ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ

Published : Apr 08, 2026, 03:05 PM IST
TVK Vijay

ಸಾರಾಂಶ

ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ, 234 ಸ್ಥಾನಗಳ ಪೈಕಿ ಇದೀಗ ಚುನನಾವಣೆ, ಫಲಿತಾಂಶಕ್ಕೂ ಮೊದಲೇ ಟಿವಿಕೆ ಒಂದು ಸ್ಥಾನ ಕಳೆದುಕೊಂಡಿದೆ. 

ಚೆನ್ನೈ (ಏ.08) ಪಂಚ ರಾಜ್ಯಗಳ ಚುನಾವಣೆ ಕಾವು ಜೋರಾಗುತ್ತಿದೆ. ನಾಳೆ (ಏ.09) ಕರ್ನಾಟಕದಲ್ಲಿ ಎರಡು ಕ್ಷೇತ್ರಗಳ ಉಪಚುನಾವಣೆ ಹಾಗೂ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಈ ಪೈಕಿ ತಮಿಳುನಾಡು ವಿಧನಾಸಭೆ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿದೆ. ಇಲ್ಲೀವೆಗೆ ಡಿಎಂಕೆ, ಎಐಡಿಎಂಕೆ ಸೇರಿದಂತೆ ಕೆಲ ಪಕ್ಷಗಳ ನಡುವಿನ ಹೋರಾಟ ಇದೀಗ ವಿಸ್ತರಣೆಗೊಂಡಿದೆ. ಒಂದೆಡೆ ಬಿಜೆಪಿ ಶೇಕಡಾವಾರು ಮತದಲ್ಲಿ ಕೆಲ ಬದಲಾವಣೆ ತರಲಿದೆ. ಆದರೆ ನಟ ವಿಜಯ್ ಜೊಸೆಫ್ ನೇತೃತ್ವದ ಟಿವಿಕೆ ಪಕ್ಷ ಭಾರಿ ಬದಲಾವಣೆಯ ನಿರೀಕ್ಷೆಯಲ್ಲಿದೆ. ಚುನಾವಣೆ ಕಾವು ಏರುತ್ತಿದ್ದಂತೆ ಟಿವಿಕೆ ಪಕ್ಷಕ್ಕೆ ಹಿನ್ನಡೆಯಾಗಿದೆ. ತಮಿಳುನಾಡು ಚುನಾವಣೆ ನಡೆದಿಲ್ಲ, ಆದರೆ ಚುನಾವಣೆಗೂ ಮೊದಲೇ ಟಿವಿಕೆ ಒಂದು ಸ್ಥಾನ ಕಳೆದುಕೊಂಡಿದೆ.

ನಟ ಜೊಸೆಫ್ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ ತಮಿಳುನಾಡು ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಹಿನ್ನಡೆ ಎದುರಿಸಿದೆ. ತಮಿಶುನಾಡಿನ ಎಡಪ್ಪಾಡಿ ವಿಧಾನಸಭಾ ಕ್ಷೇತ್ರವನ್ನು ಟಿವಿಕೆ ಪಕ್ಷ ಕಳೆದುಕೊಂಡಿದೆ. ಈ ಕ್ಷೇತ್ರದಲ್ಲಿ ಟಿವಿಕೆ ಪಕ್ಷದಿಂದ ಅರುಣ್ ಕುಮಾರ್ ಎಂ ನಾಪತ್ರ ಸಲ್ಲಿಸಿದ್ದರು. ಆದರೆ ಈ ನಾಮಪತ್ರ ತಿರಸ್ಕೃತಗೊಂಡಿದೆ. ಸಹಿ ವಿಚಾರದಲ್ಲಿ ಅರುಣ್ ಕುಮಾರ್ ಎಂ ನಾಪತ್ರ ತಿರಸ್ಕೃತವಾಗಿದೆ. ಮುಖ್ಯ ಅಭ್ಯರ್ಥಿ ನಾಮಪತ್ರದಲ್ಲಿ ಸಮಸ್ಯೆಗಳು ಎದುರಾಗದೆ ಎಂದು ಎರಡನೇ ಅಭ್ಯರ್ಥಿಯಾಗಿ ನಿತ್ಯಾ ಅವರನ್ನು ಟಿವಿಕೆ ಕಳಣಕ್ಕಿಳಿಸಿತ್ತು. ಆದರೆ ನಿತ್ಯಾ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ.

ಚುನಾವಣೆಗೂ ಮೊದಲೇ ಎಡಪ್ಪಾಡಿಯಲ್ಲಿ ಟಿವಿಕೆಗೆ ಸೋಲು

ಚುನಾವಣೆ ನಡೆದಿಲ್ಲ. ಪ್ರಚಾರ ನಡೆಯುತ್ತಿರವಾಗಲೇ ಟಿವಿಕೆ ಪಕ್ಷ ಎಡಪ್ಪಾಡಿ ಕ್ಷೇತ್ರದಲ್ಲಿ ಸೋಲು ಕಂಡಿದೆ. ಟಿವಿಕೆ ಪಕ್ಷದ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ. ಪ್ರತಿ ನಾಮಪತ್ರದಲ್ಲಿ ಕನಿಷ್ಠ 10 ಮಂದಿ ಸಹಿ ಹಾಕಿರಬೇಕು. ಆದರೆ ಅರುಣ್ ಕುಮಾರ್ ನಾಪತ್ರದಲ್ಲಿ 7 ಮಂದಿ ಹಾಗೂ ನಿತ್ಯ ನಾಮಪತ್ರದಲ್ಲಿ 7 ಮಂದಿ ಸಹಿ ಹಾಕಿದ್ದಾರೆ. ಕೆಲ ಪ್ರಮುಖ ಮಾಹಿತಿ ಭರ್ತಿ ಮಾಡದ ಕಾರಣ ಚುನಾವಣಾ ಆಯೋಗ ನಾಮಪತ್ರವನ್ನು ತಿರಸ್ಕೃತಗೊಳಿಸಿದೆ.

ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಕ್ಷೇತ್ರ

ಎಜಪ್ಪಾಡಿ ವಿಧಾನಸಭಾ ಕ್ಷೇತ್ರ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರಮುಖ ನಾಯಕ ಎಡಪ್ಪಾಡಿ ಕೆ ಪಳನಿ ಅವರ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. ಈ ಬಾರಿ ತ್ರಿಕೋನ ಸ್ಪರ್ಧೆಯಿಂದ ಮತಗಳು ಹಂಚಿಕೆಯಾಗಲಿದೆ. ಇದರಿಂದ ಎಡಪ್ಪಾಡಿ ಕ್ಷೇತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಚುನಾವಣೆಗೂ ಮೊದಲೆ ಟಿಕೆಟ್ ಪಕ್ಷದ ಒಂದು ವಿಕೆಟ್ ಉರುಳಿದೆ.

ಅಭ್ಯರ್ಥಿಗಳು ಮಿಸ್ಸಿಂಗ್

ಇತ್ತ ನಾಮಪತ್ರ ತಿರಸ್ಕೃತಗೊಂಡ ಶಾಕ್‌ನಿಂದ ಟಿವಿಕೆ ಪಕ್ಷ ಚೇತರಿಸಿಕೊಳ್ಳುವ ಮೊದಲೇ ಇದೀಗ ಟಿವಿಕೆಯ ಇಬ್ಬರು ಅಭ್ಯರ್ಥಿಗಳಾದ ಅರುಣ್ ಕುಮಾರ್ ಹಾಗೂ ನಿತ್ಯ ನಾಪತ್ತೆಯಾಗಿದ್ದಾರೆ. ಟಿವಿಕೆ ಪಕ್ಷದ ಅಭ್ಯರ್ಥಿಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲವ್​ ಜಿಹಾದ್​ಗೆ ಒಳಗಾಗಿದ್ದ Miss India Earth ನಾಪತ್ತೆ! ಹಿಂದೂ ಧರ್ಮಕ್ಕೆ ವಾಪಸಾದ ಬೆನ್ನಲ್ಲೇ ನಿಗೂಢ ಕಣ್ಮರೆ
ಅಮೆರಿಕದಲ್ಲಿ ಕೋಮಾದಲ್ಲಿದ್ದ ಭಾರತೀಯ ಮಹಿಳೆ ನಿಧನ; ಸಾವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ನೀಲಂ