Kharge: ಭಾಷಣ ಮಾಡಿದ ವೇದಿಕೆ ಶುದ್ಧೀಕರಣ ವಿವಾದ: ಸ್ವಪಕ್ಷದಿಂದಲೇ ಬೆಂಬಲ ಸಿಗಲಿಲ್ಲ: ಖರ್ಗೆ ಬೇಸರ

Kannadaprabha News   | Kannada Prabha
Published : Aug 21, 2026, 07:49 AM IST
Stage purification row controversy Kharge disappointed by lack of support from his own party rav

ಸಾರಾಂಶ

ಉತ್ತರಾಖಂಡದಲ್ಲಿ ತಾವು ಸಭೆ ನಡೆಸಿದ ಸ್ಥಳವನ್ನು 'ಶುದ್ಧೀಕರಣ' ಮಾಡಿದ ಘಟನೆಗೆ ಸಂಬಂಧಿಸಿದಂತೆ ಸ್ವಪಕ್ಷದವರಿಂದಲೇ ನಿರೀಕ್ಷಿತ ಬೆಂಬಲ ಸಿಗದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದ್ದೇನು?

ನವದೆಹಲಿ (ಆ.21): ಉತ್ತರಾಖಂಡದಲ್ಲಿ ತಾವು ಸಾರ್ವಜನಿಕ ಸಭೆ ನಡೆಸಿದ ಜಾಗವನ್ನು ಬಲಪಂಥೀಯ ಸಂಘಟನೆಯೊಂದು ‘ಶುದ್ಧೀಕರಣ’ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸ್ವಪಕ್ಷದವರಿಂದಲೇ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC Chief Mallikarjun kharge) ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಖರ್ಗೆ, ಶುದ್ಧೀಕರಣ ಹೋಮ ಮಾಡಿದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡೆಯನ್ನು ಉತ್ತರಾಖಂಡದ ಕಾಂಗ್ರೆಸ್‌ ಘಟಕ ಗಟ್ಟಿಧ್ವನಿಯಲ್ಲಿ ಖಂಡಿಸಿದ್ದನ್ನು ಶ್ಲಾಘಿಸಿದರು.

ಚೆನ್ನಾಗಿ ಬರೆಯುವವರು ಮತ್ತು ಚೆನ್ನಾಗಿ ಕಾಣುವವರು ಈ ಘಟನೆಯ ಬಗ್ಗೆ ಮಾತೇ ಆಡಲಿಲ್ಲ’

ಆದರೆ ಇದೇ ವೇಳೆ, ‘ಚೆನ್ನಾಗಿ ಬರೆಯುವವರು ಮತ್ತು ಚೆನ್ನಾಗಿ ಕಾಣುವವರು ಈ ಘಟನೆಯ ಬಗ್ಗೆ ಮಾತೇ ಆಡಲಿಲ್ಲ’ ಎಂದು ಲಘು ಶೈಲಿಯಲ್ಲಿ ಹೇಳಿದರು. ಈ ಮೂಲಕ ತಮ್ಮ ಪಕ್ಷದಲ್ಲೇ ಪತ್ರಿಕೆಗಳಲ್ಲಿ ಲೇಖನ ಬರೆಯುವ ಹಾಗೂ ‘ಚೆನ್ನಾಗಿ ಕಾಣುವ’ ಕೆಲವು ನಾಯಕರ ಬಗ್ಗೆ ಅವರು ಚಾಟಿ ಬೀಸಿದರು ಎಂದು ಮೂಲಗಳು ಹೇಳಿವೆ.

ಜತೆಗೆ, ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಕ್ರಮಣಕಾರಿ ನಿಲುವು ತಳೆಯಬೇಕು ಹಾಗೂ ಜಾತಿ ಆಧರಿತ ತಾರತಮ್ಯದ ವಿರುದ್ಧ ಹೋರಾಡಬೇಕು ಎಂದು ಆಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.

ಖರ್ಗೆ ಅವರು ಉತ್ತರಾಖಂಡದ ರಾಮ್‌ಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ 2 ದಿನಗಳ ಬಳಿಕ ಅಲ್ಲಿ ಶುದ್ಧೀಕರಣ ಹೋಮ ಮಾಡಲಾಗಿತ್ತು. ಇದು ಬಿಜೆಪಿಗರ ಕೆಲಸ ಎಂಬ ಕಾಂಗ್ರೆಸ್‌ನ ಆರೋಪವನ್ನು ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿರಸ್ಕರಿಸಿದ್ದರು. ಜತೆಗೆ ಘಟನೆಯನ್ನು ಖಂಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: ‘ಮೇಕೆದಾಟು ಕಟ್ಟುತ್ತಿರುವುದು ನಮಗಲ್ಲ, ನಿಮಗಾಗಿ’: ಅಮಿತ್ ಶಾ ಸಮ್ಮುಖದಲ್ಲಿ ತಮಿಳುನಾಡಿಗೆ ಡಿ.ಕೆ.ಶಿವಕುಮಾರ್ ಭರವಸೆ!
ನಮ್ಮ ತಂಡದ 3000 ಜನ ಭಾರತದಲ್ಲಿದ್ದಾರೆ; ಮೋದಿ ಸರ್ಕಾರಕ್ಕೆ ಪಾಕ್ ಉಗ್ರ ಶೆಹಜಾಬ್ ಭಟ್ಟಿ ಸವಾಲ್!