
ತಿರುಪತಿ(ಸೆ.14): ದೇವರಿಗೆ ಅರ್ಪಿಸಿದ ಹೂಗಳಿಂದ ತಯಾರಿಸಿದ ಅಗರಬತ್ತಿಗಳನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಸೋಮವಾರ ಬಿಡುಗಡೆ ಮಾಡಿದೆ.
ಬೆಂಗಳೂರು ಮೂಲದ ಕಂಪೆನಿ ಈ ಅಗರಬ ತ್ತಿಗಳನ್ನು ತಯಾರಿಸುತ್ತಿದೆ. ತಿರುಪತಿ ದೇವಸ್ಥಾನದ ಏಳು ಬೆಟ್ಟಗಳನ್ನು ಪ್ರತಿನಿಧಿಸುವಂತೆ, ಅಭಯಹಸ್ತ, ತಂದನಾನ, ದಿವ್ಯಪಾದ, ಆಕ್ರಿಷ್ಟಿ, ಸೃಷ್ಟಿ, ತೃಷ್ಟಿಮತ್ತು ದೃಷ್ಟಿಎನ್ನುವ 7 ಬ್ರಾಂಡ್ಗಳಲ್ಲಿ ಈ ಅಗರಬತ್ತಿಗಳನ್ನು ಉತ್ಪಾದಿಸಲಾಗುತ್ತಿದೆ.
ಬೆಂಗಳೂರು ಮೂಲದ ದರ್ಶನ್ ಇಂಟರ್ನ್ಯಾಷನಲ್ ಕಂಪೆನಿ ಈ ಅಗರಬತ್ತಿಗಳನ್ನು ತಯಾರಿಸುತ್ತದೆ. ‘ಅಗರಬತ್ತಿಗಳಿಗೆ ಕಚ್ಚಾವಸ್ತುವಾಗಿ ದೇವರಿಗೆ ಅರ್ಪಿಸಿದ ಹೂಗಳು, ದೇವಸ್ಥಾನದಲ್ಲಿ ನಡೆದ ಇತರ ಕಾರ್ಯಕ್ರಮಗಳ ಅಲಂಕಾರಕ್ಕೆ ಬಳಸಿದ ಹೂಗಳನ್ನು ಬಳಸಲಾಗುತ್ತದೆ. ಹೂಗಳು ಬಳಕೆಯಾದ 1 ದಿನದ ನಂತರ ಅವುಗಳನ್ನು ಅಗರಬತ್ತಿ ತಯಾರಿಕೆಗೆ ಬಳಸಲಾಗುತ್ತದೆ.
ಈ ಅಗರಬತ್ತಿಗಳನ್ನು ಲಾಡು ಮಾರಾಟ ಕೌಂಟರ್ ಬಳಿ ಮಾರಾಟ ಮಾಡಲಾಗುತ್ತದೆ’ ಎಂದು ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ