 19, 2020, 03:21 PM IST
ಮನೆಗೆ ತೆರಳಲು ಸಿಗದ ವಾಹನ, ಸರ್ಕಾರಿ ಬಸ್‌ನ್ನೇ ಮನೆಗೆ ಕದ್ದೊಯ್ದ ಸಿಬ್ಬಂದಿ!

ಸಾರಾಂಶ

ಮನೆಗೆ ಹೋಗಲು ವಾಹನ ಇಲ್ಲವೆಂದು ಸರ್ಕಾರಿ ಬಸ್‌ನ್ನೇ ಏರಿ ಮನೆಗೆ ತೆರಳಿದ ವ್ಯಕ್ತಿ| ದೂರು ದಾಖಲಿಸಿದ ನಿಗಮ, ಕಳ್ಳನಿಗಾಗಿ ಪೊಲೀಸರ ಹುಡುಕಾಟ

ಮರಾವತಿ[ಫೆ.19]: ಹೈದರಾಬಾದ್‌ನಲ್ಲೊಬ್ಬ ವ್ಯಕ್ತಿ ಮನೆಗೆ ತೆರಳಲು ಯಾವುದೇ ವಾಹನ ಸಿಗದಾಗ ಸರ್ಕಾರಿ ಬಸ್‌ನ್ನೇ ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. TSRTC ಚಾಲಕ ತಾನು ನಿಲ್ಲಿಸಿದ್ದ ಬಸ್ ಕಾಣೆಯಾದಾಗ ಈ ವಿಚಾರ ಬೆಳಕಿಗೆ ಬಂದಿದ್ದು, ಏನಾಗಿದೆ ಎಂದು ಆರಂಭದಲ್ಲಿ ಯಾರಿಗೂ ತೋಚಿಲ್ಲ.

ಹೌದು ಭಾನುವಾರದಂದು ಈ ಘಟನೆ ನಡೆದಿದೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಒಂದನ್ನು ಸಿಬ್ಬಂದಿ ವಿಕಾರಾಬಾದ್ ಜಿಲ್ಲೆಯ ಒಂದು ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದರು.  ಆದರೆ ರಾತ್ರೋ ರಾತ್ರಿ ಕಳ್ಳತನವಾಗಿದೆ. ಇಲ್ಲಿ ಕೆಲಸಕ್ಕಿದ್ದ ಸಿಬ್ಬಂದಿಯೊಬ್ಬರು ಮನೆಗೆ ತೆರಳಲು ಯಾವುದೇ ವಾಹನ ಸಿಗದಾಗ ಬಸ್‌ನ್ನೇ ಕೊಂಡೊಯ್ದಿದ್ದಾರೆ. ಆದರೆ ಈ ವಿಚಾರ ತಿಳಿಯದ ನಿಗಮ ಸಿಬ್ಬಂದಿ, ಬಸ್‌ ಕಾಣೆಯಾಗಿರುವುದನ್ನು ಕಂಡು ಆತಂಕಕ್ಕೊಳಗಾಗಿದ್ದಾರೆ. ಏನಾಗಿದೆ ಎಂದು ಯಾರಿಗೂ ತಿಳಿಯಲಿಲ್ಲ. 

ನಂಬಿ ಬಂದಾಕೆ ಮೇಲೆ 8 ಸ್ನೇಹಿತರ ಜೊತೆ ಸೇರಿ ರೇಪ್!

ಇನ್ನು ಅತ್ತ ಬಸ್‌ ಕೊಂಡೊಯ್ದ ವ್ಯಕ್ತಿ, ಮನೆಗೆ ಹತ್ತಿರವಾಗುತ್ತಿದ್ದಂತೆಯೇ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ. ನಿಗಮ ದಾಖಲಿಸಿದ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕಳ್ಳನನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತನಿಖೆ ಮುಂದುವರೆಸಿರುವ ಪೊಲೀಸರು ಆತನನ್ನು ಪತ್ತೆ ಹಚ್ಚುವ ಕಾರ್ಯಕ್ಕಿಳಿದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!