ಜ್ಞಾನವಾಪಿ ಸರ್ವೇ ಮುಕ್ತಾಯ, ಕೋರ್ಟ್‌ಗೆ ವರದಿ ಸಲ್ಲಿಸಲಿರುವ ಎಎಸ್‌ಐ!

Published : Nov 16, 2023, 06:25 PM IST
ಜ್ಞಾನವಾಪಿ ಸರ್ವೇ ಮುಕ್ತಾಯ, ಕೋರ್ಟ್‌ಗೆ ವರದಿ ಸಲ್ಲಿಸಲಿರುವ ಎಎಸ್‌ಐ!

ಸಾರಾಂಶ

ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ನಂತರ ನಡೆದ ಜ್ಞಾನವಾಪಿ ಸಂಕೀರ್ಣದಲ್ಲಿ ಎಎಸ್‌ಐ ವೈಜ್ಞಾನಿಕ ಸಮೀಕ್ಷೆ ಗುರುವಾರ ಕೊನೆಯಾಗಿದೆ. 100ಕ್ಕೂ ಹೆಚ್ಚು ದಿನಗಳ ಸಮೀಕ್ಷೆಯ ಬಳಿಕ ಇದೀಗ ನವೆಂಬರ್ 17ರಂದು ಎಎಸ್‌ಐ ತಂಡ ತನ್ನ ವಿಸ್ತೃತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಸಮೀಕ್ಷೆ ವೇಳೆ ಪತ್ತೆಯಾದ ಅವಶೇಷಗಳನ್ನು ಲಾಕರ್‌ನಲ್ಲಿ ಇಡಲಾಗಿದೆ.  

ನವದೆಹಲಿ (ನ.16): ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡದ ನಿರಂತರ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಇಂದು (ನವೆಂಬರ್ 16) ಸಮೀಕ್ಷೆಯ ಕೊನೆಯ ದಿನವಾಗಿತ್ತು. 100 ದಿನಗಳ ಎಎಸ್‌ಐ ಸಮೀಕ್ಷೆಯ ನಂತರ, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ನಾಳೆ (ನವೆಂಬರ್ 17) ಸಲ್ಲಿಸಲಾಗುತ್ತದೆ.. ಸಮೀಕ್ಷೆಯ ಸಮಯದಲ್ಲಿ 250 ಕ್ಕೂ ಹೆಚ್ಚು ಅವಶೇಷಗಳನ್ನು ಸಂರಕ್ಷಿಸಲಾಗಿದೆ. ಇದಲ್ಲದೇ ಇತರೆ ಸಾಕ್ಷ್ಯಗಳನ್ನು ಕೂಡ ಸಂಗ್ರಹಿಸಲಾಗಿದೆ. ಅವರೆಲ್ಲರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಜುಲೈ 21 ರಂದು, ಜಿಲ್ಲಾ ನ್ಯಾಯಾಧೀಶರು ಜ್ಞಾನವಾಪಿಯ ವಜುಖಾನಾ ಹೊರತುಪಡಿಸಿ ಉಳಿದ ಸ್ಥಳಗಳ ಎಎಸ್‌ಐ ಸಮೀಕ್ಷೆಗೆ ಆದೇಶ ನೀಡಿದ್ದರು. ಜುಲೈ 24ರಂದು ಸರ್ವೆ ಕಾರ್ಯ ಆರಂಭಗೊಂಡಿದ್ದರೂ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಸರ್ವೆ ಕಾರ್ಯ ಸ್ಥಗಿತಗೊಂಡಿತ್ತು. ಮುಸ್ಲಿಂ ಕಡೆಯವರು ಸರ್ವೆ ಕಾರ್ಯವನ್ನು ರದ್ದು ಮಾಡುವಂತೆ ಮನವಿ ಮಾಡಿದ್ದರು.

ಮಧ್ಯಂತರ ತಡೆಯಾಜ್ಞೆ ನೀಡಿದ ನಂತರ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ಮುಸ್ಲಿಂ ಪಕ್ಷವನ್ನು ಕೇಳಿತ್ತು. ಜುಲೈ 27ರಂದು ನಡೆದ ವಿಚಾರಣೆ ವೇಳೆ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಮತ್ತು ಆಗಸ್ಟ್ 3 ರಂದು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪೀಠವು ಮುಸ್ಲಿಂ ಕಡೆಯ ಅರ್ಜಿಯನ್ನು ತಿರಸ್ಕರಿಸಿದ್ದಲ್ಲದೆ, ಸಮೀಕ್ಷೆ ಕಾರ್ಯ ಮುಂದುವರಿಸುವಂತೆ ತಿಳಿಸಿತ್ತು.

ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ, ಆಗಸ್ಟ್ 4 ರಂದು ಮತ್ತೆ ಸರ್ವೆ ಕಾರ್ಯ ಪ್ರಾರಂಭವಾಯಿತು, ಮುಸ್ಲಿಂ ಕಡೆಯವರು ಮತ್ತೆ ಸುಪ್ರೀಂ ಕೋರ್ಟ್ ಅನ್ನು ತಲುಪಿದರು, ಅಲ್ಲಿ ನ್ಯಾಯಾಲಯವು ಪರಿಹಾರ ನೀಡಲು ನಿರಾಕರಿಸಿತು. ಈ ಮೂಲಕ ಜ್ಞಾನವಾಪಿ ಎಎಸ್ ಐ ಸಮೀಕ್ಷೆಗೆ ಹಾದಿ ಸುಗಮವಾಯಿತು.

ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ಸಮೀಕ್ಷೆ: ನ್ಯಾಯಾಲಯದ ಆದೇಶದ ನಂತರ ಜ್ಞಾನವಾಪಿ ಕಾಂಪ್ಲೆಕ್ಸ್‌ನ ಸರ್ವೆ ಕಾರ್ಯ ಆರಂಭಗೊಂಡಿದ್ದು, ಮೂರು ತಿಂಗಳಿಗೂ ಹೆಚ್ಚು ಕಾಲ ಮುಂದುವರಿದಿದೆ. ಎಎಸ್‌ಐನ 40 ಸದಸ್ಯರ ತಂಡವು ಸಮೀಕ್ಷೆಯಲ್ಲಿ ನೆಲದ ಮೂಲ ರಾಡಾರ್ ವ್ಯವಸ್ಥೆ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಸಹಾಯವನ್ನು ಪಡೆದುಕೊಂಡಿದೆ. ನೂತನ ತಂತ್ರಜ್ಞಾನ ಬಳಸಿ ಜ್ಞಾನವಾಪಿ ಕಾಂಪ್ಲೆಕ್ಸ್ ಹಾಗೂ ಗುಮ್ಮಟ, ಮೇಲ್ಭಾಗ ಸೇರಿದಂತೆ ನೆಲಮಾಳಿಗೆಯಲ್ಲಿ ನಿರ್ಮಿಸಿರುವ ರಚನೆಗಳನ್ನು ಅಳತೆ ಮಾಡಿ ವಿಸ್ತೃತ ವರದಿ ಸಿದ್ಧಪಡಿಸಲಾಗಿದೆ. ಹೈದರಾಬಾದ್ ಮತ್ತು ಕಾನ್ಪುರದ ತಜ್ಞರೂ ಇದಕ್ಕೆ ಕೊಡುಗೆ ನೀಡಿದ್ದಾರೆ. ಸಮೀಕ್ಷೆಯಲ್ಲಿ 3ಡಿ ಛಾಯಾಗ್ರಹಣ ಮತ್ತು ಸ್ಕ್ಯಾನಿಂಗ್ ಜೊತೆಗೆ ಡಿಜಿಟಲ್ ಮ್ಯಾಪಿಂಗ್ ಕೂಡ ಮಾಡಲಾಗಿದೆ.

ಕುರುಹು ಸಿಕ್ಕಿರುವ ವದಂತಿ ನಿಲ್ಲಿಸದಿದ್ದರೆ ಗ್ಯಾನವಾಪಿ ಮಸೀದಿ ಸರ್ವೇಗೆ ಬಹಿಷ್ಕಾರ: ಮುಸ್ಲಿಮರ ಬೆದರಿಕೆ

ಸಮೀಕ್ಷೆಯಲ್ಲಿ ಮುರಿದ ಪ್ರತಿಮೆಗಳು, ಹಿಂದೂ ಚಿಹ್ನೆಗಳು ಮತ್ತು ಆಕೃತಿಗಳು ಇತ್ಯಾದಿಗಳು ಕಂಡುಬಂದಿವೆ ಎಂದು ಹೇಳಲಾಗಿದೆ, ಆದರೆ ಮುಸ್ಲಿಂ ಕಡೆಯವರು ಇದನ್ನು ನಿರಾಕರಿಸಿದರು ಮತ್ತು ಸಮೀಕ್ಷೆಯಲ್ಲಿ ಕಂಡುಬಂದಿರುವ ಆಪಾದಿತ ವಿಷಯಗಳನ್ನು ಮಾಧ್ಯಮದ ಹೊರಗೆ ಪ್ರಸಾರ ಮಾಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಬಳಿಕ ನ್ಯಾಯಾಲಯ ಕೂಡ ಅಧಿಕಾರಿಗಳಿಗೆ ಅದೇ ಆದೇಶ ನೀಡಿತ್ತು. ನಿರ್ಧಾರಕ್ಕೆ ಮುನ್ನ ಗೌಪ್ಯತೆಯನ್ನು ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿದೆ.

ಗ್ಯಾನವಾಪಿ ಮಸೀದಿಯಲ್ಲಿ ಮೂರ್ತಿಗಳ ಅವಶೇಷ ಪತ್ತೆ, ಸರ್ವೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು