ಕೊರೋನಾ ಪ್ರಭಾವ: ಶಾಲೆಗಳಲ್ಲೂ ಸಮ-ಬೆಸ ವ್ಯವಸ್ಥೆ?

Published : May 09, 2020, 09:46 AM IST
ಕೊರೋನಾ ಪ್ರಭಾವ: ಶಾಲೆಗಳಲ್ಲೂ ಸಮ-ಬೆಸ ವ್ಯವಸ್ಥೆ?

ಸಾರಾಂಶ

ಕೊರೋನಾ ಪ್ರಭಾವ: ಶಾಲೆಗಳಲ್ಲೂ ಸಮ-ಬೆಸ ವ್ಯವಸ್ಥೆ? ದಿನಕ್ಕೆ ಶೇ.50 ಮಕ್ಕಳು ಮಾತ್ರ ಶಾಲೆಗೆ ಬರಬೇಕು | ಕ್ಲಾಸ್‌ರೂಮಲ್ಲಿ ಸಾಮಾಜಿಕ ಅಂತರ ಕಾಯಲು ಈ ಕ್ರಮ | ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಚಿಂತನೆ | ಶೀಘ್ರ ಈ ಬಗ್ಗೆ ಘೋಷಣೆ ಸಾಧ್ಯತೆ

ನವದೆಹಲಿ  (ಮೇ. 09): ಕೊರೋನಾ ವೈರಸ್‌ ಶಿಕ್ಷಣ ವ್ಯವಸ್ಥೆ ಮೇಲೂ ಕರಿನೆರಳು ಬೀರಿದೆ. ಈಗಾಗಲೇ ಅನೇಕ ಪರೀಕ್ಷೆಗಳು ರದ್ದಾಗಿವೆ ಅಥವಾ ಮುಂದೂಡಿಕೆಯಾಗಿವೆ. ಜೂನ್‌ನಿಂದ ಆರಂಭವಾಗಲಿರುವ ಮುಂಬರುವ ಶೈಕ್ಷಣಿಕ ವರ್ಷದ ಮೇಲೂ ವೈರಾಣುವಿನ ಛಾಯೆ ಮೂಡುವ ಅತಂಕ ಎದುರಾಗಿದೆ.

ಇದಕ್ಕೆಂದೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವೈರಾಣು ಹರಡುವಿಕೆ ತಡೆಗೆ ಯೋಜನೆ ರೂಪಿಸುವ ಬಗ್ಗೆ ಚಿಂತನೆ ನಡೆಸಿದೆ. ಅದು ‘ಸಮ-ಬೆಸ’ ವ್ಯವಸ್ಥೆ.

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ಅಂದರೆ ಒಂದು ದಿನಕ್ಕೆ ಕೇವಲ ಶೇ.50 ರಷ್ಟುವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬರುವಂತೆ ನೋಡಿಕೊಳ್ಳುವುದು. ಈ ದಿನ ಶಾಲೆಗೆ ಹಾಜರಾದ ಮಕ್ಕಳು ಮರುದಿನ ಮನೆಯಲ್ಲಿರುತ್ತಾರೆ. ಈ ದಿನ ಮನೆಯಲ್ಲಿದ್ದ ಮಕ್ಕಳು ಮರುದಿನ ಶಾಲೆಗೆ ಬರುತ್ತಾರೆ. ಇದರಿಂದ ಶಾಲೆಯಲ್ಲಿ ಜನಸಂದಣಿ ತಪ್ಪಿದಂತಾಗಿ ಶಾಲಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಂತಾಗುತ್ತದೆ ಎಂಬುದು ಸಚಿವಾಲಯದ ಚಿಂತನೆ. ಈಗಾಗಲೇ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಪರಿಷತ್ತು) ಜತೆ ಈ ಬಗ್ಗೆ ಸಚಿವಾಲಯ ಚರ್ಚೆ ನಡೆಸಿದೆ.

ಆದರೆ ಸಮ-ಬೆಸ ವ್ಯವಸ್ಥೆಯನ್ನು ದಿನದ ಬದಲು ವಾರದ ಆಧಾರದಲ್ಲಿ ಮಾಡಬೇಕು ಎಂದೂ ಸರ್ಕಾರದ ಮುಂದೆ ಇರುವ ಇನ್ನೊಂದು ಚಿಂತನೆ. ಅಂದರೆ ಒಂದು ವಾರ ಶೇ.50 ಮಕ್ಕಳು ಮನೆಯಲ್ಲಿದ್ದರೆ, ಉಳಿದ ಮಕ್ಕಳು ಆ ವಾರ ಶಾಲೆಗೆ ಬರಬೇಕು. ಮನೆಯಲ್ಲಿದ್ದ ಮಕ್ಕಳು ಮುಂದಿನ ವಾರ ಶಾಲೆಗೆ ಬರಬೇಕು ಎಂಬದೂ ಆ ಚಿಂತನೆ.

ಶಾಲಾ ಕಾಲೇಜುಗಳನ್ನು ಯಾವಾಗ ಆರಂಭಿಸಬೇಕು ಎಂದು ಘೋಷಿಸುವ ಸಂದರ್ಭದಲ್ಲಿ ‘ಸಮ-ಬೆಸ’ ವ್ಯವಸ್ಥೆ ಬಗ್ಗೆ ಕೂಡ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ರೀತಿ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ಗಮನ ಇಡಲೂ ಅನುವಾಗುತ್ತದೆ ಎಂಬುದು ಸರ್ಕಾರದ ಅನಿಸಿಕೆ. ಅಲ್ಲದೆ, ಆನ್‌ಲೈನ್‌ ಮೂಲಕ ಹಾಗೂ ಟೀವಿ ಮೂಲಕ ಕಲಿಕೆಗೂ ಎನ್‌ಸಿಇಆರ್‌ಟಿ ಯೋಜನೆ ಸಿದ್ಧಪಡಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ