ದೂರು ದಾಖ​ಲಾದ 24 ಗಂಟೆ​ಯ​ಲ್ಲಿ ನಕ​ಲಿ ಖಾತೆ​ ರದ್ದು ಕಡ್ಡಾಯ!

Published : Jun 25, 2021, 08:45 AM IST
ದೂರು ದಾಖ​ಲಾದ 24 ಗಂಟೆ​ಯ​ಲ್ಲಿ ನಕ​ಲಿ ಖಾತೆ​ ರದ್ದು ಕಡ್ಡಾಯ!

ಸಾರಾಂಶ

* ದೂರು ದಾಖ​ಲಾದ 24 ಗಂಟೆ​ಯ​ಲ್ಲಿ ನಕ​ಲಿ ಖಾತೆ​ ಅಳಿ​ಸು​ವುದು ಕಡ್ಡಾಯ * ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಹೊಸ ಕಾನೂನು ಜಾರಿ * ನೂತನ ಐಟಿ ನಿಯ​ಮದ ಅಡಿ​ಯಲ್ಲಿ ಕೇಂದ್ರ ಸರ್ಕಾರ ಆದೇ​ಶ

ನವ​ದೆ​ಹ​ಲಿ(ಜೂ.25): ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ನಕಲಿ ಖಾತೆ​ಗಳಿಗೆ ಕಡಿ​ವಾಣ ಹಾಕುವ ನಿಟ್ಟಿ​ನಿಂದ ದಿಟ್ಟಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಯಾವುದೇ ನಕಲಿ ಖಾತೆಗಳ ಕುರಿತು ದೂರು ದಾಖ​ಲಾದ 24 ಗಂಟೆ​ಗ​ಳಲ್ಲಿ ಪರಿ​ಚಿತ ವ್ಯಕ್ತಿ​ಗಳು ಅಥವಾ ಯಾವುದೇ ಬಳ​ಕೆ​ದಾ​ರ​ರ ಹೆಸ​ರಿ​ನಲ್ಲಿ ತೆರೆ​ಯ​ಲಾದ ನಕಲಿ ಖಾತೆಗ​ಳನ್ನು ಅಳಿ​ಸಿ​ಹಾ​ಕು​ವು​ದನ್ನು ಕಡ್ಡಾ​ಯ​ಗೊ​ಳಿಸಿ ಆದೇಶ ಹೊರ​ಡಿ​ಸಿದೆ.

ನೂತನ ಐಟಿ ನಿಯ​ಮದ ಭಾಗ​ವಾಗಿ ಈ ಆದೇಶ ಹೊರ​ಡಿ​ಸ​ಲಾ​ಗಿದೆ. ಅದ​ರಂತೆ ಟ್ವಿಟರ್‌, ಫೇಸ್‌​ಬುಕ್‌, ಇನ್‌​ಸ್ಟಾ​ಗ್ರಾಮ್‌ ಮತ್ತು ಯೂಟ್ಯೂಬ್‌ನಂತಹ ಸಾಮಾ​ಜಿಕ ಜಾಲ​ತಾ​ಣ​ಗಳು ಪರಿ​ಚಿತ ವ್ಯಕ್ತಿ​ಗಳು, ಉದ್ಯ​ಮಿ​ಗಳು ಹಾಗೂ ಸಾಮಾನ್ಯ ಬಳ​ಕೆ​ದಾ​ರರ ಹೆಸ​ರಿ​ನಲ್ಲಿ ನಕಲಿ ಖಾತೆ​ಗ​ಳನ್ನು ಸೃಷ್ಟಿ​ಸಿ​ರು​ವುದು ಗಮ​ನಕ್ಕೆ ಬಂದರೆ ಅಥವಾ ದೂರು​ಗಳು ದಾಖ​ಲಾ​ದ​ರೆ ಅವು​ಗ​ಳನ್ನು 24 ಗಂಟೆ​ಗಳ ಒಳ​ಗಾಗಿ ಅಳಿ​ಸಿ​ಹಾ​ಕಲು ಕ್ರಮ ಕೈಗೊ​ಳ್ಳ​ಬೇ​ಕು.

ಉದಾ​ಹ​ರ​ಣೆಗೆ ಇನ್ನೊಬ್ಬ ವ್ಯಕ್ತಿ ತಮ್ಮ ಫೋಟೋ​ವ​ನ್ನು ಬಳ​ಸಿ​ಕೊಂಡು ಕಾನೂನು ಬಾಹಿರ ಚಟು​ವ​ಟಿ​ಕೆ​ಯಲ್ಲಿ ತೊಡ​ಗಿ​ರುವ ಬಗ್ಗೆ ಚಿತ್ರ​ನಟ/ನಟಿ​ಯರು, ಕ್ರಿಕೆ​ಟಿಗರು ಅಥವಾ ರಾಜ​ಕಾ​ರಣಿ ಅಥವಾ ಯಾವುದೇ ಬಳ​ಕೆ​ದಾರಿಂದ ದೂರು​ಗಳು ಬಂದರೆ ಸಂಬಂಧಿತ ಜಾಲ​ತಾ​ಣ​ಗಳು ತಕ್ಷ​ಣವೇ ಕ್ರಮ ಕೈಗೊಂಡು ನಕಲಿ ಖಾತೆ​ಗ​ಳನ್ನು ಡಿಲೀಟ್‌ ಮಾಡಬೇಕು.

ಇತ್ತೀ​ಚಿನ ದಿನ​ಗ​ಳಲ್ಲಿ ಸಾಮಾಜಿಕ ಜಾಲ​ತಾ​ಣ​ಗ​ಳಲ್ಲಿ ನಕಲಿ ಖಾತೆ​ಗ​ಳನ್ನು ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡು​ತ್ತಿ​ರು​ವುದು, ಬೆದ​ರಿಕೆ ಸಂದೇ​ಶ​ಗ​ಳನ್ನು ಕಳು​ಹಿ​ಸು​ತ್ತಿ​ರುವ ಪ್ರಕ​ರ​ಣ​ಗಳು ಏರಿಕೆ ಆಗು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲ​ಗಳು ತಿಳಿ​ಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!