ಕೇರಳ ದೇವಸ್ಥಾನದಲ್ಲಿ ನಡೆಯಬೇಕಿದ್ದ 'ಇಫ್ತಾರ್‌ ಪಾರ್ಟಿ' ರದ್ದು ಮಾಡಿದ ಹೈಕೋರ್ಟ್‌!

Published : Mar 27, 2025, 08:50 PM ISTUpdated : Mar 27, 2025, 09:03 PM IST
ಕೇರಳ ದೇವಸ್ಥಾನದಲ್ಲಿ ನಡೆಯಬೇಕಿದ್ದ 'ಇಫ್ತಾರ್‌ ಪಾರ್ಟಿ' ರದ್ದು ಮಾಡಿದ ಹೈಕೋರ್ಟ್‌!

ಸಾರಾಂಶ

ಕೇರಳದ ಶ್ರೀ ಮೃದಂಗ ಶೈಲೇಶ್ವರಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ಇಫ್ತಾರ್ ಕೂಟವನ್ನು ಹೈಕೋರ್ಟ್ ಮಧ್ಯಪ್ರವೇಶದ ನಂತರ ರದ್ದು ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಇಫ್ತಾರ್ ಆಯೋಜನೆಗೆ ವಿರೋಧ ವ್ಯಕ್ತವಾಗಿತ್ತು.

ಕೊಚ್ಚಿ (ಮಾ.27): ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕ ಕೇರಳದ ಶ್ರೀ ಮೃದಂಗ ಶೈಲೇಶ್ವರಿ ದೇವಸ್ಥಾನದ ಸಮಿತಿಯು ಮಾರ್ಚ್ 26 ರಂದು ದೇವಾಲಯದ ಆವರಣದಲ್ಲಿ ನಡೆಯಬೇಕಿದ್ದ ಇಫ್ತಾರ್‌ ಪಾರ್ಟಿಯ ಯೋಜನೆಯನ್ನು ರದ್ದು ಮಾಡಿದೆ. ಶ್ರೀ ಮೃದಂಗ ಶೈಲೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಬೇಕಿದ್ದ "ಸಮೂಹ ನೊಂಬುತುರ" ಮತ್ತು "ಸ್ನೇಹ ಸಂಗಮ" ಕಾರ್ಯಕ್ರಮದ ವಿರುದ್ಧ ಕೇರಳ ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿತ್ತು. ಕೇರಳ ರಾಜ ವರ್ಮ ಪಳಸ್ಸಿ ರಾಜನ ಪೂರ್ವಜ ದೇವತೆ ಶ್ರೀ ಪೋರ್ಕಲಿಯ ದೇವಸ್ಥಾನ ಇದಾಗಿದೆ.

ಹಿಂದೂ ಸೇವಾ ಕೇಂದ್ರ ಮತ್ತು ಬಜರಂಗ ದಳದ ಸದಸ್ಯರು ಈ ಅರ್ಜಿ ಸಲ್ಲಿಕೆ ಮಾಡಿದ್ದರು. ಮಲಬಾರ್ ದೇವಸ್ವಂ ಮಂಡಳಿಯ ನಿಯಂತ್ರಿತ ಮುರ್ದಂಗ ಶೈಲೇಶ್ವರಿ ದೇವಸ್ಥಾನಕ್ಕೆ ಹಿಂದೂಯೇತರರು ಪ್ರವೇಶಿಸುವುದನ್ನು ತಡೆಯಲು ಮತ್ತು ಹಿಂದೂ ಸಾರ್ವಜನಿಕ ಪೂಜಾ ಸ್ಥಳಗಳ (ಪ್ರವೇಶ ಅಧಿಕಾರ) ಕಾಯ್ದೆ, 1965 ರ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅವರು ಆದೇಶ ಹೊರಡಿಸುವಂತೆಯೂ ಕೋರಿದರು. ಹಾಗಿದ್ದರೂ, ಮಲಬಾರ್ ದೇವಸ್ವಂ ಮಂಡಳಿಯು ಮಾರ್ಚ್ 26 ರಂದು ಅರ್ಜಿಯ ನಿಗದಿತ ವಿಚಾರಣೆಯ ದಿನಾಂಕದ ಮೊದಲು ಈ ಕಾರ್ಯಕ್ರಮ ನಡೆಯುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

 

ರಾಜ್ಯ ಸರ್ಕಾರ, ಮಲಬಾರ್ ದೇವಸ್ವಂ, ದೇವಸ್ಥಾನದ ಟ್ರಸ್ಟಿ ಮಂಡಳಿ ಮತ್ತು ಪೋರ್ಕಳಿ ಕಲಶ, ಇಫ್ತಾರ್ ಕೂಟವನ್ನು ಘೋಷಿಸಿದ ದೇವಸ್ಥಾನ ಸಮಿತಿಯು ಅರ್ಜಿಯಲ್ಲಿ ಆರು ಪ್ರತಿವಾದಿಗಳಲ್ಲಿ ಸೇರಿವೆ. ದೇವಸ್ಥಾನದ ವಕೀಲರ ಕಾರ್ಯನಿರ್ವಾಹಕ ಅಧಿಕಾರಿ ನ್ಯಾಯಾಲಯಕ್ಕೆ ಇಂಥ ಇಫ್ತಾರ್‌ ನಡೆಸಲು ಯಾವುದೇ ಅಧಿಕಾರ ನೀಡಲಾಗಿಲ್ಲ ಎಂದು ತಿಳಿಸಿದರು. ಈ ಘೋಷಣೆ ಮಾಡಿದ ಪೋರ್ಕಳಿ ಕಲಶ ಸಮಿತಿಗೆ ಧ್ವಜಸ್ತಂಭವನ್ನು ನಿರ್ಮಿಸುವ ಮತ್ತು "ಪೋರ್ಕಳಿ ಭಗವತಿಯ ಶ್ರೀಕೋವಿಲ್ (ಗರ್ಭಗುಡಿ)"ಯನ್ನು ಪುನಃಸ್ಥಾಪಿಸುವ ಜವಾಬ್ದಾರಿಯನ್ನು ಮಾತ್ರ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ನನ್ನ ಕಪ್ಪುವರ್ಣದ ಬಗ್ಗೆ ನಿಂದನೆ :ಫೇಸ್‌ಬುಕ್‌ನಲ್ಲಿ ಬೇಸರ ಹೊರಹಾಕಿದ ಕೇರಳದ ಮುಖ್ಯ ಕಾರ್ಯದರ್ಶಿ ಶಾರದಾ

ವಿಚಾರಣೆಯ ಆಧಾರದ ಮೇಲೆ, ಹೈಕೋರ್ಟ್ ದೇವಸ್ವಂ ಮಂಡಳಿಗೆ 'ಪೊರ್ಕಳಿ ಕಲಶ ಸಮಿತಿ'ಯ ಚಟುವಟಿಕೆಗಳು ಚಿನ್ನದ ಧ್ವಜಸ್ತಂಭ ಸ್ಥಾಪನೆ ಮತ್ತು ಗರ್ಭಗುಡಿಯ ನವೀಕರಣಕ್ಕೆ ಸೀಮಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವಂತೆ ಆದೇಶಿಸಿತು. ಇದರಿಂದಾಗಿ ಮಾರ್ಚ್ 26 ರಂದು ಸಂಜೆ 6 ಗಂಟೆಗೆ ನಡೆಯಬೇಕಿದ್ದ ಕಮ್ಯುನಿಸ್ಟರು ಯೋಜಿಸಿದ್ದ ಇಫ್ತಾರ್ ಕೂಟವನ್ನು ಈಗ ರದ್ದುಗೊಳಿಸಲಾಗಿದೆ.

ಒಂದೇ ಸಿರಿಂಜ್‌ ಬಳಕೆ: ಕೇರಳದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 9 ಜನರಿಗೆ ಹೆಚ್‌ಐವಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!