60 ಆಗುತ್ತಿದ್ದಂತೆ 'ವಿಶೇಷ ಉದ್ಯೋಗಿ'ಗೆ ನಿವೃತ್ತಿ ನೀಡಿದ ಸ್ಪ್ರೈಟ್

Published : Jul 30, 2022, 06:52 PM ISTUpdated : Jul 31, 2022, 10:17 AM IST
60 ಆಗುತ್ತಿದ್ದಂತೆ 'ವಿಶೇಷ ಉದ್ಯೋಗಿ'ಗೆ ನಿವೃತ್ತಿ ನೀಡಿದ ಸ್ಪ್ರೈಟ್

ಸಾರಾಂಶ

60-62 ಆಗುತ್ತಿದ್ದಂತೆ ಸರ್ಕಾರಿ ಕೆಲಸದಲ್ಲಿರುವವರು ನಿವೃತ್ತಿ ಪಡಯುತ್ತಾರೆ. ಆದರ ಕೋಕಾ ಕೋಲಾ ತಂಪು ಪಾನೀಯ ಸಂಸ್ಥೆಯೂ ಕೂಡ ಈಗ ತನ್ನ ವಿಶೇಷ ಉದ್ಯೋಗಿಗೆ ನಿವೃತ್ತಿ ನೀಡಿದೆ.

60-62 ಆಗುತ್ತಿದ್ದಂತೆ ಸರ್ಕಾರಿ ಕೆಲಸದಲ್ಲಿರುವವರು ನಿವೃತ್ತಿ ಪಡಯುತ್ತಾರೆ. ಆದರ ಕೋಕಾ ಕೋಲಾ ತಂಪು ಪಾನೀಯ ಸಂಸ್ಥೆಯೂ ಕೂಡ ಈಗ ತನ್ನ ವಿಶೇಷ ಉದ್ಯೋಗಿಗೆ ನಿವೃತ್ತಿ ನೀಡಿದೆ. ಯಾರು ಆ ವಿಶೇಷ ಅತಿಥಿ ಅಂತಿರಾ? ಬಾಟಲ್‌ ಕಾಣ್ರೀ. ಕೋಕಾ ಕೋಲಾದ ಸಂಸ್ಥೆಯ ಉತ್ಪನ್ನವಾಗಿರುವ ಸ್ಪ್ರೈಟ್ ತನ್ನ ಸಾಂಪ್ರದಾಯಿಕ ಹಸಿರು ಬಣ್ಣದ ಬಾಟಲ್‌ಗೆ ಗುಡ್‌ ಬೈ ಹೇಳಿದ್ದು, ಅದರ ಬದಲು ನೀರಿನ ಬಣ್ಣದ ಬಾಟಲ್‌ನಲ್ಲಿ ಇನ್ನು ಮುಂದೆ ಸ್ಪ್ರೈಟ್ ವಿತರಣೆ ಮಾಡಲು ನಿರ್ಧರಿಸಿದೆ.

ಸ್ಪ್ರೈಟ್ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾದಾಗಿನಿಂದ ಇದುವರೆಗೂ ಹಸಿರು ಬಣ್ಣದ ಬಾಟಲ್‌ಗಳಲ್ಲೇ ವಿತರಣೆಯಾಗುತ್ತಿತ್ತು. ಆದರೆ ಬಹುಶಃ ಸಂಸ್ಥೆಗೂ ಈ ಬಗ್ಗೆ ಬೋರೆನಿಸಿದೆಯೋ ಏನೋ ಅದು ತನ್ನ ಬಣ್ಣವನ್ನು ಬದಲಿಸಿದೆ. ಇದರ ಹಿಂದೆ ಪರಿಸರದ ಕಾಳಜಿಯ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಸುಸ್ಥಿರ ಅಭಿವೃದ್ಧಿ ಪರ್ಯಾಯವಾಗಿ ಬಿಳಿ ಬಣ್ಣದ ಬಾಟಲಿಯನ್ನು ಬಿಡುಗಡೆಗೊಳಿಸಿದೆ. ಇದು 'ಪ್ಲಾಸ್ಟಿಕ್ ಪ್ಯಾಕೇಜಿಂಗ್‌ಗಾಗಿ ಆರ್ಥಿಕತೆಯನ್ನು ಬೆಂಬಲಿಸಿ' ಈ ನಿರ್ಧಾರ ಕೈಗೊಂಡಿದೆ. 

ಸ್ಪ್ರೈಟ್‌ನ ಹಸಿರು ಬಾಟಲಿಗಳ ಹಸಿರು ಪಾಲಿಎಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಪ್ಯಾಕೇಜಿಂಗ್ ಅನ್ನು ಮರುಬಳಕೆ ಮಾಡಬಹುದಾದರೂ, ಅದನ್ನು ಇತರ ಸ್ಪಷ್ಟ ವಸ್ತುಗಳಿಂದ ಪ್ರತ್ಯೇಕಿಸಲಾಗಿದೆ. ಇದರಿಂದಾಗಿ ಹೊಸ ಬಾಟಲಿಗಳನ್ನು ತಯಾರಿಸಲು ಬಳಸುವ ವೇಳೆ ಇದು ಬಣ್ಣ ಕಳೆದುಕೊಳ್ಳುವುದಿಲ್ಲ. ಹೀಗಾಗಿ ಮರುಬಳಕೆಯ ವಸ್ತುವನ್ನು ಹೆಚ್ಚಾಗಿ ಬಟ್ಟೆ ಮತ್ತು ಕಾರ್ಪೆಟ್‌ಗಳಂತಹ ಏಕ ಬಳಕೆಯ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ, ಅದನ್ನು ಹೊಸ ಪಿಇಟಿ ಬಾಟಲಿಗಳಾಗಿ ಮರುಬಳಕೆ ಮಾಡಲಾಗುವುದಿಲ್ಲ. ಹಸಿರು ಬಣ್ಣದಿಂದ ಸ್ಪಷ್ಟ ತಿಳಿ ಬಣ್ಣಕ್ಕೆ ಬದಲಾಯಿಸುವುದು ಕಷ್ಟಕರ. ಹೀಗಾಗಿ ಕೋಕಾಕೋಲಾ ಸಂಸ್ಥೆ ಬಾಟಲಿಯ ಬಣ್ಣ ಬದಲಾಯಿಸಲು ಮುಂದಾಗಿದೆ. 

ಕೋಕಾ ಕೋಲಾ R3Cycle ಜೊತೆ ಪಾಲುದಾರಿಕೆ ವಹಿಸಿಕೊಂಡಿದೆ. R3Cycle ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಬಾಟಲ್-ಟು-ಬಾಟಲ್ ಮರುಬಳಕೆಯನ್ನು ಕಾರ್ಯಗತಗೊಳಿಸಲು ಮರುಸಂಸ್ಕರಣೆ ಮಾಡುವ ಕಂಪನಿಯಾಗಿದೆ. ಬಣ್ಣವಿಲ್ಲದ ಬಾಟಲ್‌ಗಳ ಮರುಬಳಕೆ  ವಸ್ತುಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು  R3CYCLE ನ ಸಿಇಒ ಜೂಲಿಯನ್ ಓಚೋವಾ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!