ಖಲಿ​ಸ್ತಾನಿ ಉಗ್ರರ ಜೊತೆ ಕೆಲ ಪತ್ರ​ಕ​ರ್ತರಿಗೆ ಸಂಪ​ರ್ಕ: ಐಬಿ ವರದಿ

Published : Jan 29, 2023, 11:56 AM IST
ಖಲಿ​ಸ್ತಾನಿ ಉಗ್ರರ ಜೊತೆ ಕೆಲ ಪತ್ರ​ಕ​ರ್ತರಿಗೆ ಸಂಪ​ರ್ಕ: ಐಬಿ ವರದಿ

ಸಾರಾಂಶ

ಪ್ರತ್ಯೇಕತಾವಾದಿ ಕೃತ್ಯ ಬೆಂಬಲಿಸುವ ಕೆಲ ಪತ್ರ​ಕ​ರ್ತರು ಹಾಗೂ ಏಜೆ​ನ್ಸಿ​ಗಳ ಜೊತೆಗೆ ಖಲಿ​ಸ್ತಾನಿ ಪರ​ವಾ​ಗಿ​ರುವ ಘಟ​ಕ​ಗಳು ಸಂಪ​ರ್ಕ​ದ​ಲ್ಲಿವೆ ಎಂದು ಪಂಜಾ​ಬ್‌ನ ಗುಪ್ತ​ಚರ ಇಲಾಖೆ ಬಿಡು​ಗಡೆ ಮಾಡಿ​ರುವ ವರದಿಯಲ್ಲಿ ಹೇಳ​ಲಾ​ಗಿದೆ.

ಚಂಡೀ​ಗ​ಢ: ಪ್ರತ್ಯೇಕತಾವಾದಿ ಕೃತ್ಯ ಬೆಂಬಲಿಸುವ ಕೆಲ ಪತ್ರ​ಕ​ರ್ತರು ಹಾಗೂ ಏಜೆ​ನ್ಸಿ​ಗಳ ಜೊತೆಗೆ ಖಲಿ​ಸ್ತಾನಿ ಪರ​ವಾ​ಗಿ​ರುವ ಘಟ​ಕ​ಗಳು ಸಂಪ​ರ್ಕ​ದ​ಲ್ಲಿವೆ ಎಂದು ಪಂಜಾ​ಬ್‌ನ ಗುಪ್ತ​ಚರ ಇಲಾಖೆ ಬಿಡು​ಗಡೆ ಮಾಡಿ​ರುವ ವರದಿಯಲ್ಲಿ ಹೇಳ​ಲಾ​ಗಿದೆ.

‘ಖ​ಲಿ​ಸ್ತಾನಿ ಪರ​ವಾ​ಗಿ​ರುವ ಘಟ​ಕ​ಗಳು ತಮ್ಮ ಆಲೋ​ಚ​ನೆ​ಗಳು ಮತ್ತು ಯೋಜ​ನೆ​ಗ​ಳನ್ನು ಜನ​ರಿಗೆ ತಲು​ಪಿ​ಸಲು ಫೇಸ್‌​ಬುಕ್‌, ಯೂಟ್ಯೂ​ಬ್‌​ನಂತಹ ಸಾಮಾಜಿಕ ಜಾಲ​ತಾ​ಣ​ಗ​ಳನ್ನು ಬಳ​ಸಿ​ಕೊ​ಳ್ಳು​ತ್ತವೆ. ಇದ​ರೊಂದಿಗೆ ಈ ಘಟ​ಕ​ಗಳು ಕೆಲವು ಪತ್ರ​ಕ​ರ್ತರು ಮತ್ತು ನ್ಯೂಸ್‌ ಏಜೆ​ನ್ಸಿ​ಗಳ ಜೊತೆಗೂ ಸಂಪ​ರ್ಕ​ದ​ಲ್ಲಿವೆ. ಇವರು ಖಲಿ​ಸ್ತಾನಿ ಉಗ್ರ​ರನ್ನು ಸಂದ​ರ್ಶನ ಮಾಡಿ ಅದನ್ನು ತಮ್ಮ ಖಾಸಗಿ ಸುದ್ದಿ ವಾಹಿ​ನಿ​ಗ​ಳನ್ನು ಪ್ರಸಾರ ಮಾಡುವ ಮೂಲಕ ಪ್ರಚಾರ ನೀಡು​ತ್ತಿ​ದ್ದಾ​ರೆ ಎಂದು ವರದಿ ತಿಳಿ​ಸಿದೆ. ಅಲ್ಲದೇ ಖಲಿ​ಸ್ತಾನಿ ಪರ​ವಾದ ಘಟ​ಕ​ಗಳು ಇತ್ತೀ​ಚಿಗೆ ಮಾದ​ಕ​ವಸ್ತು, ಶಸ್ತ್ರಾಸ್ತ್ರ ಮತ್ತು ಸ್ಫೋಟ​ಕ​ಗ​ಳನ್ನು ಸಾಗಣೆ ಮಾಡಲು ಸಹ ಆರಂಭಿ​ಸಿವೆ. ಹಾಗೆಯೇ ಆನ್ಲೈ​ನ್‌​ನಲ್ಲಿ ಪ್ರಚಾರ ಮಾಡಿ​ಕೊ​ಳ್ಳುವ ಮೂಲಕ ನಿಧಿ ಸಂಗ್ರ​ಹಣೆ ಮಾಡು​ತ್ತಿದ್ದು, ಅದನ್ನು ಉಗ್ರ ಕೃತ್ಯ​ಗ​ಳಿಗೆ ಬಳ​ಸಿ​ಕೊ​ಳ್ಳ​ಲಾ​ಗು​ತ್ತಿದೆ ಎಂದು ಹೇಳ​ಲಾ​ಗಿದೆ.


ಚಂಡೀಗಢದ ಪಂಜಾಬ್‌ ಸಿಎಂ ನಿವಾಸದ ಬಳಿ ಬಾಂಬ್‌ ಪತ್ತೆ: ಭಾರತೀಯ ಸೇನೆಯಿಂದ ತನಿಖೆ

ಪಂಜಾಬ್‌ನಲ್ಲಿ ಪೊಲೀಸ್ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ