ಕಲ್ಲು ರಾಡ್‌ಗಳಿಂದ ದಾಳಿ: ಚೀನಾ ಗಡಿಯಲ್ಲಿ ಗುಂಡಿನ ದಾಳಿ ಏಕೆ ನಡೆಯಲಿಲ್ಲ?

Published : Jun 17, 2020, 11:31 AM ISTUpdated : Jun 17, 2020, 04:10 PM IST
ಕಲ್ಲು ರಾಡ್‌ಗಳಿಂದ ದಾಳಿ: ಚೀನಾ ಗಡಿಯಲ್ಲಿ ಗುಂಡಿನ ದಾಳಿ ಏಕೆ ನಡೆಯಲಿಲ್ಲ?

ಸಾರಾಂಶ

ಹಿಂದೆ ಸರಿವ ನಾಟಕವಾಡಿ ಯೋಧರ ಮೇಲೆ ಕಲ್ಲು, ರಾಡ್‌ಗಳಿಂದ ದಾಳಿ| ಗುಂಡಿನ ದಾಳಿ ಏಕೆ ನಡೆಯಲಿಲ್ಲ?

ನವದೆಹಲಿ(ಜೂ.17): ಭಾರತ- ಚೀನಾ ಯೋಧರ ನಡುವೆ ಹಲವು ತಾಸು ಹೊಡೆದಾಟ ನಡೆದು, ಉಭಯ ದೇಶಗಳ ಸೈನಿಕರು ಸಾವಿಗೀಡಾಗಿದ್ದಾರೆ. ಆದರೆ ಈ ದಾಳಿ ಕಲ್ಲು, ಡಿಗೆ, ರಾಡ್‌ಗಳಿಂದ ನಡೆದಿfದೆ ಎನ್ನಲಾಗಿದೆ. ಸಾಮಾನ್ಯವಾಗಿ ಗಡಿಯಲಲ್ಲಿ ಗುಂಡಿನ ದಾಳಿ ನಡೆಯುತ್ತದೆ. ಆದರೆ ಇಲ್ಲಿ ಯಾಕೆ ಹಾಗಾಗಿಲ್ಲ? ಇಲ್ಲಿದೆ ಕಾರಣ

ಕತ್ತಲಾಗುತ್ತಿದ್ದಂತೆ ಚೀನಿಯರಿಂದ ಕಲ್ಲು, ಬಡಿಗೆಯಿಂದ ಭಾರತೀಯರ ಸೈನಿಕರ ಕಗ್ಗೊಲೆ!

ಎರಡೂ ದೇಶಗಳ ಯೋಧರ ನಡುವೆ ಗುಂಡಿನ ಚಕಮಕಿ ನಡೆಯದಿರುವುದಕ್ಕೆ ಕಾರಣ- ಒಪ್ಪಂದಗಳು. 1993ರಲ್ಲಿ ಭಾರತ- ಚೀನಾ ನಡುವೆ ಏರ್ಪಟ್ಟಿರುವ ಒಪ್ಪಂದದ ಪ್ರಕಾರ, ಉಭಯ ದೇಶಗಳ ಪೈಕಿ ಯಾವುದೇ ದೇಶದ ಸೈನಿಕರು ಗಡಿ ದಾಟಿ ಬಂದರೆ, ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು. 1996ರ ಒಪ್ಪಂದದ ಪ್ರಕಾರ, ಗಡಿ ವಾಸ್ತವಿಕ ರೇಖೆಯ 2 ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ದೇಶ ಗುಂಡಿನ ದಾಳಿ ಅಥವಾ ಸ್ಫೋಟ ನಡೆಸಕೂಡದು. ಹೀಗಾಗಿ ಎರಡೂ ದೇಶಗಳ ಯೋಧರು ಗಡಿಯಲ್ಲಿ ಶಸ್ತ್ರಾಸ್ತ್ರ ತೋರಿಸುವುದಿಲ್ಲ.

ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ಮಾಡುವ ಮೂಲಕ ಚೀನಾ 1993, 1996 ಮತ್ತು 2013ರಲ್ಲಿ ಮಾಡಿಕೊಳ್ಳಲಾದ ಗಡಿ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದೆ. 1993ರ ಒಪ್ಪಂದದ ಪ್ರಕಾರ, ಒಂದು ವೇಳೆ ಉಭಯ ಪಡೆಗಳ ಯಾವುದೇ ಯೋಧರು ಗಡಿ ದಾಟಿ ಒಳಗೆ ಬಂದರೆ ಅವರನ್ನು ವಾಪಸ್‌ ವಾಪಸ್‌ ಕುಳುಹಿಸಬೇಕು. ಆದರೆ, ಚೀನಾ ಗಲ್ವಾನ್‌ನಲ್ಲಿ ಈ ನಿಯಮ ಪಾಲಿಸಿಲ್ಲ.

ಗಡಿ ಸಂಘರ್ಷ: ಭಾರತ ಸೇನೆ ಕೊಟ್ಟ ಎದುರೇಟಿಗೆ 43 ಚೀನಾ ಸೈನಿಕರು ಮಟಾಶ್

1996ರ ಒಪ್ಪಂದದ ಪ್ರಕಾರ, ಗಡಿಯಲ್ಲಿ ಉಭಯ ಪಡೆಗಳ ಯೋಧರು ಮುಖಾಮುಖಿಯಾದರೆ, ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು, ಆಕ್ರಮಣಕ್ಕೆ ಮುಂದಾಗಬಾರದು. ಅದೇ ರೀತಿ 2013ರ ಒಪ್ಪಂದದ ಪ್ರಕಾರ, ಗಡಿಯನ್ನು ಗುರುತಿಸಲು ಸಾಧ್ಯವಾಗದೇ ಇದ್ದಲ್ಲಿ ಗಡಿಯಲ್ಲಿ ಕಾವಲು ಕಾಯುವುದನ್ನು ನಿಲ್ಲಿಬೇಕು ಎಂದು ತಿಳಿಸಲಾಗಿದೆ. ಆದರೆ, ಈ ಮೂರು ಒಪ್ಪಂದದಲ್ಲಿನ ಯಾವುದೇ ಅಂಶವನ್ನು ಚೀನಾ ಗಲ್ವಾನ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಲಿಸಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಆರೋಪ ಸಾಬೀತು : ಪಾಕ್‌ ಐಎಸ್‌ಐ ಮಾಜಿ ಮುಖ್ಯಸ್ಥ ಹಮೀದ್‌ಗೆ 14 ವರ್ಷ ಜೈಲು