
ಮೊನ್ ಮೊನ್ನೆಯಷ್ಟೇ ಶಿವಭಕ್ತರು ಖುಷಿಖುಷಿಯಿಂದ ಹಿಮಾಲಯದ ಕಡೆ ಯಾತ್ರೆ ಶುರುಮಾಡಿದ್ರು.. ಲಕ್ಷಾಂತರ ಜನ, ತಮ್ಮ ಜೀವನದ ಅಪೂರ್ವ ಕ್ಷಣ ಸಾರ್ಥಕಗೊಳಿಸಿಕೊಳ್ಳೋಕೆ, ಹೊರಟು ನಿಂತ್ರು.. ಆದ್ರೆ ಅವರು ಆ ಹಿಮಪರ್ವತದ ನಡುವೆ ಅದೇನು ನೋಡಬೇಕು ಅಂತ ಹೊರಟಿದ್ರೋ, ಅದು ಕಾಣಿಸಿಕೊಳ್ಳೋಕೇ ರೆಡಿ ಇಲ್ಲ.. ಹಾಗೆ ದರ್ಶನ ಕೊಡದೆ ಮೌನವಾಗಿದ್ದು ಅಮರನಾಥದಲ್ಲಿ ನೆಲೆನಿಂತ ಪರಮೇಶ್ವರನ ಹಿಮಲಿಂಗ.. ಹೌದು.. ನೀವು ಕೇಳಿಕೊಂಡಿದ್ದು ಸತ್ಯ.. ಆ ಅದ್ಭುತ ಗುಹೆಯೊಳಗೆ ಇರಬೇಕಿದ್ದ ಶಿವಲಿಂಗವೇ ಕಣ್ಮರೆಯಾಗಿದೆ.. ಅದಕ್ಕೆ ಕಾರಣ ಏನು? ಕಾರಣವಾಗಿದ್ದು ಯಾರು? ಪರಮೇಶ್ವರ ಕೊಟ್ಟ ಪ್ರಳಯದ ಸುಳಿವು ಎಂಥಾದ್ದು?
ಅಂಥಾ ದುರ್ದಿನಗಳು ಬಾರದೇ ಇರ್ಲಿ.. ಆದ್ರೆ ಅದಕ್ಕಿಂತಾ ಮುಖ್ಯವಾಗಿ, ಹಿಮಾಲಯ ಈಗ ಏನಾಗಿದೆ ಗೊತ್ತಾ? ನಮಗೆ ಕಣ್ಣಿಗೆ ಎದ್ದು ಕಾಣ್ತಾ ಇರೋದೇನೋ, ಅಮರನಾಥದ ಹಿಮಲಿಂಗದ ಕತೆ ಮಾತ್ರ.. ಆದ್ರೆ ಇದು ಅಷ್ಟಕ್ಕೆ ಮಾತ್ರವೇ ಸೀಮಿತವಾದ ಕತೆ ಅಲ್ಲ.
ಅಮರನಾಥದ ಗುಹೆಯ ಹೊರಗೆ ಭಯೋತ್ಪಾದನೆಯ ವಿರುದ್ಧ ಹೋರಾಡಲು ಲಕ್ಷಾಂತರ ಭದ್ರತಾ ಸಿಬ್ಬಂದಿಯನ್ನು ಇಟ್ಟಿದ್ದೇವೆ.. ಆದರೆ, ಗುಹೆಯ ಒಳಗಿನ ತಾಪಮಾನದ ವಿರುದ್ಧದ ಯುದ್ಧದಲ್ಲಿ ನಾವು ಸೋಲುತ್ತಿದ್ದೇವೆ ಅನ್ನೋದು ಕಹಿ ಸತ್ಯ.. ಅಂದ್ ಹಾಗೆ, ಈ ರೀತಿ ಅಮರನಾಥದ ಹಿಮಲಿಂಗ ಧಿಡೀರ್ ಅಂತ ಕರಗಿದ್ದು ಇದೇ ಮೊದಲೇನೂ ಅಲ್ಲ.. ಈ ಹಿಂದೆಯೂ ಇದೇ ಥರ ಆಗಿತ್ತು.
ಕಾಶ್ಮೀರದ ಆ ಮಂಜಿನ ಸೌಂದರ್ಯ ಇವತ್ತು ದೊಡ್ಡ ಅಪಾಯದಲ್ಲಿದೆ.. ಕೇವಲ ಶಿವಲಿಂಗ ಕರಗೋದನ್ನೇ ನೋಡಿ ಆತಂಕ ಪಡೋ ಬದಲು, ಹಿಮಾಲಯ ಇವತ್ತು ನಮಗೆ ಕೊಡ್ತಿರೋ ಎಚ್ಚರಿಕೆಯನ್ನ ಅರ್ಥ ಮಾಡ್ಕೊಳ್ಬೇಕಿದೆ..