ಅಮ್ಮನ ಚೆನ್ನಾಗಿ ನೋಡಿಕೋ, ಚೆನ್ನಾಗಿ ಓದು, ಸ್ಟೀಲ್ ಪ್ಲಾಂಟ್ ದುರಂತ ಗಾಯಾಳುವಿನ ಕೊನೆಯ ಮಾತು

Published : Jun 09, 2026, 03:31 PM IST
Victim Heartbreaking Final Message

ಸಾರಾಂಶ

ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು, ನೀನು ಚೆನ್ನಾಗಿ ಓದಬೇಕು. ಇದು ವಿಶಿಖಾಪಟ್ಟಣಂನ ಸ್ಟೀಲ್ ಘಟಕದಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಕಾರ್ಮಿಕ ಸಾವಿಗೂ ಮುನ್ನ ಆಡಿದ ಕೊನೆಯ ಮಾತು. ಇದೀಗ ಎಲ್ಲರ ಕಣ್ಣಾಲಿ ತೇವಗೊಳಿಸಿದೆ.

ವಿಶಾಖಪಟ್ಟಂ (ಜೂ.09) ವಿಶಾಖಪಟ್ಟಣಂ ಉಕ್ಕಿನ ಘಟಕದಲ್ಲಿ ನಡೆದ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಜೂನ್ 8 ರಂದು ನಡೆದಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ಗೆ ಭೇಟಿ ನೀಡಿದ್ದಾರೆ. ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಾಳುಗಳಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕಬ್ಬಿಣದ ದ್ರವ ಕಾರ್ಮಿಕರ ಮೇಲೆ ಬಿದ್ದು ದುರಂತ ಸಂಭವಿಸಿತ್ತು. ಈ ಪೈಕಿ ಗಂಭೀರವಾಗಿ ಗಾಯಗೊಂಡ ಕಾರ್ಮಿಕ ಆಡಿದ ಕೊನೆಯ ಮಾತಿಗೆ ಆತನ ಕುಟುಂಬ ಮಾತ್ರವಲ್ಲ ದೇಶವೇ ಕಣ್ಣೀರಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾರ್ಮಿಕ ಕೊನೆಯದಾಗಿ ಮಗನಿಗೆ ಸಂದೇಶ ರವಾನಿಸಿದ್ದಾರೆ. ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು, ನೀನು ಚೆನ್ನಾಗಿ ಓದಬೇಕು ಎಂಬ ಸಂದೇಶ ರವಾನಿಸಿ ನಿಧನರಾಗಿದ್ದಾರೆ.

ನೀವಿಬ್ಬರು ಚೆನ್ನಾಗಿ ಓದಬೇಕು

ಸ್ಟೀಲ್ ಪ್ಲಾಂಟ್‌ನಲ್ಲಿ ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೇಲ ಕಾರ್ಮಿಕರು ಮೃತಪಟ್ಟಿದ್ದರು. ಈ ಪೈಕಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಆಸ್ಪತ್ರೆ ಐಸಿಯುವಿನಿಂದ ವಿಡಿಯೋ ಮೂಲಕ ಮಗನಿಗೆ ಸಂದೇಶ ನೀಡಿದ್ದಾರೆ. ನೀನು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ತಂಗಿಯನ್ನು ನೋಡಿಕೊಳ್ಳೋ ಜವಾಬ್ದಾರಿ ನಿನ್ನದು.ನೀವಿಬ್ಬರು ಕೂಡ ಅಷ್ಟೇ ಚೆನ್ನಾಗಿ ಓದಬೇಕು. ಯಾವುದೇ ಕಾರಣಕ್ಕೂ ಓದು ನಿಲ್ಲಿಸಬಾರದು ಎಂದಿದ್ದಾರೆ. ಈ ಸಂದೇಶ ನೀಡಿದ ಕೆಲವೇ ಕ್ಷಣದಲ್ಲಿ ಕಾರ್ಮಿಕ ಮೃತಪಟ್ಟಿದ್ದಾರೆ.

ಕಾರ್ಮಿಕನ ಕಣ್ಣು, ಮುಖ ತುಂಬಾ ಬ್ಯಾಂಡೇಜ್ ಹಾಕಲಾಗಿತ್ತು. ಉಸಿರಾಡಲು ಸಾಧ್ಯವಾಗದೇ, ಇತ್ತ ಸಾವು ಬದುಕಿನ ನಡುವಿನ ಹೋರಾಟದಲ್ಲೂ ಕಾರ್ಮಿಕ ತನ್ನ ಮಕ್ಕಳಿಗೆ ಧೈರ್ಯ ತುಂಬಿದ್ದಾನೆ. ಭಾರತದಲ್ಲೇ ಯಾಕೆ ಇಷ್ಟು ದುರಂತ ಸಂಭವಿಸುತ್ತಿದೆ. ಯಾಕ ಈ ಪರಿ ನಿರ್ಲಕ್ಷ್ಯ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಕಾರ್ಖಾನೆ ನಿರ್ಲಕ್ಷ್ಯಕ್ಕೆ ಹಲವು ಜೀವಗಳು ಬಲಿ

ಕಾರ್ಖಾನೆ ಮಾಲೀಕರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ದುರಂತ ಸಂಭವಿಸಿದೆ ಎಂಬ ಆರೋಪಗಳು ಕೇಳಿಬಂದಿದೆ. ಕರಗಿದ ಕಬ್ಬಿಣ ತುಂಬಿದ್ದ ಪಾತ್ರೆಯಿಂದ ದ್ರವ ಕಾರ್ಮಿಕರ ಮೇಲೆ ಬಿದ್ದಿದೆ. ಶೇಕಡಾ 90ಕ್ಕೂ ಹೆಚ್ಚಿನ ಪ್ರಮಾಣದ ಸುಟ್ಟ ಗಾಯಗಳಿಂದ ಗಾಯಗೊಂಡ 8 ಕಾರ್ಮಿಕರು ಮೃತಪಟ್ಟಿದ್ದಾರೆ. ಕಾರ್ಖಾನೆ ಸೂಕ್ತ ಕ್ರಮ ಕೈಗೊಂಡಿದ್ದರೆ ಈ ದುರಂತ ತಪ್ಪಿಸಬಹುದಿತ್ತು. ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.

ಕಾರ್ಮಿಕರ ಕುಟುಂಬದಿಂದ ಪ್ರತಿಭಟನೆ

ಕಾರ್ಖಾನೆ ನಿರ್ಲಕ್ಷ್ಯಕ್ಕೆ ಕಾರ್ಮಿಕರು ಬಲಿಯಾಗಿದ್ದಾರೆ ಎಂದು ಆರೋಪಿಸಿ ಕಾರ್ಮಿಕರ ಕುಟುಂಬಗಳು ಪ್ರತಿಭಟನೆ ನಡೆಸಿದೆ. ಕುಟುಂಬಕ್ಕೆ ಕಾರ್ಖನೆಯಿಂದ ಸೂಕ್ತ ಪರಿಹಾರ ನೀಡಬೇಕು. ಮೃತರ ಮಕ್ಕಳಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ಮಾವಿನ ಹಣ್ಣು ಆಮದಿಗೆ ನಿಷೇಧ ಹೇರಿದ ನೇಪಾಳ, ಅತೀ ರುಚಿಕರ ಹಣ್ಣು ಬ್ಯಾನ್ ಆಗಿದ್ದೇಕೆ?
ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಟಿಟಿಇ ಮೇಲೆ ಹಲ್ಲೆ ಮಾಡಿದ ಯುವತಿ: ವೈರಲ್ ವಿಡಿಯೋದ ಅಸಲಿಯತ್ತೇನು?