ಔರಂಗಬಾದ್ ಬದಲು ಸಂಬಾಜಿ ನಗರ; ಹೆಸರು ಬದಲಾವಣೆಗೆ ಕಾಂಗ್ರೆಸ್-ಶಿವಸೇನೆಯಲ್ಲಿ ಬಿರುಕು?

Published : Jan 01, 2021, 09:31 PM IST
ಔರಂಗಬಾದ್ ಬದಲು ಸಂಬಾಜಿ ನಗರ; ಹೆಸರು ಬದಲಾವಣೆಗೆ ಕಾಂಗ್ರೆಸ್-ಶಿವಸೇನೆಯಲ್ಲಿ ಬಿರುಕು?

ಸಾರಾಂಶ

ನಗರ, ಪಟ್ಟಣ, ದಾರಿ ಹೆಸರು ಬದಲಾಯಿಸುವುದರಲ್ಲಿ ಉತ್ತರ ಪ್ರದೇಶ ಸರ್ಕಾರ ಮುಂದಿದೆ. ಇದೀಗ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಮೈತ್ರಿ ಪಕ್ಷ ಶಿವಸೇನೆ ಈ ರೀತಿಯ ಹೆಜ್ಜೆ ಇಟ್ಟಿದೆ. ಆದರೆ ಶಿವಸೇನೆ ನಿರ್ಧಾರಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.

ಮುಂಬೈ(ಜ.01):  ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿಯಲ್ಲಿ ಒಡಕು ಮೋಡಿದೆಯಾ ಅನ್ನೋ ಅನುಮಾನ ಬಲವಾಗುತ್ತಿದೆ. ಇದೀಗ ಹೆಸರು ಬದಲಾವಣೆ ವಿಚಾರದಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ಮನಸ್ತಾಪಕ್ಕೆ ಕಾರಣವಾಗಿದೆ. ಮುಂಬೈನಿಂದ 361 ಕಿ.ಮೀ ದೂರದಲ್ಲಿರುವ ಔರಂಗಬಾದ್ ನಗರದ ಹೆಸರನ್ನು ಬದಲಿಸಲು ಶಿವಸೇನೆ ಮುಂದಾಗಿದೆ.

ರೈತರ ಪ್ರತಿಭಟನೆ ನಡುವೆ ಸದ್ದು ಮಾಡಿದ ಶಿವಸೇನಾ ನಾಯಕನ ಸರ್ಜಿಕಲ್ ಸ್ಟ್ರೈಕ್!

ಛತ್ರಪತಿ ಶಿವಾಜಿ ಮಹರಾಜ್ ಪುತ್ರ ಸಂಬಾಜಿ ಮಹರಾಜ್ ಈಗಿನ ಔರಂಗಬಾದ್ ನಗರ ಆಳುತ್ತಿದ್ದ. ಆದರೆ ಮೊಘಲ್ ದೊರೆ ಔರಂಗಬೇಜ್  ದಾಳಿ ಮಾಡಿ ಸಂಪೂರ್ಣ ಕೊಳ್ಳೆ ಹೊಡೆದಿದ್ದ. ಬಳಿಕ ಈ ನಗರಕ್ಕೆ ಔರಂಗಬಾದ್ ಎಂದು ಮರುನಾಮಕರಣ ಮಾಡಿದ್ದ. ಬಳಿಕ ಇದು ಔರಂಗಬಾದ್ ನಗರ ಎಂದೇ ಪ್ರಖ್ಯಾತಿಗೊಂಡಿದೆ. ಇದೀಗ ಶಿವಸೇನೆ ಇದೇ ಔರಂಗಬಾದ್ ನಗರವನ್ನು ಸಂಬಾಜಿ ನಗರ್ ಎಂದು ಮರುನಾಮಕರಣ ಮಾಡಲು ಮುಂದಾಗಿದೆ.

ಕರಾಚಿ ಸ್ವೀಟ್ಸ್ ಮಳಿಗೆ ಹೆಸರು ಬದಲಿಸಲು ಶಿವಸೇನಾ ನಾಯಕನ ಧಮ್ಕಿ, ವಿಡಿಯೋ ವೈರಲ್.

ಶಿವಸೇನೆ ಪ್ರಸ್ತಾವನೆಗೆ ಮೈತ್ರಿ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಉತ್ತರ ಪ್ರದೇಶ ಸರ್ಕಾರದ ಈ ನಡೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಇದೀಗ ತಮ್ಮದೇ ಸರ್ಕಾರ ಈ ಬದಲಾವಣೆಗೆ ಮುಂದಾದರೆ ಕಾಂಗ್ರೆಸ್ ಇಬ್ಬಗೆಯ ನಿಲುವು ಪಕ್ಷಕ್ಕೆ ಮುಳುವಾಗಬಹುದು ಎಂದು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಔರಂಗಾಬಾದ್ ನಗರ ಪಾಲಿಕೆ ಚುನಾವಣೆಗೆ ಸನಿಹದಲ್ಲಿ ಈ ರೀತಿಯ ಹೆಸರು ಬದಲಾವಣೆ ರಾಜಕೀಯ ನಡೆಯುತ್ತಲೇ ಇದೆ. ಈ ಹಿಂದೆ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಪಕ್ಷವಿದ್ದಾಗಲೂ ಇದೇ ರೀತಿಯ ಪ್ರಯತ್ನ ನಡೆದಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ