
ಮುಂಬೈ(ನ.25): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಶಿವಸೇನೆ, ಎನ್’ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸಭೆ ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್’ನಲ್ಲಿ ನಡೆಯುತ್ತಿದೆ.
ಮೂರೂ ಪಕ್ಷಗಳ ಒಟ್ಟು 162 ಶಾಸಕರು ಸಭೆಗೆ ಹಾಜರಿದ್ದು, ಒಂದರ್ಥದಲ್ಲಿ ಗ್ರ್ಯಾಂಡ್ ಹೋಟೆಲ್’ನಲ್ಲಿ ಶಾಸಕರ ಪರೇಡ್ ನಡೆಯುತ್ತಿದೆ.
ಚಂಬಲ್ ಡಕಾಯಿತರು: ಬಿಜೆಪಿಗೆ ಸಂಜಯ್ ರಾವುತ್ ಬೈದರು!
ಈಗಾಗಲೇ ಗ್ರ್ಯಾಂಡ್ ಹಯಾತ್ ಹೋಟೆಲ್’ನಲ್ಲಿ ಮೂರೂ ಪಕ್ಷಗಳ ಪ್ರಮುಖ ನಾಯಕರು ಬಂದಿಳಿದಿದ್ದು, ಮೂರೂ ಪಕ್ಷಗಳ ಶಾಸಕರನ್ನು ಬಸ್’ನಲ್ಲಿ ಹೋಟೆಲ್’ಗೆ ಕರೆತರಲಾಯಿತು.
ವಿ ಆರ್ 162 ಹೆಸರಲ್ಲಿ ಸಭೆ ನಡೆಯುತ್ತಿದ್ದು, ಶಿವಸೇನೆಯ ಆದಿತ್ಯ ಠಾಕ್ರೆ, ಎನ್’ಸಿಪಿಯ ಸುಪ್ರಿಯಾ ಸುಳೆ ಹಗೂ ಇತರ ಪ್ರಮುಖ ನಾಯಕರು ಸಭೆಯ ಕೇಂದ್ರಬಿಂದುವಾಗಿ ಕಾಣಿಸಿಕೊಂಡಿದ್ದಾರೆ.
ಮತ್ತೊಂದು ದಿನ ಫಡ್ನವೀಸ್ ಸರ್ಕಾರ ಸೇಫ್, ನಾಳೆ ಸುಪ್ರೀಂ ಅಂತಿಮ ತೀರ್ಪು!
ಒಟ್ಟಿನಲ್ಲಿ ಹೋಟೆಲ್ ಹಯಾತ್ ಸಭೆ ಬಿಜೆಪಿಗೆ ನೇರ ಸಂದೇಶ ಕಳುಹಿಸಿದ್ದು, ಬಹುಮತ ಸಾಬೀತುಪಡಿಸುವುದು ಅಷ್ಟು ಸುಲಭವಲ್ಲ ಎಂಬ ಸಂದೇಶ ಕೇಸರಿ ಪಕ್ಷಕ್ಕೆ ರವಾನಿಸಿದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ