
ಬಾರಾಮತಿ (ಮಾರ್ಚ್ 15, 2023): ಪುಣೆಯಲ್ಲಿ ಕುಸ್ತಿಪಟು ಹೃದಯಾಘಾತದಿಂದ ಮೃತಪಟ್ಟ ಕೆಲವೇ ದಿನಗಳಲ್ಲಿ, 10ನೇ ತರಗತಿ ವಿದ್ಯಾರ್ಥಿನಿ ಮಾರ್ಚ್ 12 ರಂದು ಪುಣೆಯ ಇಂದಾಪುರದಲ್ಲಿ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಾಳೆ. ಮೃತಳನ್ನು ಇಂದಾಪುರದ ಸೃಷ್ಟಿ ಏಕದ್ (16) ಎಂದು ಗುರುತಿಸಲಾಗಿದೆ. ಈಕೆ ಇಂದಾಪುರದ ನಾರಾಯಣದಾಸ್ ರಾಮದಾಸ್ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಮಾರ್ಚ್ 13 ರಂದು ಈಕೆಯ ಕೊನೆಯ ಪರೀಕ್ಷೆ ಇತ್ತು. ಅಷ್ಟರಲ್ಲಾಗಲೇ ಆಕೆ ಕುಸಿದು ಬಿದ್ದಳು. ಆಕೆಯ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಳು.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack) ಪ್ರಕರಣ ಇದೇ ಮೊದಲಲ್ಲ. ಹೃದಯಾಘಾತದಿಂದ ಯುವಕರು ಕುಸಿದು ಬಿದ್ದು ಸಾಯುತ್ತಿರುವ ಹಲವಾರು ವಿಡಿಯೋಗಳು (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿವೆ.
ಇದನ್ನು ಓದಿ: ಕೋವಿಡ್ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು
ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಮಿತಿಗಿಂತ ಹೆಚ್ಚಿನ ಓಜೋನ್ (Ozone) ಮಟ್ಟ ಇರುವುದು ಹೃದಯಾಘಾತಕ್ಕೆ ಕಾರಣ ಆಗುತ್ತಿವೆ ಎಂದು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಯ (European Society of Cardiology) ಪ್ರಕಟಣೆಯಾದ ಯುರೋಪಿಯನ್ ಹಾರ್ಟ್ ಜರ್ನಲ್ (European Heart Journal) ಇತ್ತೀಚೆಗೆ ವರದಿ ಮಾಡಿತ್ತು. ಹೃದಯಾಘಾತ, ಹೃದಯ ಸ್ತಂಭನ, ಪಾರ್ಶ್ವವಾಯುಗೆ ಕೂಡ ಓಝೋನ್ ಸಾಂದ್ರತೆ ಕಾರಣವಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ, ಹೃದಯದ ಆರೋಗ್ಯಕ್ಕಿಲ್ಲ ವಯಸ್ಸಿನ ಮಿತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ