ಸುವೇಂದು ತಂದೆ ಶಿಶಿರ್‌ ಬಿಜೆಪಿಗೆ!

By Kannadaprabha NewsFirst Published Mar 22, 2021, 8:28 AM IST
Highlights

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್| ಸುವೇಂದು ಬೆನ್ನಲ್ಲೇ ತಂದೆಯೂ ಬಿಜೆಪಿಗೆ

ಈಗ್ರಾ(ಮಾ.22): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಗೆ ಮತ್ತೊಂದು ಆಘಾತ ಎದುರಾಗಿದೆ.

ಟಿಎಂಸಿ ಹಿರಿಯ ಸಂಸದ ಶಿಶಿರ್‌ ಅಧಿಕಾರಿ ಭಾನುವಾರ ಗೃಹ ಸಚಿವ ಅಮಿತ್‌ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಬಳಿಕ ಮಾತನಾಡಿದ ಶಿಶಿರ್‌ ಅಧಿಕಾರಿ ಅವರು, ‘ನಮ್ಮ ಕುಟುಂಬವನ್ನು ಟಿಎಂಸಿ ಹೊರಹಾಕಿದ ರೀತಿ ಇತಿಹಾಸದಲ್ಲಿ ಶಾಶ್ವತವಾಗಿ ಬರೆಯಲ್ಪಡುತ್ತದೆ. ಆದರೆ ನಾವು ಎಲ್ಲಾ ರಾಜಕೀಯ ದಾಳಿ ಮತ್ತು ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲುತ್ತೇವೆ. ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರ ಮುಂದಾಳತ್ವದಲ್ಲಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಶಿಶಿರ್‌, ಇತ್ತೀಚೆಗಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರ ತಂದೆ.

click me!