
ನವದೆಹಲಿ(ಜ.24): ಕೋವಿಡ್ ಸೋಂಕು ದಿನೇದಿನೇ ಹೆಚ್ಚುತ್ತಿದ್ದರೂ ಅದು ಒಬ್ಬರಿಂದ ಒಬ್ಬರಿಗೆ ಹರಡುವ ಪ್ರಮಾಣ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಮುಂದಿನ 14 ದಿನಗಳಲ್ಲಿ ದೇಶದಲ್ಲಿ ಮೂರನೇ ಅಲೆ ಉಚ್ಛ್ರಾಯಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಐಐಟಿ ಮದ್ರಾಸ್ನ ಅಧ್ಯಯನ ಹೇಳಿದೆ.
ಜ.14-21ರ ನಡುವೆ ದೇಶದ ಸರಾಸರಿ ಆರ್ ದರ (ಒಬ್ಬ ಸೋಂಕಿತನಿಂದ ಎಷ್ಟುಜನರಿಗೆ ಕೋವಿಡ್ ಹರಡುತ್ತಿದೆ ಎಂಬುದನ್ನು ಹೇಳುವ ಪ್ರಮಾಣ) 1.57ಕ್ಕೆ ಇಳಿಕೆಯಾಗಿದೆ. ಇದು ಜ.7-13ರ ನಡುವೆ 2.2, ಜ.1-6ರ ನಡುವೆ 4 ಹಾಗೂ ಡಿ.25-31ರ ನಡುವೆ 2.9 ಇತ್ತು. ಇದು ದೇಶದಲ್ಲಿ ಕೋವಿಡ್ ಹರಡುವ ದರ ಗಣನೀಯವಾಗಿ ಇಳಿಕೆಯಾಗುತ್ತಿರುವುದರ ಸೂಚಕವಾಗಿದೆ. ಮುಂಬೈನಲ್ಲಿ ಈಗ ಆರ್ ದರ 0.67, ದೆಹಲಿಯಲ್ಲಿ 0.98, ಚೆನ್ನೈನಲ್ಲಿ 1.2 ಹಾಗೂ ಕೋಲ್ಕತಾದಲ್ಲಿ 0.56 ಇದೆ. ಬಹುತೇಕ ಫೆ.6ರೊಳಗೆ ದೇಶದಲ್ಲಿ ಕೋವಿಡ್ ಗರಿಷ್ಠಕ್ಕೆ ತಲುಪಲಿದೆ ಎಂದು ಅಧ್ಯಯನ ನಡೆಸಿದ ತಜ್ಞರು ಹೇಳಿದ್ದಾರೆ.
ಆರ್ ದರ 1ಕ್ಕಿಂತ ಕಡಿಮೆಯಾದರೆ ನಿರ್ದಿಷ್ಟಅಲೆ ಮುಗಿಯಿತು ಎಂದರ್ಥ. ಅಂದರೆ ಮುಂಬೈ, ದೆಹಲಿ ಹಾಗೂ ಕೋಲ್ಕತಾದಲ್ಲಿ ಈಗಾಗಲೇ 3ನೇ ಅಲೆ ಮುಗಿದಿರಬಹುದು ಎಂಬ ಸಂಗತಿ ಐಐಟಿ ಮದ್ರಾಸ್ನ ಅಧ್ಯಯನದಿಂದ ಪರೋಕ್ಷವಾಗಿ ಕಂಡುಬರುತ್ತಿದೆ.
ಯಾವ ನಗರದಲ್ಲಿ ಎಷ್ಟುಆರ್ ದರ?
ಮುಂಬೈ 0.67
ದೆಹಲಿ 0.98
ಚೆನ್ನೈ 1.2
ಕೋಲ್ಕತಾ 0.56
ಆರ್ ದರ ಇಳಿಕೆಯ ಹಾದಿ
ಜ.1-6ರ ನಡುವೆ 4
ಜ.7-13ರ ನಡುವೆ 2.2
ಜ.14-21ರ ನಡುವೆ 1.57
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ