
ನವದೆಹಲಿ(ಮೇ.06): ಸೌಮ್ಯ ರೋಗ ಲಕ್ಷಣ ಇರುವ ಕೊರೋನಾ ಸೋಂಕಿತರಲ್ಲೂ ಆಕ್ಸಿಜನ್ ಸ್ಯಾಚುರೇಷನ್ ಪ್ರಮಾಣ (ರಕ್ತದಲ್ಲಿನ ಆಮ್ಲಜನಕ) ಕುಸಿತವಾಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಎದುರಾಗುತ್ತಿರುವುದಕ್ಕೆ, ಅವರು ಆರಂಭಿಕ ಹಂತದಲ್ಲೇ ಸ್ಟಿರಾಯ್ಡ್ಗಳನ್ನು ಸೇವಿಸುತ್ತಿರುವುದೂ ಕಾರಣವಾಗಿರಬಹುದು ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಸೋಂಕಿತರಿಗೆ ಸೂಕ್ತ ರೀತಿಯ ಔಷಧೋಪಚಾರದ ಬಗ್ಗೆ ಪ್ರತಿಪಾದಿಸಿರುವ ಗುಲೇರಿಯಾ, ಸ್ಟಿರಾಯ್ಡ್ ಬಳಕೆ ಮಾಡಿದ ರೋಗಿಗಳಲ್ಲಿ, ವೈರಸ್ ದ್ವಿಗುಣ ಪ್ರಮಾಣ ಹೆಚ್ಚಳವಿರುವ ಮತ್ತು ಅದರಿಂದಾಗಿ ಅವರ ದೇಹದಲ್ಲಿ ಆಮ್ಲಜನಕ ಮಟ್ಟಕುಸಿಯುತ್ತಿರುವ ಸಂಗತಿ ದೇಶದ ಹಲವು ಆಸ್ಪತ್ರೆಗಳಲ್ಲಿ ಕಂಡುಬಂದಿದೆ.
"
ಸೋಂಕಿನ ಆರಂಭಿಕ ಹಂತದಲ್ಲಿ ಸ್ಟಿರಾಯ್ಡ್ ಪಡೆದುಕೊಳ್ಳುವುದು, ದೇಹದಲ್ಲಿ ವೈರಸ್ ದ್ವಿಗುಣಗೊಳ್ಳುವ ಪ್ರಮಾಣ ಹೆಚ್ಚಳಕ್ಕೆ ಉತ್ತೇಜನ ನೀಡಬಲ್ಲದು. ಇದರ ಪರಿಣಾಮವಾಗಿಯೇ ಸೌಮ್ಯ ಸೋಂಕಿನ ಲಕ್ಷಣ ಹೊಂದಿರುವವರು ನಂತರ ಗಂಭೀರ ಸ್ವರೂಪದ ಸಮಸ್ಯೆಗೆ ತುತ್ತಾಗಿ ನ್ಯುಮೋನಿಯಾಕ್ಕೆ ತುತ್ತಾಗುತ್ತಿದ್ದಾರೆ. ಸೋಂಕಿನ ಮೊದಲ 5 ದಿನಗಳಲ್ಲಿ ಸ್ಟಿರಾಯ್ಡ್ಗಳು ಯಾವುದೇ ಪರಿಣಾಮ ಹೊಂದಿರುವುದಿಲ್ಲ. ಹೀಗಾಗಿ ಸೌಮ್ಯ ಲಕ್ಷಣ ಹೊಂದಿರುವವರು ಯಾವುದೇ ಕಾರಣಕ್ಕೂ ಸ್ಟೆರಾಯ್ಡ್ ಬಳಸಬಾರದು ಮತ್ತು ಸಿ.ಟಿ.ಸ್ಕಾ್ಯನ್ ಮಾಡಿಸಬಾರದು ಎಂದು ಹೇಳಿದ್ದಾರೆ.
ಸಾಧಾರಣ ರೋಗ ಲಕ್ಷಣಗಳಿಂದ ಬಳಲುತ್ತಿರುವವರಿಗೆ ಮೊದಲು ಆಮ್ಲಜನಕ ಚಿಕಿತ್ಸೆಯ ಅಗತ್ಯವಿದೆ. ಒಂದು ವೇಳೆ ಆಮ್ಲಜನಕ ಪ್ರಮಾಣ ಕುಸಿತವಾದಾಗ ಮಾತ್ರ ಸ್ಟಿರಾಯ್ಡ್ ಮಾಡಬೇಕು ಎಂದು ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ