
ಹೈದರಾಬಾದ್ (ಡಿ. 10) ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೀವನವನ್ನು ಸೇರಿಸಬೇಕು ಎಂದು ತೆಲಂಗಾಣದ ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಗೆ ಒತ್ತಾಯ ಮಾಡಿದ್ದಾರೆ.
ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿ, ಸೋನಿಯಾ ಗಾಂಧಿಯವರ ಜೀವನವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿದೆ ಎಂದು ತೆಲಂಗಾಣ ಕಾಂಗ್ರೆಸ್ ವಕ್ತಾರ ಡಾ. ಶ್ರವಣ್ ದಾಸೋಜು ತಿಳಿಸಿದ್ದಾರೆ. ಸೋನಿಯಾ ಗಾಂಧಿ 74 ನೇ ಜನ್ಮದಿನದ ಸಂದರ್ಭದಲ್ಲಿ ಇಂಥದ್ದೊಂದು ಒತ್ತಾಯ ಮಾಡಲಾಗಿದೆ.
ಕಾಂಗ್ರೆಸ್ ಬಂಡಾಯ ಶಮನಕ್ಕೆ ಸೋನಿಯಾ ಮಾಡಿದ ಮಾಸ್ಟರ್ ಪ್ಲಾನ್
ಸೋನಿಯಾ ಗಾಂಧಿ ಅವರು ಇಲ್ಲವೆಂದಿದ್ದರೆ ತೆಲಂಗಾಣ ರಾಜ್ಯವೇ ರಚನೆ ಆಗುತ್ತಿರಲಿಲ್ಲ ಎಂದು ರಾವ್ ಅವರು ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದರು. ಹಾಗಾಗಿ ತೆಲಂಗಾಣ ನಿರ್ಮಾಣದ ಹಿಂದೆ ಇರುವ ಸೋನಿಯಾ ಶ್ರಮವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಸೋನಿಯಾ ಅವರ ಈ ಮಹತ್ ಕಾರ್ಯಕ್ಕೆ ಕೆಸಿಆರ್ ಸರ್ಕಾರ ಪ್ರತಿಯಾಗಿ ಏನನ್ನು ನೀಡಿಲ್ಲ. ಸೋನಿಯಾ ಅವರಿಗೆ ನೆನಪಿನಲ್ಲಿ ಉಳಿಯಬುದಾದ ಗಿಫ್ಟ್ ಒಂದನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮುಖಂಡರು ಹೇಳಿದ್ದಾರೆ.
ತೆಲಂಗಾಣದ ಹತ್ತನೇ ತರಗತಿ ಪಠ್ಯದಲ್ಲಿ ತೆಲಂಗಾಣ ರಾಜ್ಯ ನಿರ್ಮಣದದ ಬಗ್ಗೆ ಅಧ್ಯಾಯವೊಂದಿದ್ದು ಅದರಲ್ಲಿ ರಾವ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಇದೆ. ಕಾಂಗ್ರೆಸ್ ಅಥವಾ ಸೋನಿಯಾ ಅವರ ಉಲ್ಲೇಖ ಇಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ