
ನವದೆಹಲಿ (ಜೂ.8): ಕೆಲವರಿಗೆ ಇಂಥ ಖಾತೆಗಳು ಸಿಗಲಿವೆ, ಇಂಥವರೇ ಸಚಿವರಾಗತ್ತಾರೆ ಎಂಬ ಸುದ್ದಿಗಳು ಇತ್ತೀಚೆಗೆ ಬರುತ್ತಿವೆ. ಇವುಗಳಿಗೆ ಯಾವ ಎನ್ಡಿಎ ಸಂಸದರೂ ಬಲಿಯಾಗಬಾರದು. ಏಕೆಂದರೆ ಇವು ಇಂಡಿಯಾ ಕೂಟದ ಸುಳ್ಳು ಸುದ್ದಿ ಹರಡುವ ಸಂಚು ಇರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಎನ್ಡಿಎ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಸರ್ಕಾರ ರಚನೆ ಬಗ್ಗೆ ಕಳೆದೆರಡು ದಿನಗಳಿಂದ ಟಿವಿಯಲ್ಲಿ ಪ್ರಸಾರವಾಗುತ್ತಿರುವ ವಿಷಯಗಳಲ್ಲಿ ಹೆಚ್ಚಿನ ಸತ್ಯ ಕಂಡುಬಂದಿಲ್ಲ. ನನಗೆ ಚಾಲನೆಯಲ್ಲಿ ಯಾವುದೇ ಸತ್ಯ ಕಂಡುಬಂದಿಲ್ಲ, ಅಂತಹ ಮಾಹಿತಿಯು ಎಲ್ಲಿಂದ ಪಡೆಯುತ್ತದೆ ಎಂದು ಅವರನ್ನೇ ಕೇಳಬೇಕು’ ಎಂದು ಚಾಟಿ ಬೀಸಿದರು.
ಅಯೋಧ್ಯೆಯಲ್ಲೇ ಬಿಜೆಪಿಗೆ ಹೀನಾಯ ಸೋಲು; ಕಾರಣ ಬಿಚ್ಚಿಟ್ಟ ಪೇಜಾವರಶ್ರೀ!
‘ಕಳೆದ 10 ವರ್ಷಗಳಲ್ಲಿ ಇಂಥ ಸಂದರ್ಭ ಬಂದಿರಲಿಲ್ಲ. ಆದರೆ ಈಗ ಕೆಲವರು ಏಕಾಏಕಿ ಉತ್ಸಾಹಿತರಾಗಿದ್ದಾರೆ. ನನಗೆ ಪ್ರಭಾವಿಗಳು ಗೊತ್ತು. ನಿಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ನಿಮ್ಮ ಬಳಿ ಬರಬಹುದು. ಇಂಥವರು ತಾವೇ ಸಚಿವರ ಪಟ್ಟಿ ಸಿದ್ಧಪಡಿಸಿ ಖಾತೆ ಹಂಚಿಬಿಡಬಹುದು ಇದು. ಆ ಪಟ್ಟಿ ಹಿಡಿದು ನಿಮ್ಮ ಬಳಿ ಬಂದು ನಿಲ್ಲಬಹುದು.ಥ ಇಂಥವರ ಬಗ್ಗೆ ಹುಷಾರಿಂದ ಇರಿ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ