
ನವದೆಹಲಿ (ಮಾ.20): ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬುಧವಾರ ಐಟಿ ನಿಯಮಗಳ ಅಡಿಯಲ್ಲಿ ಫ್ಯಾಕ್ಟ್ ಚೆಕ್ ಯುನಿಟ್ಗಳಿಗೆ (ಎಫ್ಸಿಯು) ಅಧಿಸೂಚನೆ ಹೊರಡಿಸಿದೆ. "ಕೇಂದ್ರ ಸರ್ಕಾರದ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಅಡಿಯಲ್ಲಿ ಫ್ಯಾಕ್ಟ್ ಚೆಕ್ ಯುನಿಟ್ಅನ್ನು ಆರಂಭಿಸಿಲಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2023ರ ಏಪ್ರಿಲ್ 6 ರಂದು ಇಂಥದ್ದೊಂದು ಘಟಕಗಳನ್ನು ತೆರೆಯುವ ಬಗ್ಗೆ ನಿರ್ಧಾರ ಮಾಡಿತ್ತು. ಅದರಂತೆ ಐಟಿ ನಿಯಮಗಳ ತಿದ್ದುಪಡಿಗಳು "ಸರ್ಕಾರಕ್ಕೆ ಸಂಬಂಧಿಸಿದ ನಕಲಿ, ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಆನ್ಲೈನ್ ವಿಷಯವನ್ನು" ಗುರುತಿಸಲು ಮತ್ತು ಸೂಚನೆ ನೀಡಲು ಎಫ್ಸಿಯುಅನ್ನು ಪರಿಚಯಿಸಿವೆ. ಈ ಘಟಕಗಳು ಯಾವುದೇ ವಿಚಾರವನ್ನು ಫ್ಲ್ಯಾಗ್ ಮಾಡಿದಲ್ಲಿ, ಸೋಶಿಯಲ್ ಮೀಡಿಯಾಗಳು ಈ ವಿಷಯವನ್ನು ತೆಗೆದು ಹಾಕುವ ಮತ್ತು ಡಿಸ್ಕ್ಲೈಮರ್ ಅನ್ನು ಹಾಕುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ, ಡಿಸ್ಕ್ಲೈಮರ್ ಆಯ್ಕೆ ಮಾಡಿಕೊಂಡಲ್ಲಿ ಅವರು ಕಾನೂನು ವಿನಾಯಿತಿಯನ್ನು ಕಳೆದುಕೊಳ್ಳಲಿದ್ದು, ಪ್ರಕಟಿಸಿದ ವಿಚಾರಕ್ಕೆ ಕಾನೂನು ಪರಿಣಾಮಗಳನ್ನು ಎದುರಿಸಲಿದ್ದಾರೆ.
ಸರ್ಕಾರಿ ಬೆಂಬಲಿತ ಫ್ಯಾಕ್ಟ್ ಚೆಕಿಂಗ್ ಯುನಿಟ್ನ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಹಾಗೂ ಇದರ ಸ್ಥಾಪನೆಗೆ ತಡೆ ಕೋರಿ ಎಡಿಟರ್ಸ್ ಗಿಲ್ಡ್ ಮತ್ತು ಕುನಾಲ್ ಕಮ್ರಾ ಸಲ್ಲಿಸಿದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕಾರ ಮಾಡಿತ್ತು. ಅದರ ಬೆನ್ನಲ್ಲಿಯೇ ಈ ಅಧಿಸೂಚನೆ ಪ್ರಕಟವಾಗಿದೆ. ಐಟಿ ನಿಯಮಗಳ ಅಡಿಯಲ್ಲಿ ಸತ್ಯ ತಪಾಸಣೆ ಘಟಕವನ್ನು ಸ್ಥಾಪಿಸಲು ಅವಕಾಶ ನೀಡುವುದರಿಂದ ಯಾವುದೇ ಗಂಭೀರ ಮತ್ತು ಸರಿಪಡಿಸಲಾಗದ ನಷ್ಟ ಉಂಟಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಗುರುವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
2023ರ ಏಪ್ರಿಲ್ 6 ರಂದು, ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ಗೆ ಕೆಲವು ತಿದ್ದುಪಡಿಗಳನ್ನು ಘೋಷಿಸಿತು, ಇದರಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ನಕಲಿ, ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಆನ್ಲೈನ್ ವಿಷಯವನ್ನು ಫ್ಲ್ಯಾಗ್ ಮಾಡಲು ಎಫ್ಸಿಯುಗೆ ಅವಕಾಶ ನೀಡಲಿದೆ.
ಸುಳ್ಳುಸುದ್ದಿ ತಡೆಗೆ Fact check unit: ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್
ಐಟಿ ನಿಯಮಗಳ ಅಡಿಯಲ್ಲಿ, ನಕಲಿ, ಸುಳ್ಳು ಮತ್ತು ಸರ್ಕಾರದ ವ್ಯವಹಾರದ ಬಗ್ಗೆ ತಪ್ಪುದಾರಿಗೆಳೆಯುವ ಸಂಗತಿಗಳನ್ನು ಒಳಗೊಂಡಿರುವ ಯಾವುದೇ ಪೋಸ್ಟ್ಗಳನ್ನು ಎಫ್ಸಿಯು ಕಂಡರೆ ಅಥವಾ ತಿಳಿಸಿದರೆ, ಅದು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಫ್ಲ್ಯಾಗ್ ಮಾಡುತ್ತದೆ. ಅಂತಹ ಪೋಸ್ಟ್ ಅನ್ನು ಫ್ಲ್ಯಾಗ್ ಆಫ್ ಮಾಡಿದ ನಂತರ, ಮಧ್ಯವರ್ತಿಯು ಪೋಸ್ಟ್ ಅನ್ನು ತೆಗೆದುಹಾಕುವ ಅಥವಾ ಅದರ ಮೇಲೆ ಹಕ್ಕು ನಿರಾಕರಣೆ ಹಾಕುವ ಆಯ್ಕೆಯನ್ನು ಹೊಂದಿರುತ್ತಾನೆ ಎಂದು ಪಿಟಿಐ ವರದಿ ಮಾಡಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಫೇಕ್ನ್ಯೂಸ್ ಹೆಚ್ಚಳ ಸಾಧ್ಯತೆ; ವರ್ಲ್ಡ್ ಎಕನಾಮಿಕ್ ಫೋರಂ ಕೊಟ್ಟ ಎಚ್ಚರಿಕೆ ಏನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ