ನನ್ನ ಕಾಡಿದ 7 ಪ್ರೇತಾತ್ಮ ನಾಶಕ್ಕೆ ಮತ್ತೆ ಹುಟ್ಟುತ್ತೇನೆ ಎಂದು ಬದುಕು ಅಂತ್ಯಗೊಳಿಸಿದ ಯುವಕ!

Published : Sep 24, 2024, 11:42 PM IST
ನನ್ನ ಕಾಡಿದ 7 ಪ್ರೇತಾತ್ಮ ನಾಶಕ್ಕೆ ಮತ್ತೆ ಹುಟ್ಟುತ್ತೇನೆ ಎಂದು ಬದುಕು ಅಂತ್ಯಗೊಳಿಸಿದ ಯುವಕ!

ಸಾರಾಂಶ

ಏಳು ಪ್ರೇತಾತ್ಮ, ದೆವ್ವಗಳು ನನ್ನು ಕಾಡುತ್ತಿದೆ. ಹೀಗಾಗಿ ನಾನು ಈ ಜನ್ಮದ ದೇಹ ತೊರೆಯುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ಮತ್ತೆ ಮೂಲ ದೇಹಕ್ಕೆ ಹಿಂದಿರುಗುತ್ತೇನೆ. ಅದು ನನಗೆ ಕಾಟ ನೀಡಿದವರ ಸರ್ವನಾಶ ಖಚಿತ ಎಂದು ಬರೆದಿಟ್ಟು 28ರ ಹರೆಯುದ ಯುವಕ ಬದುಕು ಅಂತ್ಯಗೊಳಿಸಿದ್ದಾನೆ. ಈತನ ನೋಟ್‌ನಲ್ಲಿ ಏನೇನಿದೆ?

ಭೋಪಾಲ್(ಸೆ.24) ಒಂದಲ್ಲ ಎರಡಲ್ಲ 7 ಪ್ರೇತಾತ್ಮ, ದೆವ್ವಗಳು ನನಗೆ ಬೆಂಬಿಡದೆ ಕಾಟ ಕೊಡುತ್ತಿದೆ. ಇದರ ಜೊತೆ ಕೆಲವರು ನನಗೆ ತೊಂದರೆ ಕೊಟ್ಟಿದ್ದಾರೆ. ಹೀಗಾಗಿ ಈ ಜನ್ಮದ ಬದುಕು ಅಂತ್ಯಗೊಳಿಸುತ್ತಿದ್ದೇನೆ. ಆದರೆ ಮುಂದಿನ ಜನ್ಮದಲ್ಲಿ ಮತ್ತೆ ಬರುತ್ತೇನೆ, ನನಗೆ ಕಾಟ ನೀಡಿದವರ ಸರ್ವನಾಶ ಮಾಡುತ್ತೇನೆ ಎಂದು ಬರೆದಿಟ್ಟು 28ರ ಹರೆಯದ ಯುವಕ ಬದುಕು ಅಂತ್ಯಗೊಳಿಸಿದ ಘಟನೆ ಮಧ್ಯಪ್ರದೇಶದ ಖುಷಿಪುರಾದಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲೇ ಈತ ಬದಕು ಅಂತ್ಯಗೊಳಿಸಿದ್ದಾನೆ.

ಈತ ಕೊಳೆತ ಶವವನ್ನು ಪೊಲೀಸರು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಗಿಸಿ ಮೃತನ ಸಹೋದರಿಗೆ ಹಸ್ತಾಂತರಿಸಿದ್ದಾರೆ. ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಘಟನೆ ಕುರಿತು ಎಂಪಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತನನ್ನು ತರುಣ್ ಶರ್ಮಾ ಎಂದು ಗುರುತಿಸಲಾಗಿದೆ. ಶಹಪುರ ಗ್ರಾಮದ ನಿವಾಸಿಯಾಗಿರುವ ಈತ ಭೋಪಾಲ್‌ನಲ್ಲಿ ಕೆಲಸದ ನಿಮಿತ್ತ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಡುರಾತ್ರಿ ಏಕಾಏಕಿ ಫ್ಯಾನ್ ತಿರುಗಿ, ಗೊಂಬೆ ಚಲಿಸಿದಾಗ... ಭಯಾನಕ ಅನುಭವ ತೆರೆದಿಟ್ಟ ನಟ ವಿಶ್ವಾಸ್​ ​

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶರ್ಮಾ, ತನಗೆ 7 ದೆವ್ವಗಳು, ಪ್ರೇತಾತ್ಮಗಳು ಕಾಟ ನೀಡುತ್ತಿದೆ ಎಂದು ನೋಟ್‌ನಲ್ಲಿ ಹೇಳಿಕೊಂಡಿದ್ದಾನೆ. ದೆವ್ವಗಳ ಕಾಟಗಳಿಂದ ನಾನು ಬಳಲಿದ್ದೇನೆ. ನನ್ನನ್ನು ಬದುಕಲು ಈ ದೆವ್ವಗಳು ಬಿಡುತ್ತಿಲ್ಲ. ಇದರ ಜೊತೆಗೆ ಕೆಲವರು ನನಗೆ ಕಾಟ ನೀಡಿದ್ದಾರೆ. ಈ ಜನ್ಮದಲ್ಲಿ ನಾನು ದೇಹ ತೊರೆಯುತ್ತಿದ್ದೇನೆ. ಆದರೆ ಮುಂದಿನ ಜನ್ಮದಲ್ಲಿ ಮತ್ತೆ ಮೂಲ ದೇಹ ಸೇರಿಕೊಳ್ಳುತ್ತೇನೆ. ಈ ದೆವ್ವಗಳ ಕಾಟವನ್ನು ಅಂತ್ಯಗೊಳಿಸುತ್ತೇನೆ ಎಂದು ನೋಟ್‌ನಲ್ಲಿ ಬರೆದುಕೊಂಡಿದ್ದಾನೆ. 

ಶರ್ಮಾ ಕಳೆದ  ವರ್ಷ ಪೋಷಕರನ್ನು ಕಳೆದುಕೊಂಡಿದ್ದ. ತರುಣ್ ಶರ್ಮಾ ಹಾಗೂ ಈತನ ಸಹೋದರಿ ಪೋಷಕರಿಲ್ಲದೆ ಕಂಗಾಲಾಗಿದ್ದರು. ತರುಣ್ ಶರ್ಮಾ ಸಹೋದರಿ ಅಜ್ಜಿ ಆರೈಕೆಯಲ್ಲಿದ್ದಾಳೆ. ಆದರೆ ಪೋಷಕರ ಅಗಲಿಕೆಯಿಂದ ತರುಣ್ ಶರ್ಮಾ ತೀವ್ರವಾಗಿ ನೊಂದಿದ್ದಾನೆ. ಮಾನಸಿಕವಾಗಿ ಬಳಲಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಕಳೆದ ಮೂರು ನಾಲ್ಕು ತಿಂಗಳಿನಿಂದ ಮನೆಗೆ ಮರಳಿದ್ದರೂ ಸ್ವಭಾವದಲ್ಲಿ ಕೆಲ ಬದಲಾವಣೆಗಳಾಗಿತ್ತು. ಪೋಷಕರ ಅಗಲಿಕೆಯ ನೋವಿನಿಂದ ಹೊರಬರಲು ತರುಣ್ ಶರ್ಮಾಗೆ ಸಾಧ್ಯವಾಗಿರಲಿಲ್ಲ ಎಂದು ಸಹೋದರಿ ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತರುಣ್ ಶರ್ಮಾ ಫೋನ್‌ನಲ್ಲಿರುವ ಕಾಲ್ ಲಿಸ್ಟ್ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಪಡೆದಿದ್ದಾರೆ. ಸಾವಿನ ಹಿಂದೆ ಬೇರೆ ಕಾರಣವಿದೆಯಾ ಅನ್ನೋದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಭೂತ ಪ್ರೇತಗಳು ಯಾರನ್ನ ತುಂಬಾ ಕಾಡುತ್ತೆ? ಇಲ್ಲಿದೆ ಪ್ರೇತಾತ್ಮಗಳ ಕುರಿತು ಇಂಟ್ರೆಸ್ಟಿಂಗ್ ವಿಷ್ಯ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ