ಇದನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ವಿವಿಪ್ಯಾಟ್‌ ಬಗ್ಗೆ ಕಾಂಗ್ರೆಸ್‌ ಶಂಕೆಗೆ ಚುನಾವಣಾ ಆಯೋಗ ಪತ್ರ

Published : Jan 06, 2024, 07:26 AM IST
ಇದನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ವಿವಿಪ್ಯಾಟ್‌ ಬಗ್ಗೆ ಕಾಂಗ್ರೆಸ್‌ ಶಂಕೆಗೆ ಚುನಾವಣಾ ಆಯೋಗ ಪತ್ರ

ಸಾರಾಂಶ

ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ದಲ್ಲಿ ಮತದಾನ ಮಾಡಿದ ಬಳಿಕ ಯಾರಿಗೆ ಮತ ಚಲಾವಣೆಯಾಗಿದೆ ಎಂಬುದರ ಚೀಟಿಯನ್ನು ತೋರಿಸುವ ವಿವಿಪ್ಯಾಟ್‌ ಯಂತ್ರದ ಬಗ್ಗೆ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ವ್ಯಕ್ತಪಡಿಸಿದ್ದ ಅನುಮಾನಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ನವದೆಹಲಿ: ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ದಲ್ಲಿ ಮತದಾನ ಮಾಡಿದ ಬಳಿಕ ಯಾರಿಗೆ ಮತ ಚಲಾವಣೆಯಾಗಿದೆ ಎಂಬುದರ ಚೀಟಿಯನ್ನು ತೋರಿಸುವ ವಿವಿಪ್ಯಾಟ್‌ ಯಂತ್ರದ ಬಗ್ಗೆ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ವ್ಯಕ್ತಪಡಿಸಿದ್ದ ಅನುಮಾನಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಈ ಕುರಿತು ಜೈರಾಂ ರಮೇಶ್‌ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ, ನಿಮ್ಮ ಅನುಮಾನದಲ್ಲಿ ಹುರುಳಿಲ್ಲ. ವಿವಿಪ್ಯಾಟ್‌ ವ್ಯವಸ್ಥೆಯನ್ನು 2013ರಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಜಾರಿಗೆ ತಂದಿದೆ. ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ನಮಗೆ ಸಂಪೂರ್ಣ ನಂಬಿಕೆಯಿದೆ. ಇದರ ವಿಶ್ವಾಸಾರ್ಹತೆ ಹಾಗೂ ಕಾನೂನುಬದ್ಧತೆ ಬಗ್ಗೆ ನಮ್ಮ ವೆಬ್‌ಸೈಟಿನಲ್ಲಿ ಉಲ್ಲೇಖಿಸಲಾಗಿದೆ. ಚುನಾವಣಾ ನಿಯಮಾವಳಿಯ 49ಎ ಮತ್ತು 49ಎಂ ನಲ್ಲಿ ವಿವಿಪ್ಯಾಟ್‌ಗಳ ಬಗ್ಗೆ ಹೇಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಒಂದು ದೇಶ, ಒಂದು ಚುನಾವಣೆಗೆ ಬೇಕು 30 ಲಕ್ಷ ಇವಿಎಂ..!

ಕಳೆದ ತಿಂಗಳು ನಡೆದ ‘ಇಂಡಿಯಾ’ ಕೂಟದ ಸಭೆಯಲ್ಲಿ ವಿರೋಧ ಪಕ್ಷಗಳು ಇವಿಎಂ ಹಾಗೂ ವಿವಿಪ್ಯಾಟ್‌ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಮತದಾರರ ಕೈಗೆ ನೀಡಬೇಕು ಮತ್ತು ಅವರೇ ಅದನ್ನು ಪ್ರತ್ಯೇಕ ಬಾಕ್ಸ್‌ಗೆ ಹಾಕುವಂತೆ ಮಾಡಬೇಕು ಎಂದು ಹೇಳಿದ್ದವು. ಈ ಬಗ್ಗೆ ಡಿ.30ರಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಜೈರಾಂ ರಮೇಶ್‌, ‘ಇಂಡಿಯಾ’ ಕೂಟದ ಕಳವಳಗಳನ್ನು ಆಯೋಗ ಆಲಿಸಬೇಕು ಎಂದು ಕೋರಿದ್ದರು.

ಈ ಕುರಿತು ಪತ್ರದಲ್ಲಿ ಸುದೀರ್ಘ ಸ್ಪಷ್ಟನೆ ನೀಡಿ, ಜೈರಾಂ ಅವರ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಪ್ರತಿ ವಿವಿಪ್ಯಾಟ್‌ ಸ್ಲಿಪ್‌ ಎಣಿಕೆಗೆ ಚುನಾವಣಾ ಆಯೋಗ ವಿರೋಧ: ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್