
ವಾಷಿಂಗ್ಟನ್/ನವದೆಹಲಿ: 'ಭಾರತೀಯ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ' ಎಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ಉಕ್ರೇನ್ ಯುದ್ಧದಲ್ಲಿ ಮಾಸ್ಕೋಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿ, ಭಾರತದ ಮೇಲಿನ ಸುಂಕವನ್ನು ಮತ್ತೆ ಹೆಚ್ಚಿಸುವ ಬೆದರಿಕೆ ಹಾಕಿದ್ದಾರೆ. ಭಾರತದ ಆರ್ಥಿಕತೆಯನ್ನು 'ಸತ್ತ ಆರ್ಥಿಕತೆ' ಎಂದು ಕರೆದಿರುವ ಟ್ರಂಪ್ರ ಹೇಳಿಕೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತದ ಕೊಡುಗೆ ಅಮೆರಿಕಕ್ಕಿಂತ ಹೆಚ್ಚು:
ಭಾರತೀಯ ಆರ್ಥಿಕತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದ ಅಭಿವೃದ್ಧಿಗೆ ಅಮೆರಿಕಕ್ಕಿಂತ ಹೆಚ್ಚಿನ ಕೊಡುಗೆ (18%) ನೀಡುತ್ತಿದೆ ಎಂದು ಪಿಟಿಐ ವರದಿಗೆ ತಿಳಿಸಿದ್ದಾರೆ. 2025ರಲ್ಲಿ ಭಾರತದ ಆರ್ಥಿಕತೆ 6.5% ದರದಲ್ಲಿ ಬೆಳೆಯಲಿದೆ, ಆದರೆ ಜಾಗತಿಕ ಬೆಳವಣಿಗೆಯ ದರ ಕೇವಲ 3% ಎಂದು ಅಂದಾಜಿಸಲಾಗಿದೆ, ಎಂದವರು ಹೇಳಿದ್ದಾರೆ.
ನಾಗರಿಕರ ಹಿತಾಸಕ್ತಿಯೇ ಮುಖ್ಯ:
ದೇಶದ ನಾಗರಿಕರ, ವಿಶೇಷವಾಗಿ ಕೆಳಮಟ್ಟದ ಜನರ ಕಲ್ಯಾಣವೇ ಆರ್ಬಿಐಗೆ ಅತ್ಯುನ್ನತ ಆದ್ಯತೆ ಎಂದು ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಯಿಂದ ದೇಶೀಯ ಹಣದುಬ್ಬರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಅವರು, ಅಗತ್ಯವಿದ್ದರೆ ಸರ್ಕಾರ ಸುಂಕ ಕಡಿಮೆ ಮಾಡುವ ಮೂಲಕ ಜನರಿಗೆ ಪರಿಹಾರ ನೀಡಬಹುದು ಎಂದು ಸೂಚಿಸಿದ್ದಾರೆ. ಭಾರತದ ಜನರ ಹಿತಾಸಕ್ತಿಗಾಗಿ ನಾವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಕೆಳಮಟ್ಟದ ಜನರೂ ಸೇರಿದಂತೆ ದೇಶದ ನಾಗರಿಕರೇ ನಮ್ಮ ಅಸ್ತಿತ್ವಕ್ಕೆ ಮೂಲ ಕಾರಣ ಎಂದು ಮಲ್ಹೋತ್ರಾ ಒತ್ತಿ ಹೇಳಿದ್ದಾರೆ.
ಈ ಬೆಳವಣಿಗೆಯು ಭಾರತ-ಅಮೆರಿಕ ಆರ್ಥಿಕ ಸಂಬಂಧಗಳಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ