
ಹಲ್ದಾವನಿ/ನವದೆಹಲಿ: ಉತ್ತರಾಖಂಡದ ಹಲ್ದಾವನಿಯಲ್ಲಿ 29 ಎಕರೆ ರೈಲ್ವೆ ಭೂಮಿಯ ಒತ್ತುವರಿ ತೆರವು ಮಾಡುವಂತೆ ಅಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಅಲ್ಲಿನ ನಿವಾಸಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯನ್ನು ಇಂದು ಕೋರ್ಟ್ ವಿಚಾರಣೆ ನಡೆಸಲಿದೆ. ಹಲ್ದಾವನಿಯಲ್ಲಿನ 29 ಎಕರೆ ಜಮೀನು ತನ್ನದಾಗಿದ್ದು ಇಲ್ಲಿರುವ 4000 ಮನೆಗಳ ತೆರವಿಗೆ ರೈಲ್ವೆ ಮುಂದಾಗಿತ್ತು. ಇದಕ್ಕೆ ಹೈಕೋರ್ಟ್ ಕೂಡ ಅಸ್ತು ಎಂದಿತ್ತು. ಜ.9ರ ಒಳಗೆ ಜಾಗ ಖಾಲಿ ಮಾಡುವಂತೆ ಜಿಲ್ಲಾಡಳಿತ ನಿವಾಸಿಗಳಿಗೆ ಸೂಚಿಸಿತ್ತು.
ಆದರೆ, 4000 ಮನೆಗಳ ನಿವಾಸಿಗಳು ಮನೆಗಳ ಧ್ವಂಸದ (House demolition) ವಿರುದ್ಧ ತೀವ್ರ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ತಾವು ಮನೆ ಮಾತ್ರವಲ್ಲದೆ ಗುತ್ತಿಗೆ ಜಮೀನನ್ನೂ ಹೊಂದಿದ್ದು ಅಲ್ಲಿ ಒಟ್ಟು 4 ಸರ್ಕಾರಿ ಶಾಲೆಗಳು, 11 ಖಾಸಗಿ ಶಾಲೆಗಳು, 1 ಬ್ಯಾಂಕ್, 2 ಬೃಹತ್ ನೀರಿನ ಟ್ಯಾಂಕ್ಗಳು, 10 ಮಸೀದಿಗಳು, 4 ದೇವಾಲಯಗಳು ಹಾಗೂ ಹಲವಾರು ಅಂಗಡಿಗಳನ್ನು ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಈ ಜಾಗ ರೈಲ್ವೆಗೆ ಸೇರಿದ್ದು ಹಾಗೂ ಈ ಒತ್ತುವರಿ ಮಾಡಿರುವುದು ಎಂದು ಜಿಲ್ಲಾಡಳಿತ ಹೈಕೋರ್ಟ್ಗೆ ಹೇಳಿತ್ತು.
ಹಿಜ್ಬುಲ್ ಉಗ್ರ ಅಮೀರ್ನ ಮನೆ ಧ್ವಂಸಗೊಳಿಸಿದ ಜಮ್ಮು ಕಾಶ್ಮೀರ ಸರ್ಕಾರ
ಮದುವೆಗೆ ನಿರಾಕರಿಸಿದ ಯುವತಿಯ ಥಳಿಸಿದವನ ಮನೆ ಧ್ವಂಸ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ