
ಬೆಂಗಳೂರು (ಏ.09): ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸರ್ವೇ ಸಾಮಾನ್ಯ. ಆದರೆ, ಇದುವರೆಗೂ ಯಾರೂ ಬಗೆಹರಿಸಲಾಗದ ಈ ಸಮಸ್ಯೆಗೆ ಟಿಕ್ಟಾಕ್ ಬಳಕೆದಾರನೊಬ್ಬ ಪರಿಹಾರ ಕಂಡುಹಿಡಿದಿದ್ದಾನೆ.
ಮ್ಯಾಕ್ಸ್ ಮೆಕ್ಕಾನ್ ಎಂಬಾತ ತರಕಾರಿ ಹೆಚ್ಚುವ ಮಣೆಯ ಪಕ್ಕ ಒದ್ದೆ ಬಟ್ಟೆಯನ್ನು ಇಟ್ಟು ಈರುಳ್ಳಿ ಕಟ್ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ಈರುಳ್ಳಿ ಬೆಲೆ ಭಾರೀ ಇಳಿಕೆ : ಗ್ರಾಹಕರಲ್ಲಿ ಸಂತಸ
ಈತನ ಪ್ರಕಾರ, ಈರುಳ್ಳಿಯಲ್ಲಿರುವ ಆಮ್ಲ ನೀರಿಗೆ ಆಕರ್ಷಿತವಾಗುತ್ತದೆ. ಹೀಗಾಗಿ ಮಣೆಯ ಮೇಲೆ ಒದ್ದೆ ಬಟ್ಟೆಯನ್ನು ಇಟ್ಟು ಈರುಳ್ಳಿ ಕತ್ತರಿಸಿದರೆ ಕಣ್ಣಲ್ಲಿ ನೀರುಬರುವುದಿಲ್ಲ ಎಂಬುದು ಆತನ ವಾದ.
ಈರುಳ್ಳಿಯನ್ನು ಕಣ್ಣಲ್ಲಿ ನೀರು ಬಾರದೇ ಈ ರೀತಿ ಟ್ರಿಕ್ ಬಳಸಿ ಬೇಗನೇ ಕಟ್ ಮಾಡಬಹುದಾಗಿದೆ ಎಂದು ಈತ ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ