ಜಡ್ಜ್‌ಗಳ ನೇಮಕ ವಿಳಂಬ: ಕೇಂದ್ರ ಸರ್ಕಾರದ ಬಗ್ಗೆ Supreme Court ಗರಂ

Published : Nov 12, 2022, 08:52 AM ISTUpdated : Nov 12, 2022, 08:57 AM IST
ಜಡ್ಜ್‌ಗಳ ನೇಮಕ ವಿಳಂಬ: ಕೇಂದ್ರ ಸರ್ಕಾರದ ಬಗ್ಗೆ Supreme Court ಗರಂ

ಸಾರಾಂಶ

ಜಡ್ಜ್‌ಗಳ ಹೆಸರು ತಡೆಹಿಡಿದ ಕೇಂದ್ರದ ಬಗ್ಗೆ ಸುಪ್ರೀಂ ಸಿಟ್ಟು ವ್ಯಕ್ತಪಡಿಸಿದೆ. ಶಿಫಾರಸು, ಮರುಶಿಫಾರಸು ಮಾಡಿದರೂ ಒಪ್ಪುತ್ತಿಲ್ಲ, ಇಂತಹ ನಡವಳಿಕೆ ಒಪ್ಪಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಕೀಲರ ಸಂಘದ ಅರ್ಜಿ ವಿಚಾರಣೆ ವೇಳೆ ಈ ರೀತಿ ಆಕ್ರೋಶ ವ್ಯಕ್ತಪಡಿಸಿದೆ. 

ನವದೆಹಲಿ: ಉನ್ನತ ನ್ಯಾಯಾಂಗದಲ್ಲಿ (Higher Judiciary) ಖಾಲಿ ಇರುವ ಜಡ್ಜ್‌ಗಳ (Judges) ಹುದ್ದೆ ಭರ್ತಿಗೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ (Collegium) ಅರ್ಹರ ಹೆಸರು ಶಿಫಾರಸು ಹಾಗೂ ಮರುಶಿಫಾರಸು ಮಾಡಿದರೂ ಒಪ್ಪಿಗೆ ನೀಡದೆ ಕೇಂದ್ರ ಸರ್ಕಾರ (Central Government) ತಡೆಹಿಡಿಯುತ್ತಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ನಡವಳಿಕೆಯನ್ನು ಒಪ್ಪಲಾಗದು ಎಂದು ಎಚ್ಚರಿಕೆ ನೀಡಿದೆ. ‘ನ್ಯಾಯಾಧೀಶ ಹುದ್ದೆಗೆ ನೇಮಕಗೊಳ್ಳಲು  ವ್ಯಕ್ತಿಗಳು ಸಮ್ಮತಿ ನೀಡಿರುತ್ತಾರೆ. ಆದರೆ ಶಿಫಾರಸಾದ ಹೆಸರುಗಳನ್ನು ಈ ರೀತಿ ತಡೆಹಿಡಿಯುತ್ತಿರುವುದು ಆ ವ್ಯಕ್ತಿಗಳು ತಮ್ಮ ಸಮ್ಮತಿಯನ್ನು ಅನಿವಾರ್ಯವಾಗಿ ಹಿಂಪಡೆಯುವಂತೆ ಮಾಡುವ ಒಂದು ರೀತಿಯ ಸಾಧನದಂತಾಗಿಬಿಟ್ಟಿದೆ. ಶಿಫಾರಸಾದ ಹೆಸರುಗಳನ್ನು ಸುಖಾಸುಮ್ಮನೆ ತಡೆಹಿಡಿಯುತ್ತಿರುವುದನ್ನು ಒಪ್ಪಲಾಗದು’ ಎಂದು ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಹಾಗೂ ಎ.ಎಸ್‌. ಓಕಾ ಅವರಿದ್ದ ಪೀಠ ಹೇಳಿದೆ. ಈ ಸಂಬಂಧ ಕಾನೂನು ಸಚಿವಾಲಯದ ಕಾರ್ಯದರ್ಶಿಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

ಏನಿದು ಪ್ರಕರಣ?:
‘ಹೈಕೋರ್ಟ್‌ ಜಡ್ಜ್‌ಗಳ (High Court Judges) ನೇಮಕಾತಿಯಲ್ಲಿ (Appointment) ತುಂಬಾ ವಿಳಂಬವಾಗುತ್ತಿದೆ. ಇದರಿಂದ ಸ್ವತಂತ್ರ ನ್ಯಾಯಾಂಗ ಎಂಬ ಭಾವನೆಗೆ ಕುಂದುಂಟಾಗುತ್ತಿದೆ. ಜಡ್ಜ್‌ ಹುದ್ದೆಗೆ ಯಾವುದೇ ವ್ಯಕ್ತಿ ಹೆಸರನ್ನು ಕೊಲಿಜಿಯಂ ಒಮ್ಮತದಿಂದ ಮರುಶಿಫಾರಸು ಮಾಡಿದ 3 - 4  ವಾರಗಳಲ್ಲಿ ಕೇಂದ್ರ ಸರ್ಕಾರ ನೇಮಕಾತಿ ಮಾಡಬೇಕು’ ಎಂದು ಕಳೆದ ವರ್ಷ ಏಪ್ರಿಲ್‌ 20ರಂದು ಸುಪ್ರೀಂಕೋರ್ಟ್‌ ಹೇಳಿತ್ತು. ‘ಆದರೆ ಇದನ್ನು ಉದ್ದೇಶಪೂರ್ವಕವಾಗಿ ಜಾರಿ ಮಾಡುತ್ತಿಲ್ಲ. ಈ ವಿಳಂಬ ಧೋರಣೆಯಿಂದ ನ್ಯಾಯಾಧೀಶ ಹುದ್ದೆಗೆ ಶಿಫಾರಸುಗೊಂಡಿದ್ದ ವ್ಯಕ್ತಿಯೊಬ್ಬರು ನೇಮಕಾತಿಗೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ’ ಎಂದು ಬೆಂಗಳೂರು ವಕೀಲರ ಸಂಘ ನ್ಯಾಯಾಲಯದ ಮೊರೆ ಹೋಗಿತ್ತು. ಅದರ ವಿಚಾರಣೆ ವೇಳೆ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

ಇದನ್ನು ಓದಿ: ಏಕಕಾಲಕ್ಕೆ ದಾಖಲೆ 8 ಹೈಕೋರ್ಟ್ ಸಿಜೆಗಳ ನೇಮಕಕ್ಕೆ ಶಿಫಾರಸು

"ಸರ್ಕಾರದಲ್ಲಿ 10 ಹೆಸರುಗಳು ಬಾಕಿ ಇವೆ, ಇದನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಸೆಪ್ಟೆಂಬರ್ 4, 2021 ರಿಂದ ಜುಲೈ 18, 2022 ರವರೆಗೆ ಪುನರುಚ್ಚರಿಸಿದೆ" ಎಂದು ಪೀಠ ಹೇಳಿದೆ. ಮರುಶಿಫಾರಸು ಹೊರತಾಗಿಯೂ ವ್ಯಕ್ತಿಯನ್ನು ನೇಮಕ ಮಾಡದಿರುವ ಪ್ರಕರಣಗಳ ಬಗ್ಗೆ ಸರ್ಕಾರವು ಮರುಪರಿಶೀಲನೆಯನ್ನು ಕೋರಿದೆ ಮತ್ತು ಅದರ ಪರಿಣಾಮವಾಗಿ, ಸಂಬಂಧಪಟ್ಟ ವ್ಯಕ್ತಿ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತು ಮತ್ತು ವ್ಯವಸ್ಥೆಯು "ಪ್ರಖ್ಯಾತ ನಿಯೋಜಿತ ಹಿರಿಯ ವಕೀಲರನ್ನು ಪೀಠದಲ್ಲಿ ಹೊಂದುವ ಅವಕಾಶವನ್ನು ಕಳೆದುಕೊಂಡಿತು" ಎಂದು ಹೇಳಿದೆ.  

ಪೀಠವು ನವೆಂಬರ್ 28 ರಂದು ಈ ವಿಚಾರಣೆಯನ್ನು ಮುಂದೂಡಿದೆ. ಭಾರತದ ಮುಖ್ಯ ನ್ಯಾಯಾಧೀಶರ ನೇತೃತ್ವದ ಕೊಲಿಜಿಯಂನ ಬದ್ಧ ನಿರ್ಧಾರವನ್ನು ಪುನರುಚ್ಚರಿಸಿದ ನಂತರವೂ ಜಾರಿಗೊಳಿಸಲು ವಿಫಲವಾದರೆ, ಸುಪ್ರೀಂಕೋರ್ಟ್‌ನ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸುಪ್ರೀಂಗೆ 9  ಹೊಸ ನ್ಯಾಯಾಧೀಶರು, ಕರ್ನಾಟಕದ ಬಿವಿ ನಾಗರತ್ನ ಹೆಸರು ಫೈನಲ್

ಪ್ರಕ್ರಿಯೆಗೆ ಅನುಕೂಲವಾಗುವಂತೆ ಟೈಮ್‌ಲೈನ್‌ಗಳೊಂದಿಗೆ ಹೊರಬಂದು, ಕೋರ್ಟ್ ಕೊಲಿಜಿಯಂ ಹೆಸರುಗಳನ್ನು ಶಿಫಾರಸು ಮಾಡಿದ ನಂತರ ಕೇಂದ್ರವು ತಕ್ಷಣ ನೇಮಕಾತಿ ಮಾಡಲು ಮುಂದುವರಿಯಬೇಕು ಮತ್ತು ಸರ್ಕಾರವು "ಸೂಕ್ತತೆ ಅಥವಾ ಸಾರ್ವಜನಿಕ ಹಿತಾಸಕ್ತಿ" ಯಲ್ಲಿ ಯಾವುದೇ ಮೀಸಲಾತಿ ಹೊಂದಿದ್ದರೆ ಅದನ್ನು ಹಿಂದಕ್ಕೆ ಕಳುಹಿಸಬಹುದು ಎಂದು ಅದು ಹೇಳಿದೆ. ಇನ್ನು, ಮೀಸಲಾತಿಗಾಗಿ ನಿರ್ದಿಷ್ಟ ಕಾರಣಗಳೊಂದಿಗೆ ಕಾಲೇಜಿಯಂಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಮೂವರ ಹೆಸರು ಶಿಫಾರಸು ಮಾಡಿದ ಸುಪ್ರೀಂ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌