2008 Ahmedabad Bomb Blasts: ಕೋರ್ಟ್‌ ತೀರ್ಪು ಶ್ಲಾಘಿಸಿ ಬಿಜೆಪಿ ಮಾಡಿದ್ದ ಪೋಸ್ಟ್‌ ತೆಗೆದ ಟ್ವಿಟರ್!

Published : Feb 21, 2022, 09:51 AM ISTUpdated : Feb 21, 2022, 09:53 AM IST
2008 Ahmedabad Bomb Blasts: ಕೋರ್ಟ್‌ ತೀರ್ಪು ಶ್ಲಾಘಿಸಿ ಬಿಜೆಪಿ ಮಾಡಿದ್ದ ಪೋಸ್ಟ್‌ ತೆಗೆದ ಟ್ವಿಟರ್!

ಸಾರಾಂಶ

 * ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ * 13 ವರ್ಷ ವಿಚಾರಣೆ ಬಳಿಕ 49 ಮಂದಿಗೆ ಶಿಕ್ಷೆ ಪ್ರಕಟ * 38 ಅಪರಾಧಿಗಳಿಗೆ ಗಲ್ಲು, 11 ಮಂದಿಗೆ ಜೀವಾವಧಿ ಶಿಕ್ಷೆ * ತೀರ್ಪನ್ನು ಶ್ಲಾಘಿಸಿ ಬಿಜೆಪಿ ಮಾಡಿದ್ದ ಪೋಸ್ಟ್‌ಗೆ ಟ್ವಿಟರ್ ಬ್ರೇಕ್

ಅಹಮದಾಬಾದ್(ಫೆ.21): 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ 38 ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ನಂತರ ಬಿಜೆಪಿ ಈ ಬಗ್ಗೆ ಪೋಸ್ಟ್‌ ಮಾಡಿದ್ದ ವ್ಯಂಗ್ಯಚಿತ್ರವನ್ನು 'ಟ್ವಿಟರ್ ತೆಗೆದುಹಾಕಿದೆ. ವಿಶೇಷ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿ, ನಿರ್ದಿಷ್ಟ ಪಕ್ಷದ ವಿರುದ್ಧ ಬಿಜೆಪಿಯ ವ್ಯಂಗ್ಯಚಿತ್ರವಿತ್ತು ಎಂಬುವುದು ಉಲ್ಲೇಖನೀಯ. ಇದನ್ನು ಬಿಜೆಪಿ ಗುಜರಾತ್ ಘಟಕ ಟ್ವೀಟ್ ಮಾಡಿತ್ತು. ವಿವಾದಾತ್ಮಕ ಪೋಸ್ಟ್ ಅನ್ನು ತೆಗೆದುಹಾಕಲು ಟ್ವಿಟರ್ ನಿರ್ಧರಿಸಿದೆ.

ಪೋಸ್ಟ್‌ ವಿರುದ್ಧ ಟ್ವಿಟರ್‌ಗೆ ವರದಿ

2008ರ ಸರಣಿ ಬಾಂಬ್ ಸ್ಫೋಟದ ತೀರ್ಪಿನ ಕುರಿತು ಪೋಸ್ಟ್‌ನ್ನು ಯಾರೋ ಒಬ್ಬರು ವರದಿ ಮಾಡಿದ ನಂತರ ಟ್ವಿಟರ್‌ನಿಂದ ಅದನ್ನು ತೆಗೆದುಹಾಕಲಾಗಿದೆ ಎಂದು ಗುಜರಾತ್ ಬಿಜೆಪಿ ವಕ್ತಾರ ಯಜ್ಞೇಶ್ ದವೆ ಭಾನುವಾರ ಹೇಳಿದ್ದಾರೆ. ಆದರೆ ಈ ಟ್ವೀಟ್ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯೆಯಾಗಿತ್ತು ಎಂದು ಬಿಜೆಪಿ ತಿಳಿಸಿದೆ. 

ವ್ಯಂಗ್ಯಚಿತ್ರದಲ್ಲಿ ಏನಿತ್ತು?

ಕುಣಿಕೆಯಿಂದ ನೇತಾಡುವ ಸ್ಕಲ್ ಕ್ಯಾಪ್ಗಳನ್ನು ಧರಿಸಿರುವ ಪುರುಷರನ್ನು ಕಾರ್ಟೂನ್ ಚಿತ್ರಿಸಲಾಗಿತ್ತು. ಇದು ತ್ರಿವರ್ಣ ಧ್ವಜವನ್ನು ಹೊಂದಿತ್ತು ಮತ್ತು ಹಿನ್ನಲೆಯಲ್ಲಿ ಬಾಂಬ್ ಸ್ಫೋಟದ ದೃಶ್ಯವನ್ನು ಚಿತ್ರಿಸುವ ದೃಶ್ಯವನ್ನೂ ಚಿತ್ರಿಸಲಾಗಿತ್ತು. ಮೇಲಿನ ಬಲ ಮೂಲೆಯಲ್ಲಿ "ಸತ್ಯಮೇವ್ ಜಯತೇ" ಎಂದು ಬರೆಯಲಾಗಿದೆ.

2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು 38 ಅಪರಾಧಿಗಳಿಗೆ ಮರಣದಂಡನೆ ಮತ್ತು 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಒಂದು ದಿನದ ನಂತರ ಶನಿವಾರ ಗುಜರಾತ್ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಸರಣಿ ಸ್ಫೋಟದಲ್ಲಿ 56 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

21 ಸ್ಫೋಟಗಳಿಂದ ಅಹಮದಾಬಾದ್ ನಲುಗಿತ್ತು, 56 ಮಂದಿ ಸಾವು

26 ಜುಲೈ 2008 ರಂದು, ಅಹಮದಾಬಾದ್ ನಗರದಲ್ಲಿ 70 ನಿಮಿಷಗಳ ಅಂತರದಲ್ಲಿ ಒಟ್ಟು 21 ಬಾಂಬ್ ಸ್ಫೋಟಗಳು (Bomb Blasts) ಸಂಭವಿಸಿದವು. ಈ ಬಾಂಬ್ ಸ್ಫೋಟದಲ್ಲಿ 56 ಮಂದಿ ಸಾವನ್ನಪ್ಪಿದ್ದರು. ಸ್ಫೋಟದಲ್ಲಿ ಸುಮಾರು 200 ಜನರು ಗಾಯಗೊಂಡಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸಂಬಂಧಿಸಿದ ವ್ಯಕ್ತಿಗಳು ಈ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಸಿಮಿಯೊಂದಿಗೆ ಸಂಯೋಜಿತ ಸಂಘಟನೆಯಾಗಿದೆ ಎಂದು ಹೇಳಲಾಗುತ್ತದೆ.

ಗೋದ್ರಾಗೆ ಸೇಡು?

2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರದ ಗಲಭೆಗೆ ಪ್ರತೀಕಾರ ತೀರಿಸಿಕೊಳ್ಳಲು ಇಂಡಿಯನ್ ಮುಜಾಹಿದ್ದೀನ್ ಈ ಸ್ಫೋಟ ನಡೆಸಿದೆ ಎಂದು ಆರೋಪದಲ್ಲಿ ಹೇಳಲಾಗಿದೆ. ಅಹಮದಾಬಾದ್‌ನಲ್ಲಿ ಸ್ಫೋಟದ ಕೆಲವು ದಿನಗಳ ನಂತರ, ಪೊಲೀಸರು ಸೂರತ್‌ನ ವಿವಿಧ ಸ್ಥಳಗಳಿಂದ ಬಾಂಬ್‌ಗಳನ್ನು ವಶಪಡಿಸಿಕೊಂಡರು. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಅಹಮದಾಬಾದ್‌ನಲ್ಲಿ 20 ಮತ್ತು ಸೂರತ್‌ನಲ್ಲಿ 15 ಎಫ್‌ಐಆರ್‌ಗಳು ದಾಖಲಾಗಿವೆ.

ಜೈಲಿನಲ್ಲಿ 213 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಲು ಯತ್ನ

ವಿಶೇಷ ನ್ಯಾಯಾಲಯವು ಆರಂಭದಲ್ಲಿ ಈ ಪ್ರಕರಣವನ್ನು ಸಾಬರಮತಿ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ನಡೆಸುತ್ತಿತ್ತು. ನಂತರ, ಹೆಚ್ಚಿನ ವಿಚಾರಣೆಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದವು. 2013ರಲ್ಲಿ ಈ ಪ್ರಕರಣದ ಕೆಲ ಆರೋಪಿಗಳು ಜೈಲಿನಲ್ಲಿ 213 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಲು ಯತ್ನಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?